AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ ಎಂದು ಪೊಲೀಸರಿಗೆ ಶರಣಾದ 44 ನಕ್ಸಲರು

ಇದೀಗ ಶರಣಾದ ನಕ್ಸಲರು, ತಾವು ಮಾವೋವಾದಿಗಳ ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ. ಅಷ್ಟೇ ಅಲ್ಲ, ಪೊಲೀಸರು ನಕ್ಸಲರಿಗಾಗಿ ರಚಿಸಿರುವ ಪುನಾ ನರ್ಕೋಮ್​ ಪುನರ್ವಸತಿ ಅಭಿಯಾನದತ್ತ ಆಕರ್ಷಿತರಾಗಿದ್ದೇವೆ ಎಂದಿದ್ದಾರೆ.

ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ ಎಂದು ಪೊಲೀಸರಿಗೆ ಶರಣಾದ 44 ನಕ್ಸಲರು
ಶರಣಾದ ನಕ್ಸಲರೊಂದಿಗೆ ರಕ್ಷಣಾ ಸಿಬ್ಬಂದಿ
TV9 Web
| Edited By: |

Updated on: Jan 02, 2022 | 9:18 AM

Share

ರಾಯ್ಪುರ: ಛತ್ತೀಸ್​ಗಢ್​ ಎಂಬುದು ನಕ್ಸಲ್​ ಪೀಡಿತ ರಾಜ್ಯ. ಅದರಲ್ಲೂ ಸುಕ್ಮಾ ಸೇರಿ ಕೆಲವು ಪ್ರದೇಶಗಳಲ್ಲಂತೂ ಸದಾ ನಕ್ಸಲರ ಕಾಟ, ದಂಗೆ, ಹಿಂಸಾಚಾರ ನಡೆಯುತ್ತಲೇ ಇರುತ್ತದೆ. ಆದರೆ ಇದೀಗ ಅದೇ ಸುಕ್ಮಾ ಜಿಲ್ಲೆಯಲ್ಲಿ 44 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಇದೀಗ ಶರಣಾಗಿರುವ ನಕ್ಸಲರು ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದರು. ಹಾಗೇ, ಕೆಳಮಟ್ಟದ ಕೇಡರ್​ಗಳಲ್ಲಿ ಇದ್ದ ಮಾವೋವಾದಿಗಳಾಗಿದ್ದಾರೆ ಎಂದು ಸುಕ್ಮಾ ಪೊಲೀಸ್​ ವರಿಷ್ಠಾಧಿಕಾರಿ ಸುನಿಲ್​ ಶರ್ಮಾ ತಿಳಿಸಿದ್ದಾರೆ. ಅವರೆಲ್ಲ ಇದೀಗ ಶರಣಾಗಿದ್ದು, ಕರಿಗುಂಡಮ್​ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪೊಲೀಸ್​ ಕ್ಯಾಂಪ್​ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಹೀಗೆ ಶರಣಾದವರಲ್ಲಿ ಮಡ್ಕಮ್​ ದುಲಾ ಎಂಬುವನೊಬ್ಬನಿದ್ದಾನೆ. ಆತನ ತಲೆಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಉಳಿದವರೆಲ್ಲ ಮಾವೋವಾದಿಗಳ ಸಾಂಸ್ಕೃತಿಕ ದಳ ಚೇತನ ನಾಟ್ಯ ಮಂಡಳಿಯ ಸದಸ್ಯರಾಗಿದ್ದಾರೆ. ಕೆಲವರು ನಕ್ಸಲ್​ ಸೇನಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  ರಾಯ್ಪುರದಿಂದ 400 ಕಿಮೀ ದೂರದಲ್ಲಿ ಈ ಕರಿಗುಂಡಮ್​ ಹಳ್ಳಿಯಿದೆ. ಹೀಗೆ ನಕ್ಸಲರು ಶರಣಾದ ಸುದ್ದಿ ಕೇಳಿ, ಸುತ್ತಲಿನ ಹಳ್ಳಿಗಳ ಅನೇಕರು ಅವರನ್ನು ನೋಡಲು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೀಗ ಶರಣಾದ ನಕ್ಸಲರು, ತಾವು ಮಾವೋವಾದಿಗಳ ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ. ಅಷ್ಟೇ ಅಲ್ಲ, ಪೊಲೀಸರು ನಕ್ಸಲರಿಗಾಗಿ ರಚಿಸಿರುವ ಪುನಾ ನರ್ಕೋಮ್​ ಪುನರ್ವಸತಿ ಅಭಿಯಾನದತ್ತ ಆಕರ್ಷಿತರಾಗಿದ್ದೇವೆ  ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ಪೊಲೀಸರ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದು, ಅವರಿಗೆ ಪೊಲೀಸರು ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ; ದೆಹಲಿ ಮಾದರಿ ಕ್ರಮಕ್ಕೆ ತಜ್ಞರ ಶಿಫಾರಸು

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ