AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಳ ಮಹಾತ್ಮೆ! ಮನೆಯಲ್ಲಿ ಫ್ರಿಡ್ಜ್, ಸೋಫಾ ಸೆಟ್, ಟಿವಿಯನ್ನು ಆ ಜಾಗದಲ್ಲಿಟ್ಟಿದ್ದೀರಾ? ಹಾಗಾದರೆ ಈ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿ

Vastu Shastra: ಯಾರಿಗೆ ಆಗಲಿ ಸ್ವಂತ ಮನೆ ಬೇಕು ಎಂಬ ಭಾವನೆ, ಆಶಯ ಇರುತ್ತದೆ. ನಿಮ್ಮದು ಅಂತಾ ಸ್ವಂತ ಮನೆ ಇದ್ದರೆ ಎಷ್ಟೇ ಚಿಕ್ಕದಾದರೂ ಅದು ಭದ್ರತೆಯ ಭಾವ ತರುತ್ತದೆ. ಮನೆಯೆಂದರೆ ಬರೀ ಇಷ್ಟೇ ಅಲ್ಲ. ಮನೆಯಲ್ಲಿ ವಾಸ್ತು ಶಾಸ್ತ್ರದ ಅಂಶಗಳನ್ನು ಪಾಲಿಸುವುದು ಶುಭಪ್ರದವಾಗಿರುತ್ತದೆ. ಅದು ಹೇಗೆ ಇಲ್ಲಿ ತಿಳಿಯೋಣ

ಸ್ಥಳ ಮಹಾತ್ಮೆ! ಮನೆಯಲ್ಲಿ ಫ್ರಿಡ್ಜ್, ಸೋಫಾ ಸೆಟ್, ಟಿವಿಯನ್ನು ಆ ಜಾಗದಲ್ಲಿಟ್ಟಿದ್ದೀರಾ? ಹಾಗಾದರೆ ಈ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿ
ಸ್ಥಳ ಮಹಾತ್ಮೆ! ಮನೆಯಲ್ಲಿ ಫ್ರಿಡ್ಜ್, ಸೋಫಾ ಸೆಟ್, ಟಿವಿಯನ್ನು ಆ ಜಾಗದಲ್ಲಿಟ್ಟಿದ್ದೀರಾ? ಹಾಗಾದರೆ ಈ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿImage Credit source: decoist.com
TV9 Web
| Updated By: ಸಾಧು ಶ್ರೀನಾಥ್​|

Updated on: Sep 02, 2022 | 6:08 PM

Share

ಯಾರಿಗೆ ಆಗಲಿ ಸ್ವಂತ ಮನೆ ಬೇಕು ಎಂಬ ಭಾವನೆ, ಆಶಯ ಇರುತ್ತದೆ. ನಿಮ್ಮದು ಅಂತಾ ಸ್ವಂತ ಮನೆ ಇದ್ದರೆ ಎಷ್ಟೇ ಚಿಕ್ಕದಾದರೂ ಅದು ಭದ್ರತೆಯ ಭಾವ ತರುತ್ತದೆ. ಅದಕ್ಕಾಗಿ ಕಷ್ಟಪಟ್ಟು ಸ್ವಂತ ಮನೆ ಕಟ್ಟಿಕೊಳ್ಳುತ್ತಾರೆ. ಇನ್ನು ಹೊರತಾಗಿ, ಮನೆ ಎಂಬುದು ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳೆಂದರೆ ಅದರ ರಚನೆ, ಮನೆಯಲ್ಲಿ ಜೋಡಿಸಲಾದ ವಸ್ತುಗಳ ಸ್ಥಳ ಇವೆಲ್ಲಾ ಪ್ರಾಮುಖ್ಯತೆ ಪಡೆಯುತ್ತವೆ.

ಅಷ್ಟೇ ಏಕೆ.. ಮನೆ ನಿರ್ಮಾಣದಲ್ಲಿ ಏನೋ ದೋಷವಿದೆ ಎಂಬ ಭಾವನೆ ಉದ್ಭವವಾದಾಗ ಮನೆ ಮಂದಿ ಜ್ಯೋತಿಷಿಗಳು ಮತ್ತು ವಾಸ್ತು ತಜ್ಞರನ್ನು ಸಂಪರ್ಕಿಸುತ್ತಾರೆ. ಏಕೆಂದರೆ… ಮನೆ ಕಟ್ಟುವಾಗ ವಾಸ್ತು ಶಾಸ್ತ್ರದ ಅಂಶಗಳನ್ನು ಗಮನಿಸಬೇಕು. ಇದು ನಮ್ಮ ಸಂತೋಷ, ಸಂಪತ್ತು ಮತ್ತು ಅದೃಷ್ಟಕ್ಕೆ ಸಂಬಂಧಿಸಿದ ವಿಷಯವಾಗಿದೆ. ಅದಕ್ಕೆ ಮನೆ ನಿರ್ಮಾಣಕ್ಕೆ ವಿಶೇಷ ಗಮನ ನೀಡಬೇಕು. ಇನ್ನು, ಮನೆ ನಿರ್ಮಾಣದ ನಂತರ ಫ್ರಿಜ್, ಸೋಫಾ, ಬೆಡ್ ಇತ್ಯಾದಿಗಳನ್ನು ಎಲ್ಲಿ ಇಡಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದರ ಸ್ಥಳ ಮಹಾತ್ಮೆ, ವಿಶೇಷತೆಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.

  • ಮನೆಯಲ್ಲಿ ಪೀಠೋಪಕರಣಗಳನ್ನು ಎಲ್ಲಿ ಇಡಬೇಕು… ಮನೆಯಲ್ಲಿ ಹಗುರವಾದ ಮತ್ತು ಭಾರವಾದ ಪೀಠೋಪಕರಣಗಳನ್ನು ಜೋಡಿಸಿಡಲು ವಾಸ್ತು ಶಾಸ್ತ್ರವು ಕೆಲವು ನಿಯಮಗಳನ್ನು ನಿರ್ದಿಷ್ಟಪಡಿಸಿದೆ. ಬೆಳಕಿನ ಪೀಠೋಪಕರಣಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ದೊಡ್ಡ ಗಾತ್ರದ, ದೊಡ್ಡ ಪೀಠೋಪಕರಣಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಆದರೆ ಇವುಗಳನ್ನು ಅಳವಡಿಸುವಾಗ ಆಧಾರ ಕಂಬ ಅಡ್ಡಬಾರದಂತೆ ಎಚ್ಚರ ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ.. ಡ್ರಾಯಿಂಗ್ ರೂಂನಲ್ಲಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಸೋಫಾ, ದಿವಾನ್ ವ್ಯವಸ್ಥೆ ಮಾಡಬೇಕು.
  • ಮನೆಯಲ್ಲಿ ಫ್ರೀಜ್​ ಎಲ್ಲಿ ಸ್ಥಾಪಿಸಬೇಕು… ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಫ್ರಿಜ್ ಇರಿಸಲು ಉತ್ತಮವಾದ ದಿಕ್ಕು ವಾಯವ್ಯ ದಿಕ್ಕು. ಹಾಗೆಯೇ ಆಗ್ನೇಯ ದಿಕ್ಕು ಸಹ ಸಮಂಜಸವೇ.
  • ಟಿವಿ ಮತ್ತು ದೂರವಾಣಿಯನ್ನು ಎಲ್ಲಿ ಇಡಬೇಕು… ವಾಸ್ತು ಶಾಸ್ತ್ರದ ಪ್ರಕಾರ ಡ್ರಾಯಿಂಗ್ ರೂಮಿನ ಅಂದವನ್ನು ಹೆಚ್ಚಿಸಲು ಟಿವಿ ಸೆಟ್ ಮತ್ತು ದೂರವಾಣಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಜೋಡಿಸಬೇಕು. ಈ ಎರಡು ವಸ್ತುಗಳನ್ನು ಈಶಾನ್ಯದಲ್ಲಿ ಇಡಬಾರದು.
  • ಮನೆಯಲ್ಲಿ ಕನ್ನಡಿಯನ್ನು ಎಲ್ಲಿ ಇಡಬೇಕು… ವಾಸ್ತು ಪ್ರಕಾರ ಕನ್ನಡಿಯನ್ನು ಯಾವಾಗಲೂ ಮನೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಈ ಎರಡು ದಿಕ್ಕುಗಳಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳುವುದು ಮಂಗಳಕರ ಎನ್ನುತ್ತಾರೆ ತಜ್ಞರು. ಆದರೆ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಹಾಕಬೇಡಿ. ಹಾಗೆ ಮಾಡಿದರೆ ಸಂಸಾರದಲ್ಲಿ ಜಗಳಗಳು ಉಂಟಾಗುತ್ತವೆ. ಅಸಲಿಗೆ ಮನೆಗಳಲ್ಲಿ ಒಂದು ಕನ್ನಡಿಯ ಮುಂದೆ ಇನ್ನೊಂದು ಕನ್ನಡಿಯನ್ನು ಇಡಲೇಬೇಡಿ.
  • ಮನೆಯಲ್ಲಿ ಔಷಧಿಗಳನ್ನು ಎಲ್ಲಿ ಇಡಬೇಕು… ಔಷಧಗಳನ್ನು ಇಡುವ ಪ್ರಮುಖ ನಿಯಮವನ್ನು ಸಹ ವಾಸ್ತು ಶಾಸ್ತ್ರ ಉಲ್ಲೇಖಿಸಿದೆ. ಅದರಂತೆ ಔಷಧಿಗಳು ಅಥವಾ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಯಾವಾಗಲೂ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ವಾಸ್ತು ಪ್ರಕಾರ.. ದಕ್ಷಿಣ ದಿಕ್ಕಿನಲ್ಲಿ ಅಥವಾ ಅಡುಗೆಮನೆಯಲ್ಲಿ ಔಷಧಗಳನ್ನು ಮರೆತು ಸಹ ಇಡಬೇಡಿ. ಅದೇ ರೀತಿ ಔಷಧಗಳನ್ನು ಹಾಸಿಗೆಯ ಪಕ್ಕದಲ್ಲಿಯೂ ಇಡಬಾರದು.

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!