AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂಡೋ-ಚೀನಾ’ ಗಡಿಯಲ್ಲಿ ಬಿಗ್ ಇಂಪ್ಯಾಕ್ಟ್, ಗಡಿಯಿಂದ ಹೊರನಡೆದ ಚೀನಿ ಸೈನಿಕರ ದಂಡು!

ದೆಹಲಿ: ಪದೇ ಪದೆ ಗಡಿಯಲ್ಲಿ ಕ್ಯಾತೆ ತೆಗೆಯೋದು, ಕಿರಿಕಿರಿ ಮಾಡಿ ತಾನೇ ಬಲಿಷ್ಠ ಅಂತಾ ಪೋಸ್ ಬೇರೆ ಕೊಡೋದು. ಈ ರೋಗ ಚೀನಾಗೆ ಇನ್ನೂ ವಾಸಿಯಾಗಿಲ್ಲ. ವಿಶ್ವಕ್ಕೇ ಕೊರೊನಾ ಅನ್ನೋ ಮಾರಣಾಂತಿಕ ಸೋಂಕು ಹಬ್ಬಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಚೀನಿಯರು, ಗಡಿ ಕ್ಯಾತೆಯ ಕಿರಿಕ್ ಅನ್ನೂ ಬಿಡುತ್ತಿಲ್ಲ. ಹೀಗೆ ಭಾರತದ ಗಡಿ ಬಳಿ ನುಸುಳಿ ಬೇಕಾಬಿಟ್ಟಿ ವರ್ತಿಸಿ ಸೈಲೆಂಟ್ ಆಗಿದ್ದಾರೆ. ಅಷ್ಟೇ ಅಲ್ಲ ಚೀನಿ ಸೈನಿಕರು ಸದ್ಯ ಗಡಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಚೀನಾ.. ಈ […]

‘ಇಂಡೋ-ಚೀನಾ’ ಗಡಿಯಲ್ಲಿ ಬಿಗ್ ಇಂಪ್ಯಾಕ್ಟ್, ಗಡಿಯಿಂದ ಹೊರನಡೆದ ಚೀನಿ ಸೈನಿಕರ ದಂಡು!
ಆಯೇಷಾ ಬಾನು
ಆಯೇಷಾ ಬಾನು|

Updated on:Jun 10, 2020 | 2:19 PM

Share

ದೆಹಲಿ: ಪದೇ ಪದೆ ಗಡಿಯಲ್ಲಿ ಕ್ಯಾತೆ ತೆಗೆಯೋದು, ಕಿರಿಕಿರಿ ಮಾಡಿ ತಾನೇ ಬಲಿಷ್ಠ ಅಂತಾ ಪೋಸ್ ಬೇರೆ ಕೊಡೋದು. ಈ ರೋಗ ಚೀನಾಗೆ ಇನ್ನೂ ವಾಸಿಯಾಗಿಲ್ಲ. ವಿಶ್ವಕ್ಕೇ ಕೊರೊನಾ ಅನ್ನೋ ಮಾರಣಾಂತಿಕ ಸೋಂಕು ಹಬ್ಬಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಚೀನಿಯರು, ಗಡಿ ಕ್ಯಾತೆಯ ಕಿರಿಕ್ ಅನ್ನೂ ಬಿಡುತ್ತಿಲ್ಲ. ಹೀಗೆ ಭಾರತದ ಗಡಿ ಬಳಿ ನುಸುಳಿ ಬೇಕಾಬಿಟ್ಟಿ ವರ್ತಿಸಿ ಸೈಲೆಂಟ್ ಆಗಿದ್ದಾರೆ. ಅಷ್ಟೇ ಅಲ್ಲ ಚೀನಿ ಸೈನಿಕರು ಸದ್ಯ ಗಡಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಚೀನಾ.. ಈ ಹೆಸರು ಕೇಳಿದ್ರೆ ಸಾಕು ನೆರೆ-ಹೊರೆಯ ದೇಶಗಳು ಹಲ್ಲು ಮಸೆಯುತ್ತವೆ. ನೀನಾ ಚೀನಾ ಅಂತಾ ಗುಟುರು ಹಾಕ್ತವೆ. ಯಾಕಂದ್ರೆ ಚೀನಿಯರು ಮಾಡೋ ಕಿರಿಕ್ ಹಾಗೂ ತೆಗೆಯೋ ಕ್ಯಾತೆ ಅಂಥಾದ್ದು. ಅದೆಂಥ ಶಾಂತ ಮನಸ್ಸಿನ ರಾಷ್ಟ್ರವಾದರೂ, ಚೀನಾ ಮಾಡೋ ಕಿರಿಕಿರಿಗೆ ರಕ್ತ ಕುದಿಯದೇ ಇರಲ್ಲ. ಬೆಂಕಿ ಕಾರದೆ ಸೈಲೆಂಟ್ ಆಗಿಯೂ ಇರಕ್ಕೆ ಆಗಲ್ಲ. ಅದರಲ್ಲೂ ಭಾರತದ ವಿರುದ್ಧ ಪದೇಪದೆ ವಿಷಕಾರೋ ಚೀನಿಯರಿಗೆ ಸದ್ಯದ ಮಟ್ಟಿಗೆ ಒಂದಷ್ಟು ಬುದ್ಧಿ ಬಂದಂತೆ ಕಾಣ್ತಿದೆ. ಇದೇ ಕಾರಣಕ್ಕೆ ಗಡಿಯಲ್ಲಿ ಸ್ವಲ್ಪ ಶಾಂತ ವಾತಾವರಣ ನಿರ್ಮಾಣವಾಗಿದೆ.

ಕಣಿವೆಯಿಂದ 2.5 ಕಿ.ಮೀ. ಹಿಂದಕ್ಕೆ ಚೀನಿ ಮಿಲಿಟರಿ ಜೂಟ್! ಯೆಸ್, ಕೆಲದಿನಗಳ ಹಿಂದಷ್ಟೇ ಚೀನಾ ಹಾಗೂ ಭಾರತದ ಉನ್ನತಮಟ್ಟದ ಅಧಿಕಾರಿಗಳ ಜೊತೆ ಬಹುಮುಖ್ಯ ಚರ್ಚೆ ನಡೆದಿತ್ತು. ಗಡಿಯಲ್ಲಿ ವಿವಾದ ಹಾಗೂ ಅಶಾಂತ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಈ ಮಾತುಕತೆ ಭಾರಿ ಕುತೂಹಲ ಕೆರಳಿಸಿತ್ತು. ಆದ್ರೆ ಈ ಮಾತುಕತೆಯಿಂದ ಅಂದುಕೊಂಡಷ್ಟು ಪ್ರಯೋಜನ ಆಗಲಿಲ್ಲ. ಸಭೆ ಕೇವಲ ಚರ್ಚೆಗೆ ಸೀಮಿತವಾಗಿತ್ತು. ಆದ್ರೆ ಅಧಿಕಾರಿಗಳ ನಡುವೆ ಮಾತುಕತೆ ನಡೆದ ಕೆಲವೇ ದಿನದಲ್ಲಿ ಚೀನಾ ಸೇನೆ ಗಾಲ್ವಾನ್ ಕಣಿವೆಯಿಂದ ಸುಮಾರು ಎರಡೂವರೆ ಕಿಲೋಮೀಟರ್ ಹಿಂದೆ ಸರಿದಿದೆ. ಇದೇರೀತಿ ಪ್ಯಾಟ್ರೋಲಿಂಗ್ ಪಾಯಿಂಟ್ 15 ಹಾಗೂ ಹಾಟ್ ಸ್ಪ್ರಿಂಗ್ ಏರಿಯಾದಿಂದಲೂ ಡ್ರ್ಯಾಗನ್ ಸೇನೆ ಕಾಲ್ಕಿತ್ತಿದೆ.

ಭಾರತೀಯ ಸೇನೆಯಿಂದಲೂ ಮಹತ್ವದ ಕ್ರಮ! ಹೌದು, ಚೀನಾ ಭಾರತದ ಗಡಿ ಸಮೀಪದಿಂದ ಹೊರಗೆ ಹೋಗುತ್ತಿದ್ದಂತೆ ಚೀನಾ ಕೂಡ ಮಹತ್ವದ ಕ್ರಮವನ್ನ ಕೈಗೊಂಡಿದೆ. ಇದು ಗಡಿಯಲ್ಲಿ ಮತ್ತಷ್ಟು ಶಾಂತಿ ನೆಲೆಸುವಂತೆ ಮಾಡಿದೆ. ಚೀನಿ ಸೇನೆ ಹಿಂದಕ್ಕೆ ಸರಿದಂತೆ ಭಾರತೀಯ ಸೈನಿಕರು ಕೂಡ ಲಾಡಕ್​ನ ಕೆಲವು ಪ್ರದೇಶಗಳಿಂದ ವಾಪಸ್ ಬಂದಿದ್ದಾರೆ. ಈ ಮೂಲಕ ಉಭಯ ದೇಶಗಳು ಯುದ್ಧ ವಾತಾವರಣದಿಂದ ಲಡಾಕ್ ಅನ್ನ ಮುಕ್ತಗೊಳಿಸಿದ್ದಾರೆ.

ಒಟ್ನಲ್ಲಿ ಅದೇನೆ ಇರಲಿ, ಚೀನಾ ಮಾತ್ರ ತನ್ನ ನರಿ ಬುದ್ಧಿ ಬಿಡೋದಿಲ್ಲ. ಒಬ್ಬರು, ಮತ್ತೊಬ್ಬರ ಮಧ್ಯೆ ಫಿಟಿಂಗ್ ಇಟ್ಟು ಆಟ ಆಡೋದು ಡ್ರ್ಯಾಗನ್​ಗೆ ಖಯಾಲಿಯಾಗಿದೆ. ಹೀಗೆ ಗಡಿ ಕಿರಿಕ್ ಚೀನಾ ಡಬಲ್ ಗೇಮ್ ಮನಸ್ಥಿತಿಯನ್ನ ಬಟಾಬಯಲು ಮಾಡಿದ್ದು, ವಿಶ್ವದ ಮುಂದೆ ಚೀನಾ ಸೇನೆಯ ಮಾನ ಹರಾಜಾಗುವಂತೆ ಮಾಡಿದೆ.

Published On - 7:19 am, Wed, 10 June 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?