AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratan Tata Birthday: ದೇಶದ ಖ್ಯಾತ ಉದ್ಯಮಿ ರತನ್​ ಟಾಟಾರಿಗೆ 84ನೇ ಹುಟ್ಟುಹಬ್ಬದ ಸಂಭ್ರಮ; ಇವರ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿವೆ

Ratan Tata: ರತನ್​ ಟಾಟಾ ತರಬೇತಿ ಪಡೆದ ಪೈಲಟ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿ ಅದಕ್ಕಾಗಿ ಲೈಸೆನ್ಸ್ ಕೂಡ ಇದೆ. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋದಲ್ಲಿ F-16 (ಯುಎಸ್​ ಏರ್​​ಫೋರ್ಸ್​ನ ಫೈಟಿಂಗ್​ ಫ್ಯಾಲ್ಕನ್​) ಹಾರಿಸಿದ್ದಾರೆ.

Ratan Tata Birthday: ದೇಶದ ಖ್ಯಾತ ಉದ್ಯಮಿ ರತನ್​ ಟಾಟಾರಿಗೆ 84ನೇ ಹುಟ್ಟುಹಬ್ಬದ ಸಂಭ್ರಮ; ಇವರ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿವೆ
ರತನ್ ಟಾಟಾ
TV9 Web
| Edited By: |

Updated on: Dec 28, 2021 | 3:03 PM

Share

ದೇಶದ ಖ್ಯಾತ, ಉದಾರ ಉದ್ಯಮಿ ರತನ್​ ಟಾಟಾರಿಗೆ ಇಂದು 84ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ(Ratan Tata Birthday).  ಟಾಟಾ ಗ್ರೂಪ್ (Tata Group)​ ಅಧ್ಯಕ್ಷರಾಗಿ ಯಶಸ್ವಿಯಾಗಿ ಉದ್ಯಮ ನಡೆಸಿ, 75ನೇ ವಯಸ್ಸಿನಲ್ಲಿ ಅಧಿಕಾರಿ ಬಿಟ್ಟುಕೊಟ್ಟ ಅವರು ಭಾರತಕ್ಕೆ ನೀಡಿದ ಕೊಡುಗೆ ಅಪಾರ. ಇವರು ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ದೇಶ ಕೊವಿಡ್​ 19 ಸಂಕಷ್ಟಕ್ಕೀಡಾಗಿರುವ ಸಮಯದಲ್ಲಿ ಕೂಡ ಅವರು ಕೋಟಿ ರೂಪಾಯಿಗಳಷ್ಟು ದೇಣಿಗೆ ಕೊಟ್ಟಿದ್ದಾರೆ. ಭಾರತದ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಕೈಲಾದ ನೆರವು ನೀಡಿದ್ದಾರೆ. ರತನ್​ ಟಾಟಾ 2000ನೇ ಇಸ್ವಿಯಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇಂದು 84ನೇ ವರ್ಷದ ಬರ್ತ್​ ಡೇ ಸಂಭ್ರಮದಲ್ಲಿರುವ ರತನ್​ ಟಾಟಾರಿಗೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ದೇಶಕ್ಕೆ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಈ ಹೊತ್ತಲ್ಲಿ ರತನ್​ ಟಾಟಾ ಬಗ್ಗೆ ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ..

1937ರ ಡಿಸೆಂಬರ್​ 28ರಂದು ಹುಟ್ಟಿದ ರತನ್​ ಟಾಟಾ ಈ ದೇಶದ ಅತ್ಯಂತ ಯಶಸ್ವಿ ಉದ್ಯಮಿಯಾಗಿ ಬೆಳೆದರು. ವ್ಯಾಪಾರ ನೀತಿಯಲ್ಲಿ ಹೆಸರು ಮಾಡಿದಂತೆ, ತಮ್ಮ ಪರೋಪಕಾರ ನಡೆಯಿಂದಲೂ ಸಿಕ್ಕಾಪಟೆ ಖ್ಯಾತಿ ಗಳಿಸಿದ್ದಾರೆ. ಮುಂಬೈನಲ್ಲಿ ಜನಿಸಿದ ಇವರ ತಂದೆ ಹೆಸರು ನೇವಲ್​ ಟಾಟಾ, ತಾಯಿ ಸೂನಿ ಟಾಟಾ. ಇವರ ಕುಟುಂಬ ಮೂಲತಃ ಗುಜರಾತ್​ನ ಸೂರತ್​​ನಲ್ಲಿದೆ. ಇದರಲ್ಲಿ ಅತ್ಯಂತ ಮುಖ್ಯ ವಿಷಯವೆಂದರೆ, ಟಾಟಾ ಗ್ರೂಪ್​ನ ಸಂಸ್ಥಾಪಕರಾದ ಜೆಮ್ ಸೆಟ್ ಜಿ ಟಾಟಾ (ಜೆಆರ್​ಡಿ ಟಾಟಾ) ಅವರ ದತ್ತುಪುತ್ರ ಈ ನೇವಲ್​ ಟಾಟಾ. ಅಂದರೆ ರತನ್​ ಟಾಟಾ ಅವರು ಜೆಆರ್​ಡಿ ಟಾಟಾರ ದತ್ತುಪುತ್ರನ ಮಗ.

ಅಜ್ಜಿ ಬೆಳೆಸಿದ ಮೊಮ್ಮಗ ಇವರು ! ರತನ್​ ಟಾಟಾ ಹುಟ್ಟಿ, ಅವರಿಗೆ 10ವರ್ಷವಾಗಿದ್ದಾಗ ಅಂದರೆ 1948ರಲ್ಲಿ ಅವರ ತಂದೆ ನೇವಲ್​ ಟಾಟಾ ಮತ್ತು ತಾಯಿ ಸೂನಿ ಟಾಟಾ ಬೇರೆಯಾಗುತ್ತಾರೆ. ಆಗಿನಿಂದಲೂ ರತನ್​ ಟಾಟಾರನ್ನು ಅವರ ಅಜ್ಜಿಯೇ ಬೆಳೆಸುತ್ತಾರೆ. ಇವರು ಮೊಟ್ಟ ಮೊದಲು ಕೆಲಸ ಶುರು ಮಾಡುವುದು 1961ರಲ್ಲಿ, ಟಾಟಾ ಸ್ಟೀಲ್​​ನಲ್ಲಿ.  ಅದಾದ ಬಳಿಕ 1991ರಲ್ಲಿ ಟಾಟಾ ಗ್ರೂಪ್​ನ ಅಧ್ಯಕ್ಷರಾದರು. ಬರೋಬ್ಬರಿ 21 ವರ್ಷ ಅಂದರೆ 2012ರವರೆಗೆ ಟಾಟಾ ಗ್ರೂಪ್​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ 21ವರ್ಷಗಳಲ್ಲಿ ಆದಾಯ, ಲಾಭವನ್ನು ಅಧಿಕಗೊಳಿಸಿದ ಖ್ಯಾತಿ ಅವರಿಗೆ ಸೇರುತ್ತದೆ.

ಅದಕ್ಕೂ ಮೊದಲು ರತನ್​ ಟಾಟಾ ಅವರ ಶಿಕ್ಷಣದ ಬಗ್ಗೆ ನೋಡುವುದಾದರೆ, 1962ರಲ್ಲಿ ಕಾರ್ನೆಲ್​ ಯೂನಿವರ್ಸಿಟಿಯಿಂದ ಬಿ.ಆರ್ಚ್​ ಪದವಿ ಪಡೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸುಧಾರಿತ ನಿರ್ವಹಣಾ ಪ್ರೋಗ್ರಾಂನ್ನು 1975ರಲ್ಲಿ ಪೂರ್ಣಗೊಳಿಸಿದರು. ಅದಾದ ಬಳಿಕ 1981ರಲ್ಲಿ ಟಾಟಾ ಇಂಡಸ್ಟ್ರೀಸ್​​ನ ಚೇರ್​ಮನ್​ ಆಗಿ ನೇಮಕಗೊಂಡರು. ಈ ಅವಧಿಯಲ್ಲಿ ಟಾಟಾ ಕಂಪನಿಯ ವ್ಯವಹಾರವನ್ನು ಜಾಗತಿಕವಾಗಿ ವಿಸ್ತರಿಸುವ ಪ್ರಯತ್ನದಲ್ಲಿ ರತನ್​ ಟಾಟಾ ತೊಡಗಿಕೊಂಡರು. ಅದರ ಭಾಗವಾಗಿ ಟಾಟಾ ಟೀ ಕಂಪನಿ ಯುಕೆಯ ಟೇಟ್ಲಿ ಟೀ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಹಾಗೇ, ಟಾಟಾ ಮೋಟಾರ್ಸ್​, ಜಾಗ್ವಾರ್​ ಲ್ಯಾಂಡ್​ ರೋವರ್​ ಮಾಲೀಕತ್ವ ಪಡೆಯಿತು ಮತ್ತು ಲಂಡನ್​ನ ಕೊರಸ್​ ಸ್ಟೀಲ್​ ಕಂಪನಿಯನ್ನು ಟಾಟಾ ಸ್ಟೀಲ್​ ಸಂಸ್ಥೆ ಸ್ವಾಧೀನಕ್ಕೆ ತೆಗೆದುಕೊಂಡಿತು.

ತರಬೇತಿ ಪಡೆದ ಪೈಲಟ್ ರತನ್​ ಟಾಟಾ ತರಬೇತಿ ಪಡೆದ ಪೈಲಟ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಬಳಿ ಅದಕ್ಕಾಗಿ ಲೈಸೆನ್ಸ್ ಕೂಡ ಇದೆ. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋದಲ್ಲಿ F-16 (ಯುಎಸ್​ ಏರ್​​ಫೋರ್ಸ್​ನ ಫೈಟಿಂಗ್​ ಫ್ಯಾಲ್ಕನ್​) ಹಾರಿಸಿದ್ದಾರೆ. ಸುಮಾರು 40-50 ನಿಮಿಷ ಹಾರಾಡಿದ ಈ ಯುದ್ಧವಿಮಾನದಲ್ಲಿ ಇವರು ಸಹ ಪೈಲಟ್​ ಆಗಿದ್ದರು. ಆಗ ಅವರಿಗೆ 69ವರ್ಷ.  ಇನ್ನು ರತನ್ ಟಾಟಾರಿಗೆ ಕಾರುಗಳೆಂದರೆ ಭಯಂಕರ ಪ್ರೀತಿ. ಅವರ ಬಳಿ, ಫೆರಾರಿ ಕ್ಯಾಲಿಫೋರ್ನಿಯಾ, ಕ್ಯಾಡಿಲಾಕ್ ಎಕ್ಸ್‌ಎಲ್‌ಆರ್, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್, ಕ್ರಿಸ್ಲರ್ ಸೆಬ್ರಿಂಗ್, ಹೊಂಡಾ ಸಿವಿಕ್, ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್, ಮಾಸೆರಾಟಿ ಕ್ವಾಟ್ರೊಪೋರ್ಟ್, ಮರ್ಸಿಡಿಸ್ ಬೆಂಜ್ 500 ಎಸ್‌ಎಲ್, ಜಾಗ್ವಾರ್ ಎಫ್-ಟೈಪ್, ಜಾಗ್ವಾರ್ ಎಕ್ಸ್‌ಎಫ್-ಆರ್ ಮತ್ತಿತರ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಹಾಗೇ, ಅವರಿಗೆ ನಾಯಿಗಳೆಂದರೂ ತುಂಬ ಅಚ್ಚುಮೆಚ್ಚು.

ಇದನ್ನೂ ಓದಿ: England: ಶೂನ್ಯ, ಸೊನ್ನೆ, ಶೂನ್ಯ: ಕ್ರಿಕೆಟ್​ ಇತಿಹಾಸದಲ್ಲಿ 2ನೇ ಬಾರಿ ಕಳಪೆ ದಾಖಲೆ ಬರೆದ ಇಂಗ್ಲೆಂಡ್

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ