AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೀಡೌನ್ ಬಳಿಕ ಹೆಚ್ಚಾಯ್ತು ಕೊರೊನಾ ಕೇಸ್, ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಗಳಿಗೆ ಖಡಕ್ ಲೆಟರ್!

ದೆಹಲಿ: ಮನೆಯಿಂದ ಹೊರಗೆ ಹೆಜ್ಜೆ ಇಟ್ರು ಸುತ್ತಿಕೊಳ್ತಿದೆ.. ಎಲ್ಲಿಂದ.. ಯಾವಾಗ.. ಯಾರ ನಂಟಿನಿಂದ ಗಂಟು ಹಾಕಿಕೊಳ್ತಿದೆ ಗೊತ್ತೇ ಆಗ್ತಿಲ್ಲ. ಲಾಕ್​​ಡೌನ್ ರಿಲೀಫ್​ ಕೊಟ್ಮೇಲಂತೂ ಕೊರೊನಾ ರಣಕೇಕೆ ಹಾಕ್ತಿದೆ. ಫ್ರೀಡೌನ್​ ಮಾಡಿ ಕಂಗೆಟ್ಟಿರೋ ಕೇಂದ್ರ ಸರ್ಕಾರ ಮತ್ತೆ ಲಾಕ್​ಡೌನ್ ಮಾಡೋ. ಕೊರೊನಾ ಕಂಟ್ರೋಲ್​ಗೆ ಹೊಸ ಗೈಡ್​ಲೈನ್ಸ್ ಜಾರಿಯಾಗೋ ಸುಳಿವು ಸಿಕ್ಕಿದೆ. ಆದೇ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಜಯ್ ಬಲ್ಲಾ ಬರೆದಿರೋ ಇಂಪಾರ್ಟೆಂಟ್ ಲೆಟರ್. ‘ಕ್ರೂರಿ’ ಕಂಟ್ರೋಲ್​ಗೆ ಕೇಂದ್ರದಿಂದ ಹೊಸ ಗೈಡ್​ಲೈನ್ಸ್! ಯೆಸ್.. ಎರಡುವರೆ ತಿಂಗಳ ಲಾಕ್​​ಡೌನ್​​ನಿಂದ ಜನರು ಖುಷಿಯಾಗಿ […]

ಫ್ರೀಡೌನ್ ಬಳಿಕ ಹೆಚ್ಚಾಯ್ತು ಕೊರೊನಾ ಕೇಸ್, ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಗಳಿಗೆ ಖಡಕ್ ಲೆಟರ್!
ಆಯೇಷಾ ಬಾನು
|

Updated on:Jun 13, 2020 | 3:45 PM

Share

ದೆಹಲಿ: ಮನೆಯಿಂದ ಹೊರಗೆ ಹೆಜ್ಜೆ ಇಟ್ರು ಸುತ್ತಿಕೊಳ್ತಿದೆ.. ಎಲ್ಲಿಂದ.. ಯಾವಾಗ.. ಯಾರ ನಂಟಿನಿಂದ ಗಂಟು ಹಾಕಿಕೊಳ್ತಿದೆ ಗೊತ್ತೇ ಆಗ್ತಿಲ್ಲ. ಲಾಕ್​​ಡೌನ್ ರಿಲೀಫ್​ ಕೊಟ್ಮೇಲಂತೂ ಕೊರೊನಾ ರಣಕೇಕೆ ಹಾಕ್ತಿದೆ. ಫ್ರೀಡೌನ್​ ಮಾಡಿ ಕಂಗೆಟ್ಟಿರೋ ಕೇಂದ್ರ ಸರ್ಕಾರ ಮತ್ತೆ ಲಾಕ್​ಡೌನ್ ಮಾಡೋ. ಕೊರೊನಾ ಕಂಟ್ರೋಲ್​ಗೆ ಹೊಸ ಗೈಡ್​ಲೈನ್ಸ್ ಜಾರಿಯಾಗೋ ಸುಳಿವು ಸಿಕ್ಕಿದೆ. ಆದೇ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಜಯ್ ಬಲ್ಲಾ ಬರೆದಿರೋ ಇಂಪಾರ್ಟೆಂಟ್ ಲೆಟರ್.

‘ಕ್ರೂರಿ’ ಕಂಟ್ರೋಲ್​ಗೆ ಕೇಂದ್ರದಿಂದ ಹೊಸ ಗೈಡ್​ಲೈನ್ಸ್! ಯೆಸ್.. ಎರಡುವರೆ ತಿಂಗಳ ಲಾಕ್​​ಡೌನ್​​ನಿಂದ ಜನರು ಖುಷಿಯಾಗಿ ಹೆಜ್ಜೆ ಇಡ್ತಿರೋವಾಗ್ಲೇ ಕೊರೊನಾ ಮಹಾಘಾತ ನೀಡ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕೊರೊನಾ ಆರ್ಭಟಿಸ್ತಿದ್ರೆ, ಜುಲೈನಲ್ಲಿ ಕೊರೊನಾ ವಿಸ್ಫೋಟಗೊಳ್ಳೋ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಹೊತ್ತಲ್ಲೇ ಕೇಂದ್ರ ಸರ್ಕಾರ ಹೊಸ ಗೈಡ್​ಲೈನ್ಸ್ ಜಾರಿ ಮಾಡಿದೆ. ಅದೇನಂದ್ರೆ, ಕೊರೊನಾ ಕಂಟ್ರೋಲ್​​ಗೆ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಿ. ಜನ ಸಂಚಾರವನ್ನ ಸಂಪೂರ್ಣವಾಗಿ ತಡೆಯಿರಿ ಅಂತ ರಾಜ್ಯ ಸರ್ಕಾರಗಳಿಗೆ ಖಡಕ್ ಪತ್ರ ರವಾನಿಸಿದೆ. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ‌ ಇಲಾಖೆಯ ಕಾರ್ಯದರ್ಶಿ ಅಜಯ್ ಬಲ್ಲಾ ಪತ್ರ ಬರೆದಿದ್ದು, ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ.

ದೇಶ ಮತ್ತೆ ಲಾಕ್ ಆಗುತ್ತಾ? ಹೊಸ ಟಿಪ್ಸ್ ಸಿಗುತ್ತಾ? ಇನ್ನು, ದೇಶಾದ್ಯಂತ ಕೊರೊನಾಘಾತ ಹೆಚ್ಚಾಗ್ತಿರೋದು ಪ್ರಧಾನಿ ಮೋದಿ ಕೂಡ ಟೆನ್ಷನ್ ಆಗಿದ್ದಾರೆ. ಕೊರೊನಾ ಕಂಟ್ರೋಲ್​​ಗೆ ಸ್ಟ್ರಿಕ್ಟ್​ ರೂಲ್ಸ್ ಪಾಲೋ ಮಾಡಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಖಡಕ್ ಸೂಚನೆ ನೀಡ್ತಾನೆ ಇದ್ದಾರೆ. ಇದೀಗ, ಜೂನ್ 16 ಮತ್ತು 17ರಂದು ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಮತ್ತೆ ಸಂವಾದ ನಡೆಸಲಿದ್ದಾರೆ. ಕೊರೊನಾ ಕೇಸ್ ಕಡಿಮೆ ಇರುವ ರಾಜ್ಯಗಳ ಜೊತೆ ಜೂನ್​ 16ರಂದು ಸಭೆ ನಡೆಸಿದ್ರೆ, ಕೊರೊನಾ ಕೇಸ್​ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜೊತೆ ಜೂ17ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂಚಿಂಚು ಮಾಹಿತಿ ಕಲೆ ಹಾಕಲಿದ್ದಾರೆ.

ಭಾರತದಲ್ಲಿ 3 ಲಕ್ಷ ಗಡಿ ದಾಟಿದ ಹೆಮ್ಮಾರಿ ಸೋಂಕಿತರು! ಇತ್ತ ದೇಶದಲ್ಲಿ ಕೊರೊನಾ ನಂಜಿನ ನಂಟು ಊಹೆಗೂ ನಿಲುಕದಂತೆ ಏರ್ತಾನೆ ಇದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿರೋದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅದ್ರಲ್ಲೂ ಶಾಕಿಂಗ್ ವಿಷ್ಯ ಅಂದ್ರೆ, ಕೊರೊನಾ ಪೀಡಿತ ವಿಶ್ವದ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನಕ್ಕೇರಿರೋದು ಮತ್ತೊಂದು ಮಹಾಘಾತ ನೀಡಿದಂತಾಗಿದೆ. ನಿನ್ನೆ ಒಂದೇ ದಿನ ಸುಮಾರು 11,106 ಸೋಂಕಿತರು ಪತ್ತೆಯಾಗಿದ್ದು. ಇದುವರೆಗೆ ಭಾರತದಲ್ಲಿ ಒಟ್ಟು 8,890 ಜನ ಕೊರೊನಾಗೆ ಏಟಿಗೆ ಸಾವಿನ ಮನೆ ಸೇರಿದ್ದಾರೆ.

ಮಹಾರಾಷ್ಟ್ರ ಒಂದರಲ್ಲೇ 1ಲಕ್ಷಕ್ಕೂ ಹೆಚ್ಚು ಸೋಂಕಿತರು! ಇಡೀ ದೇಶಕ್ಕೆ ದೇಶವೇ ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡ್ತಿದ್ರೆ, ಮರಾಠರ ನಾಡು ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಮಹಾರಾಷ್ಟ್ರ ಒಂದರಲ್ಲೇ 1ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಕೂಪಕ್ಕೆ ಬಿದ್ದಿರೋದು ಎಲ್ಲರ ನಿದ್ದೆಗೆಡಿಸಿದೆ. ನಿನ್ನೆ ಒಂದೇ ದಿನ 3493 ಕೇಸ್​ಗಳು ಪತ್ತೆಯಾಗಿದ್ದು ಎಲ್ಲರನ್ನು ನಡುಗಿಸಿದೆ. ಹಾಗಿದ್ರೆ ಇತರೆ ರಾಜ್ಯಗಳಲ್ಲಿ ಕೊರೊನಾರ್ಭಟ ಹೇಗಿದೆ ಅನ್ನೋದನ್ನ ನೋಡೋದಾದ್ರೆ.

ಕೊರೊನಾ ರೌದ್ರಾವತಾರ! ಇನ್ನು, ​ತಮಿಳುನಾಡಿನಲ್ಲಿ 38,716 ಜನರಿಗೆ ಕೊರೊನಾ ಸುತ್ತಿಕೊಂಡಿದ್ರೆ, ದೆಹಲಿಯಲ್ಲಿ 34687, ಗುಜರಾತ್​​ನಲ್ಲಿ 22032, ರಾಜಸ್ಥಾನದಲ್ಲಿ 11838, ಮಧ್ಯಪ್ರದೇಶದಲ್ಲಿ 10241, ಪಶ್ಚಿಮ ಬಂಗಾಳದಲ್ಲಿ 9768, ಜಮ್ಮು-ಕಾಶ್ಮೀರದಲ್ಲಿ 4574 ಹಾಗೂ ಆಂಧ್ರಪ್ರದೇಶದಲ್ಲಿ 5429 ಜನರಿಗೆ ರಕ್ಕಸ ವೈರಸ್ ದಾಳಿ ಇಟ್ಟಿದೆ.

ಒಟ್ನಲ್ಲಿ, ಚೀನಾದ ಪಾಪದ ಕೂಸು ಹೆಜ್ಜೆಗುರುತಿಗೆ ಇಡೀ ದೇಶವೇ ಬಳಲಿ ಬೆಂಡಾಗಿ ಹೋಗಿದೆ. ಫ್ರೀಡೌನ್ ಕೊಟ್ಮೇಲಂತೂ ಕ್ರೂರಿ ಕೇಕೆ ಹಾಕ್ತಿದ್ದು ಕೇಂದ್ರ ಸರ್ಕಾರ ಹೊಸ ಗೈಡ್​ಲೈನ್ಸ್ ಜಾರಿ ಮಾಡಿದೆ. ಇತ್ತ ಪ್ರಧಾನಿ ಮೋದಿ ಜೂನ್​ 17ಕ್ಕೆ ಕರ್ನಾಟ ಸೇರಿ ಹಲವು ರಾಜ್ಯಗಳ ಸಿಎಂಗಳ ಜೊತೆ ಸಂವಾದ ನಡೆಸಲಿದ್ದು ದೇಶವನ್ನ ಮತ್ತೆ ಲಾಕ್ ಮಾಡ್ತಾರಾ. ಇಲ್ಲ ಹೊಸದೇನಾದ್ರೂ ಟಿಪ್ಸ್ ಕೊಡ್ತಾರೆ ಅನ್ನೋದು ಕೂತೂಹಲ ಮೂಡಿಸಿದೆ.

Published On - 6:38 am, Sat, 13 June 20

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ