ರೈಲ್ವೆ ಹಳಿಗಳ ಮೇಲೆ ನಿದ್ರಿಸಿ, ರಾತ್ರೋರಾತ್ರಿ ಮಸಣ ಸೇರಿದ 17 ಮಂದಿ

ಮಹಾರಾಷ್ಟ್ರ: ಔರಂಗಾಬಾದ್‌ ಜಿಲ್ಲೆ ಕಾರ್ಮಡ್ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಔರಂಗಾಬಾದ್‌ನ ಜಲ್ನಾ ರೈಲ್ವೆ ಮಾಗರ್ದ ಟ್ರ್ಯಾಕ್ ಬಳಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹಾದುಹೋಗಿ 17 ವಲಸೆ ಕಾರ್ಮಿಕರ ಮೃತಪಟ್ಟಿದ್ದಾರೆ. ಹಾಗೂ ಐವರಿಗೆ ಗಂಭೀರ ಗಾಯಗಳಾಗಿವೆ. ಲಾಕ್​ಡೌನ್ ಹಿನ್ನೆಲೆ ಕೆಲಸವಿಲ್ಲದೆ ಊರುಗಳಿಗೆ ಹೊರಟಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಸ್ವಗ್ರಾಮಗಳಿಗೆ ಹೊರಟಿದ್ದರು. ಈ ವೇಳೆ ನಡೆದು ನಡೆದು ಸುಸ್ತಾಗಿ ರೈಲು ಹಳಿ ಮೇಲೆ ಮಲಗಿದ್ದ ಬಡಪಾಯಿಗಳ ಮೇಲೆ ಗೂಡ್ಸ್ ರೈಲು ಹರಿದಿದೆ. ಈ ಪರಿಣಾಮ 17 […]

ರೈಲ್ವೆ ಹಳಿಗಳ ಮೇಲೆ ನಿದ್ರಿಸಿ, ರಾತ್ರೋರಾತ್ರಿ ಮಸಣ ಸೇರಿದ 17 ಮಂದಿ
ಸಾಧು ಶ್ರೀನಾಥ್​

Updated on: May 08, 2020 | 9:10 AM

ಮಹಾರಾಷ್ಟ್ರ: ಔರಂಗಾಬಾದ್‌ ಜಿಲ್ಲೆ ಕಾರ್ಮಡ್ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಔರಂಗಾಬಾದ್‌ನ ಜಲ್ನಾ ರೈಲ್ವೆ ಮಾಗರ್ದ ಟ್ರ್ಯಾಕ್ ಬಳಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹಾದುಹೋಗಿ 17 ವಲಸೆ ಕಾರ್ಮಿಕರ ಮೃತಪಟ್ಟಿದ್ದಾರೆ. ಹಾಗೂ ಐವರಿಗೆ ಗಂಭೀರ ಗಾಯಗಳಾಗಿವೆ.

ಲಾಕ್​ಡೌನ್ ಹಿನ್ನೆಲೆ ಕೆಲಸವಿಲ್ಲದೆ ಊರುಗಳಿಗೆ ಹೊರಟಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಸ್ವಗ್ರಾಮಗಳಿಗೆ ಹೊರಟಿದ್ದರು. ಈ ವೇಳೆ ನಡೆದು ನಡೆದು ಸುಸ್ತಾಗಿ ರೈಲು ಹಳಿ ಮೇಲೆ ಮಲಗಿದ್ದ ಬಡಪಾಯಿಗಳ ಮೇಲೆ ಗೂಡ್ಸ್ ರೈಲು ಹರಿದಿದೆ. ಈ ಪರಿಣಾಮ 17 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತಪಟ್ಟ 17 ಮಂದಿಯಲ್ಲಿ ಮಕ್ಕಳು ಕೂಡ ಇದ್ದರು. ಮೃತರೆಲ್ಲ ಛತ್ತೀಸ್ ಗಢಕ್ಕೆ ಸೇರಿದ ಕಾರ್ಮಿಕರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us