Amit Shah: ಅಶೋಕ್ ಗೆಹ್ಲೋಟ್ ತವರಿನಲ್ಲಿ ಅಮಿತ್ ಶಾ ಮಹತ್ವದ ಸಭೆ

ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಪಕ್ಷದ ಒಬಿಸಿ ಮತಗಳನ್ನು ಬಲಪಡಿಸುವ ಗುರಿಯಿಂದ ಬಿಜೆಪಿ ಈ ಸಭೆ ಮಾಡತ್ತಿದೆ.

Amit Shah: ಅಶೋಕ್ ಗೆಹ್ಲೋಟ್ ತವರಿನಲ್ಲಿ ಅಮಿತ್ ಶಾ ಮಹತ್ವದ ಸಭೆ
Amit Shah
Updated By: ಅಕ್ಷಯ್​ ಪಲ್ಲಮಜಲು​​

Updated on: Sep 10, 2022 | 10:08 AM

ಜೋಧಪುರ: ಬಿಜೆಪಿಯ ಒಬಿಸಿ ಮೋರ್ಚಾ ಘಟಕವು ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ರಾಜಸ್ಥಾನದಲ್ಲಿ ಹಮ್ಮಿಕೊಂಡಿದೆ. ಈ ಸಭೆಯನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಕ್ಷೇತ್ರವಾದ ಜೋಧ್‌ಪುರದಲ್ಲಿ ನಡೆಸುತ್ತಿದೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಪಕ್ಷದ ಒಬಿಸಿ ಜನಾಂಗವನ್ನು ಒಗ್ಗೂಟಿಸಿ ಬಿಜೆಪಿಗೆ ಬೆಂಬಲಿಸುವ ಉದ್ದೇಶದಿಂದ ಮತ್ತು ಒಬಿಸಿ ನಾಯಕರನ್ನು ಸಂಘಟಿಸುವ ಕಾರಣದಿಂದ ಈ ಸಭೆ ನಡೆಸಲಾಗಿದೆ.

ಬಿಜೆಪಿ ರಾಜ್ಯದ ಪಶ್ಚಿಮ ಭಾಗದಲ್ಲಿ ತನ್ನ ಬಲವನ್ನು ಹೆಚ್ಚಿಸಲು ಬಯಸಿದೆ. ಒಬಿಸಿ ಮಾಲಿ ಸಮುದಾಯಕ್ಕೆ ಸೇರಿದ ಅಶೋಕ್ ಗೆಹ್ಲೋಟ್ ಅವರು ಪಶ್ಚಿಮ ರಾಜಸ್ಥಾನದಾದ್ಯಂತ ಸಾಕಷ್ಟು ಪ್ರಚಾರದಲ್ಲಿ ಹೊಂದಿದ್ದಾರೆ. ನಿನ್ನೆ ಸಂಜೆ ಜೈಸಲ್ಮೇರ್‌ಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ ಅವರು ಇಂದು ಜೋಧ್‌ಪುರ ಹೋಟೆಲ್‌ನಲ್ಲಿ ಮಹತ್ವದ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಇದು ಸಭೆಯ ಎರಡನೇ ದಿನವಾಗಿದೆ.

ಅಮಿತ್ ಶಾ ಅವರು ಜೋಧ್‌ಪುರಕ್ಕೆ ತೆರಳುವ ಮುನ್ನ ಜೈಸಲ್ಮೇರ್‌ನಲ್ಲಿರುವ ತನೋಟ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಒಬಿಸಿ ಮೋರ್ಚಾ ಸಭೆಯ ನಂತರ, ಶಾ ಜೋಧ್‌ಪುರದ ದಸರಾ ಮೈದಾನದಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಮತ್ತು ಪಕ್ಷದ ರಾಜಸ್ಥಾನ ಮುಖ್ಯಸ್ಥ ಸತೀಶ್ ಪೂನಿಯಾ ಶುಕ್ರವಾರ ಸಭೆಯನ್ನು ಉದ್ಘಾಟಿಸಿದರು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಶುಕ್ರವಾರ ಜೋಧಪುರಕ್ಕೆ ಆಗಮಿಸಿದ್ದರು. ಎಂಎಸ್ ರಾಜೆ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಶಾ ಅವರನ್ನು ಸ್ವಾಗತಿಸಲು ಆಗಮಿಸಿದ್ದರು.

200 ವಿಧಾನಸಭಾ ಕ್ಷೇತ್ರಗಳಲ್ಲಿ, 33 ಜೋಧ್‌ಪುರ ವಿಭಾಗದಲ್ಲಿ ಆರು ಜಿಲ್ಲೆಗಳನ್ನು ಒಳಗೊಂಡಿದೆ. ಜೋಧ್‌ಪುರ, ಬಾರ್ಮರ್, ಜೈಸಲ್ಮೇರ್, ಜಲೋರ್, ಸಿರೋಹಿ ಮತ್ತು ಪಾಲಿ. ಪ್ರಸ್ತುತ ಬಿಜೆಪಿ 14, ಕಾಂಗ್ರೆಸ್ 17, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಮತ್ತು ಸ್ವತಂತ್ರರು ತಲಾ ಒಂದು ಸ್ಥಾನವನ್ನು ಹೊಂದಿದ್ದಾರೆ.

Published On - 10:08 am, Sat, 10 September 22