106 ಕೆ.ಜಿ ತೂಕದ ಮಹಿಳೆಯ ಅಂಡಾಶಯದಲ್ಲಿ 50 ಕೆ.ಜಿ ಗಡ್ಡೆ.. ವೈದ್ಯರಿಗೆ ಶಾಕ್​, ಎಲ್ಲಿ?

ದೆಹಲಿ: ನಗರದ ನಿವಾಸಿಯಾಗಿದ್ದ 52 ವರ್ಷದ ಮಹಿಳೆಯೊಬ್ಬಳ ದೇಹದಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಗಡ್ಡೆ ಪತ್ತೆಯಾಗಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ. ಮಹಿಳೆಗೆ ಕೆಲವು ತಿಂಗಳಿಂದ ತನ್ನ ತೂಕದಲ್ಲಿ ವಿಪರೀತ ಏರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ, ಗಾಬರಿಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಈ ಕುರಿತು ವೈದ್ಯರ ಬಳಿ ತೋರಿಸಿಕೊಂಡಾಗ ಗಡ್ಡೆಯಿರುವುದು ತಿಳಿದುಬಂದಿದೆ. ಕೆಲವೇ ತಿಂಗಳಲ್ಲಿ ಮಹಿಳೆಯ ತೂಕ 106 ಕೆ.ಜಿಗೆ ಏರಿಕೆಯಾಗಿತ್ತು. ಇದರಿಂದ ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಹಾಗೂ ವಿಪರೀತ ಹೊಟ್ಟೆ ನೋವು ಪ್ರಾರಂಭವಾಗಿತ್ತು. ಇದರಿಂದ ಮಹಿಳೆಗೆ ನಡೆದಾಡಲು […]

106 ಕೆ.ಜಿ ತೂಕದ ಮಹಿಳೆಯ ಅಂಡಾಶಯದಲ್ಲಿ 50 ಕೆ.ಜಿ ಗಡ್ಡೆ.. ವೈದ್ಯರಿಗೆ ಶಾಕ್​, ಎಲ್ಲಿ?
ಸಾಧು ಶ್ರೀನಾಥ್​ Edited By:

Updated on: Aug 23, 2020 | 5:01 PM

ದೆಹಲಿ: ನಗರದ ನಿವಾಸಿಯಾಗಿದ್ದ 52 ವರ್ಷದ ಮಹಿಳೆಯೊಬ್ಬಳ ದೇಹದಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಗಡ್ಡೆ ಪತ್ತೆಯಾಗಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ. ಮಹಿಳೆಗೆ ಕೆಲವು ತಿಂಗಳಿಂದ ತನ್ನ ತೂಕದಲ್ಲಿ ವಿಪರೀತ ಏರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ, ಗಾಬರಿಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಈ ಕುರಿತು ವೈದ್ಯರ ಬಳಿ ತೋರಿಸಿಕೊಂಡಾಗ ಗಡ್ಡೆಯಿರುವುದು ತಿಳಿದುಬಂದಿದೆ.

ಕೆಲವೇ ತಿಂಗಳಲ್ಲಿ ಮಹಿಳೆಯ ತೂಕ 106 ಕೆ.ಜಿಗೆ ಏರಿಕೆಯಾಗಿತ್ತು. ಇದರಿಂದ ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಹಾಗೂ ವಿಪರೀತ ಹೊಟ್ಟೆ ನೋವು ಪ್ರಾರಂಭವಾಗಿತ್ತು. ಇದರಿಂದ ಮಹಿಳೆಗೆ ನಡೆದಾಡಲು ಹಾಗೂ ನಿದ್ರೆ ಮಾಡಲು ಕಷ್ಟವಾಗುತ್ತಿತ್ತಂತೆ. ಹಾಗಾಗಿ, ಕುಟುಂಬಸ್ಥರು ಮಹಿಳೆಯನ್ನು ನಗರದ ಇಂದ್ರಪ್ರಸ್ಥದಲ್ಲಿರುವ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರ ತಪಾಸಣೆ ವೇಳೆ ಮಹಿಳೆಯ ಅಂಡಾಶಯದಲ್ಲಿ ಬರೋಬ್ಬರಿ 50 ಕೆ.ಜಿ ತೂಕದ ಗಡ್ಡೆ ಪತ್ತೆಯಾಗಿದೆ.

ಕೂಡಲೇ, ಆಸ್ಪತ್ರೆಯ ವೈದ್ಯರು ಮಹಿಳೆಗೆ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನುಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ತಜ್ಞರ ತಂಡವು ಇದು ವಿಶ್ವದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾದ ಅತಿದೊಡ್ಡ ಗಡ್ಡೆ ಎಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಇದೀಗ ಮಹಿಳೆಯ ತೂಕ 56 ಕೆ.ಜಿಗೆ ಇಳಿದಿದೆ. ಶಸ್ತ್ರಚಿಕಿತ್ಸೆಯಿಂದ ಮಹಿಳೆಯು ಚೇತರಿಸಿಕೊಂಡಿದ್ದು ಆಗಸ್ಟ್ 22 ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

2017 ರಲ್ಲಿ ಕೊಯಂಬತ್ತೂರಿನ ಮಹಿಳೆಯೊಬ್ಬಳ ಅಂಡಾಶಯದಲ್ಲಿ ಬೆಳೆದಿದ್ದ 34 ಕೆ.ಜಿ ಗಡ್ಡೆಯನ್ನು,  ಶಸ್ತ್ರಚಿಕಿತ್ಸೆಗೆ ಒಳಪಡಿಸಿ ತೆಗೆಯಲಾಗಿತ್ತು ಎಂಬ ಮಾಹಿತಿ ಸಹ ದೊರೆತಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us