ಕೊರೊನಾ ಸಂಕಷ್ಟ, 3 ತಿಂಗಳ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾದ ಖಾಸಗಿ ಶಾಲೆ!

ಕೊರೊನಾ ಸಂಕಷ್ಟ ಜಗತ್ತಿನಲ್ಲಿ ಯಾರನ್ನೂ ಬಿಟ್ಟಿಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರೇ ಆಗಿದ್ದಾರೆ. ಶಾಲಾ ಕಾಲೇಜುಗಳು ಸಹ ಸಂಕಷ್ಟ ಎದುರಿಸುತ್ತಿವೆ. ಒದು ಕಡೆ ಮಕ್ಕಳ ಆರೋಗ್ಯ ಕಾಪಾಡಬೇಕಿದೆ, ಮತ್ತೊಂದು ಕಡೆ ಪೋಷಕರ ಹಣಕಾಸು ಆರೋಗ್ಯದ ಬಗ್ಗೆಯೂ ಚಿಂತಿಸಬೇಕಿದೆ. ಈ ಮಧ್ಯೆ ಸ್ವತಃ ಶಾಲೆಗಳ ಆಡಳಿತ ಮಂಡಳಿಗಳ ಸ್ಥಿತಿಗತಿಗಳನ್ನೂ ಪರಿಗಣಿಸಬೇಕಾಗುತ್ತದೆ. ಅಂತಹುದರಲ್ಲಿ ಉತ್ತರಪ್ರದೇಶದ ಖಾಸಗಿ ಶಾಲೆಯೊಂದು ತ್ರೈಮಾಸಿಕ ಶಾಲಾ ಫೀ ಅನ್ನು ಕಟ್ಟಬೇಡಿ ಎಂದು ಪೋಷಕರಿಗೆ ಸಮಾಧಾನಕರ ಸಂದೇಶ ನೀಡಿದೆ. ಹೌದು, ಪ್ರಯಾಗ್​ರಾಜ್​ನಲ್ಲಿರುವ ಖಾಸಗಿ ಶಾಲೆಯೊಂದು ಮೂರು […]

ಕೊರೊನಾ ಸಂಕಷ್ಟ, 3 ತಿಂಗಳ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾದ ಖಾಸಗಿ ಶಾಲೆ!
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 15, 2020 | 10:44 AM

ಕೊರೊನಾ ಸಂಕಷ್ಟ ಜಗತ್ತಿನಲ್ಲಿ ಯಾರನ್ನೂ ಬಿಟ್ಟಿಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರೇ ಆಗಿದ್ದಾರೆ. ಶಾಲಾ ಕಾಲೇಜುಗಳು ಸಹ ಸಂಕಷ್ಟ ಎದುರಿಸುತ್ತಿವೆ. ಒದು ಕಡೆ ಮಕ್ಕಳ ಆರೋಗ್ಯ ಕಾಪಾಡಬೇಕಿದೆ, ಮತ್ತೊಂದು ಕಡೆ ಪೋಷಕರ ಹಣಕಾಸು ಆರೋಗ್ಯದ ಬಗ್ಗೆಯೂ ಚಿಂತಿಸಬೇಕಿದೆ. ಈ ಮಧ್ಯೆ ಸ್ವತಃ ಶಾಲೆಗಳ ಆಡಳಿತ ಮಂಡಳಿಗಳ ಸ್ಥಿತಿಗತಿಗಳನ್ನೂ ಪರಿಗಣಿಸಬೇಕಾಗುತ್ತದೆ. ಅಂತಹುದರಲ್ಲಿ ಉತ್ತರಪ್ರದೇಶದ ಖಾಸಗಿ ಶಾಲೆಯೊಂದು ತ್ರೈಮಾಸಿಕ ಶಾಲಾ ಫೀ ಅನ್ನು ಕಟ್ಟಬೇಡಿ ಎಂದು ಪೋಷಕರಿಗೆ ಸಮಾಧಾನಕರ ಸಂದೇಶ ನೀಡಿದೆ.

ಹೌದು, ಪ್ರಯಾಗ್​ರಾಜ್​ನಲ್ಲಿರುವ ಖಾಸಗಿ ಶಾಲೆಯೊಂದು ಮೂರು ತಿಂಗಳ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಶಾಲಾ ಶುಲ್ಕವನ್ನು ಕಟ್ಟುವುದು ಬೇಡ ಎಂದು ಪೋಷಕರಿಗೆ ಸೂಚಿಸಿದೆ.

ಸಿಬ್ಬಂದಿಗೆ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ
ಸಮಾಜದ ನಾನಾ ಸ್ತರಗಳ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿಸುತ್ತಾರೆ. ಆದ್ರೆ ಈಗ ಕೊರೊನಾ ಲಾಕ್​ಡೌನ್​ನಿಂದಾಗಿ ಪೋಷಕರಿಗೆ ಹಣ ಕಟ್ಟುವುದು ಕಷ್ಟವಾಗುತ್ತದೆ. ಹಾಗಾಗಿ ಮೂರು ತಿಂಗಳ ಶಾಲಾ ಶುಲ್ಕವನ್ನು ನಾವು ಮಾಫಿ ಮಾಡಿದ್ದೇವೆ. ಆದ್ರೆ ನಾವು ನಮ್ಮ ಸಿಬ್ಬಂದಿಗೆ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಮಮತಾಮಯಿಯಾದ ಶಾಲಾ ಪ್ರಿನ್ಸಿಪಾಲ್ ಮಮತಾ ಮಿಶ್ರಾ ತಿಳಿಸಿದ್ದಾರೆ.

Published On - 8:04 am, Sun, 14 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us