AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಲಿಸ್ತಾನ, ಪಾಕಿಸ್ತಾನದ ಜತೆ ನಂಟು ಹೊಂದಿರುವ 1178 ಟ್ವಿಟ್ಟರ್ ಖಾತೆ ರದ್ದಿಗೆ ಕೋರಿದ ಕೇಂದ್ರ ಸರ್ಕಾರ

ಜನವರಿ 26ರಂದು ನಡೆದ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ರ್ಯಾಲಿ ವೇಳೆ ಖಲಿಸ್ತಾನ ​ ಬಾವುಟ ಹಾರಾಡಿದ್ದವು. ಈ ಮೂಲಕ ರೈತರ ಪ್ರತಿಭಟನೆಗೆ ಖಲಿಸ್ತಾನ​ ಲಿಂಕ್​ ಸಿಕ್ಕಿತ್ತು. 

ಖಲಿಸ್ತಾನ, ಪಾಕಿಸ್ತಾನದ ಜತೆ ನಂಟು ಹೊಂದಿರುವ 1178 ಟ್ವಿಟ್ಟರ್ ಖಾತೆ ರದ್ದಿಗೆ ಕೋರಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Feb 08, 2021 | 6:16 PM

Share

ಖಲಿಸ್ತಾನ ಹಾಗೂ ಪಾಕಿಸ್ತಾನದ ಜತೆ ನಂಟು ಹೊಂದಿರುವ 1,178 ಟ್ವಿಟ್ಟರ್​ ಖಾತೆಗಳ ಮೇಲೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್​ಗೆ ಸೂಚನೆ ನೀಡಿದೆ. ನಕಲಿ ಸುದ್ದಿ ಹರಡುತ್ತಿರುವ ಆರೋಪದ ಮೇಲೆ 250 ಟ್ವಿಟರ್​ ಖಾತೆಗಳನ್ನು ಹೆಸರಿಸಿ ಅವನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್​ ಬಳಿ ಈ ಮೊದಲು ಕೋರಿತ್ತು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಕಳೆದ ಗುರುವಾರವೇ ಟ್ವಿಟ್ಟರ್​ಗೆ ಈ ನೋಟಿಸ್​ ನೀಡಿದೆ. ಐಟಿ ಇಲಾಖೆ ಹೇಳುವ ಪ್ರಕಾರ ಅವರು ಉಲ್ಲೇಖಿಸಿರುವ 1,178 ಟ್ವಿಟ್ಟರ್​ ಖಾತೆಗಳಿಗೆ ಖಲಿಸ್ತಾನ ಇಲ್ಲವೇ ಪಾಕಿಸ್ತಾನದ ಲಿಂಕ್​ ಇದೆಯಂತೆ. ಇದರಿಂದ ದೇಶದ ಸೌಹಾರ್ದತೆ ಹಾಳಾಗಲಿದೆ ಎಂಬುದು ಕೇಂದ್ರ ಸರ್ಕಾರದ ಆರೋಪ.

ರೈತ ಪ್ರತಿಭಟನೆ ವಿಚಾರ ಇಟ್ಟುಕೊಂಡು ನಕಲಿ ಸುದ್ದಿ ಹರಡುತ್ತಿರುವ ಹಾಗೂ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವವರ ವಿರುದ್ಧ ಟ್ವಿಟ್ಟರ್​ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಮೂಲಕ ಭಾರತದ ನೀತಿಯನ್ನು ಅವರು​ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವುದು ಕೇಂದ್ರ ಸರ್ಕಾರದ ಆರೋಪವಾಗಿದೆ. ಈಗ ಉಲ್ಲೇಖ ಮಾಡಿರುವ ಟ್ವಿಟ್ಟರ್​ ಖಾತೆಗಳು ಕೂಡ ದೇಶಕ್ಕೆ ತೊಂದರೆ ತಂದೊಡ್ಡಬಹುದು. ಹೀಗಾಗಿ ಅವನ್ನು ರದ್ದು ಮಾಡಬೇಕು ಎಂಬುದು ಕೇಂದ್ರ ಸರ್ಕಾರ ಕಳಕಳಿ.

ಇನ್ನು, ಇತ್ತೀಚೆಗಷ್ಟೇ ವೈಯಕ್ತಿಕ ಕಾರಣ ನೀಡಿ ಟ್ವಿಟ್ಟರ್​ ಇಂಡಿಯಾದ ಪಬ್ಲಿಕ್​ ಪಾಲಿಸಿ ಮಹಿಮಾ ಕೌಲ್​ ರಾಜೀನಾಮೆ ನೀಡಿದ್ದರು. ಕೌಲ್​ ಮಾರ್ಚ್​ವರೆಗೆ ಕಾರ್ಯ ನಿರ್ವಹಿಸಲಿದ್ದು, ನಂತರ ಟ್ವಿಟ್ಟರ್​ ತೊರೆಯಲಿದ್ದಾರೆ. ಒತ್ತಡಕ್ಕೆ ಮಣಿದು ಕೌಲ್​ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತಿದೆ. ಆದರೆ, ಇದನ್ನು ಅವರು ಅಲ್ಲಗಳೆದಿದ್ದಾರೆ.

ಜನವರಿ 26ರಂದು ನಡೆದ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ರ್ಯಾಲಿ ವೇಳೆ ಖಲಿಸ್ತಾನ ​ ಬಾವುಟ ಹಾರಾಡಿದ್ದವು. ಈ ಮೂಲಕ ರೈತರ ಪ್ರತಿಭಟನೆಗೆ ಖಲಿಸ್ತಾನ​ ಲಿಂಕ್​ ಸಿಕ್ಕಿತ್ತು.

ಟ್ರಂಪ್​ ಟ್ವಿಟ್ಟರ್​ ಖಾತೆ ರದ್ದುಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಇದೇ ಮಹಿಳೆ! ಪ್ರಕ್ರಿಯೆ ಹೇಗಿತ್ತು ಗೊತ್ತಾ?

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ