ಕೊರೊನಾಗೆ ಹೆದರಿ, ವಿಮಾನಗಳಲ್ಲಿ ಮಧ್ಯೆ ಸೀಟ್ ಖಾಲಿ ಬಿಡೋದು ಬೇಡ -ಸುಪ್ರೀಂಕೋರ್ಟ್​

ದೆಹಲಿ: ಭಾರತದಲ್ಲಿ ಹೆಜ್ಜೆಯೂರಿರೋ ಕ್ರೂರಿ ಕೊರೊನಾ ವೈರಸ್​ ದಿನೇ ದಿನೇ ತನ್ನ ಉಗ್ರರೂಪ ತೋರಿಸ್ತಿದೆ. ಕಂಡ ಕಂಡವರನೆಲ್ಲಾ ತನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಕ್ಷಣ ಕ್ಷಣಕ್ಕೂ ಸೋಂಕಿನ ಸುನಾಮಿ ಏರ್ತಾನೆ ಇದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ. ಏರ್​ಲೈನ್ಸ್​ಗಳಿಗೆ ಸುಪ್ರೀಂ ರಿಲೀಫ್ ಈ ಮಧ್ಯೆ ದೇಶದ ಏರ್​ಲೈನ್ಸ್​ಗಳಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಮಾನಗಳಲ್ಲಿ ಮಧ್ಯೆ ಸೀಟು ಖಾಲಿ‌ ಬಿಡುವ ಅಗತ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿ, ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಸಂಬಂಧ […]

ಕೊರೊನಾಗೆ ಹೆದರಿ, ವಿಮಾನಗಳಲ್ಲಿ ಮಧ್ಯೆ ಸೀಟ್ ಖಾಲಿ ಬಿಡೋದು ಬೇಡ -ಸುಪ್ರೀಂಕೋರ್ಟ್​
ಸಾಧು ಶ್ರೀನಾಥ್​

Updated on: Jun 26, 2020 | 5:32 PM

ದೆಹಲಿ: ಭಾರತದಲ್ಲಿ ಹೆಜ್ಜೆಯೂರಿರೋ ಕ್ರೂರಿ ಕೊರೊನಾ ವೈರಸ್​ ದಿನೇ ದಿನೇ ತನ್ನ ಉಗ್ರರೂಪ ತೋರಿಸ್ತಿದೆ. ಕಂಡ ಕಂಡವರನೆಲ್ಲಾ ತನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಕ್ಷಣ ಕ್ಷಣಕ್ಕೂ ಸೋಂಕಿನ ಸುನಾಮಿ ಏರ್ತಾನೆ ಇದ್ದು ಇಡೀ ದೇಶವೇ ಕಂಗೆಟ್ಟು ಕೂತಿದೆ.

ಏರ್​ಲೈನ್ಸ್​ಗಳಿಗೆ ಸುಪ್ರೀಂ ರಿಲೀಫ್
ಈ ಮಧ್ಯೆ ದೇಶದ ಏರ್​ಲೈನ್ಸ್​ಗಳಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಮಾನಗಳಲ್ಲಿ ಮಧ್ಯೆ ಸೀಟು ಖಾಲಿ‌ ಬಿಡುವ ಅಗತ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿ, ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಈ ಸಂಬಂಧ ಡಿಜಿಸಿಎಯಿಂದ ಸುಪ್ರೀಂಕೋರ್ಟ್​ಗೆ ತಜ್ಞರ ಸಮಿತಿಯ ವರದಿ ಸಲ್ಲಿಕೆ ಮಾಡಲಾಗಿದೆ. ಆದಾಗ್ಯೂ, ವಿಮಾನಗಳಲ್ಲಿ ಸುರಕ್ಷತೆ, ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.

Published On - 5:18 pm, Fri, 26 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us