ಪ್ರತಿಭಟನಾ ನಿರತ ರೈತರಿಗೆ ಶಾಕ್​ ನೀಡಿದ ಫೇಸ್​ಬುಕ್​!: ಲೈವ್​ ಬಂದ ಪೇಜ್​ ಬ್ಲಾಕ್

ಕಿಸಾನ್​ ಏಕ್ತಾ ಮೋರ್ಚಾ ಹೆಸರಿನ ಫೇಸ್​ಬುಕ್​ ಪೇಜ್​ಗೆ 7 ಲಕ್ಷ ಜನ ಹಿಂಬಾಲಕರಿದ್ದರು. ರೈತರು ಪ್ರತಿಭಟನೆ ಮಾಡುತ್ತಿರುವಾಗ ಈ ಫೇಸ್​ಬುಕ್​ ಖಾತೆಯಿಂದ ಲೈವ್​ ಬರಲಾಗುತ್ತಿತ್ತು. ಆದರೆ, ಈ ಫೇಸ್​ಬುಕ್​ ಪೇಜ್​ಅನ್ನು ಈಗ ತೆಗೆದು ಹಾಕಲಾಗಿದೆ.

ಪ್ರತಿಭಟನಾ ನಿರತ ರೈತರಿಗೆ ಶಾಕ್​ ನೀಡಿದ ಫೇಸ್​ಬುಕ್​!: ಲೈವ್​ ಬಂದ ಪೇಜ್​ ಬ್ಲಾಕ್
ಪ್ರಾತಿನಿಧಿಕ ಚಿತ್ರ

Updated on: Dec 20, 2020 | 10:04 PM

ನವದೆಹಲಿ: ಪ್ರತಿಭಟನಾ ನಿರತ ರೈತರು ಹೋರಾಟ ಮಾಡುವುದರ ಜೊತೆಗೆ ಪ್ರತಿಭಟನೆಯ ಬಗ್ಗೆ ಎಲ್ಲರಿಗೂ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಲೈವ್​ ಬಂದ ಖಾತೆಗಳನ್ನು ಫೇಸ್​ಬುಕ್​ ಬ್ಲಾಕ್​ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಿಸಾನ್​ ಏಕ್ತಾ ಮೋರ್ಚಾ ಹೆಸರಿನ ಫೇಸ್​ಬುಕ್​ ಪೇಜ್​ಗೆ 7 ಲಕ್ಷ ಜನ ಹಿಂಬಾಲಕರಿದ್ದರು. ರೈತರು ಪ್ರತಿಭಟನೆ ಮಾಡುತ್ತಿರುವಾಗ ಈ ಫೇಸ್​ಬುಕ್​ ಖಾತೆಯಿಂದ ಲೈವ್​ ಬರಲಾಗುತ್ತಿತ್ತು. ಆದರೆ, ಈ ಫೇಸ್​ಬುಕ್​ ಪೇಜ್​ಅನ್ನು ಈಗ ತೆಗೆದು ಹಾಕಲಾಗಿದೆ. ಕಮ್ಯುನಿಟಿ ಸ್ಟ್ಯಾಂಡರ್ಡ್​ಗಳನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಈ ಫೇಸ್​​ಬುಕ್​ ಪೇಜ್​ಗಳನ್ನು ಡಿಲೀಟ್​ ಮಾಡಲಾಗಿದೆಯಂತೆ.

ಇನ್ನು, ಕಿಸಾನ್​ ಏಕ್ತಾ ಮೋರ್ಚಾ ಇನ್​​ಸ್ಟಾಗ್ರಾಂ ಖಾತೆಗೂ ತೊಂದರೆ ಉಂಟಾಗಿದೆ. ಇನ್​ಸ್ಟಾಗ್ರಾಂ ಖಾತೆ ಮೂಲಕವೂ ರೈತರು ಲೈವ್​ ಬರುತ್ತಿದ್ದರು. ಆದರೆ, ಈಗ ಯಾವುದೇ ಹೊಸ ಪೋಸ್ಟ್​ಗಳನ್ನು ಹಾಕಲು ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕಳೆದ ಮೂರು ವಾರಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. 40ಕ್ಕೂ ಹೆಚ್ಚು ರೈತರ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ದಿನದಿಂದ ದಿನಕ್ಕೆ ಪ್ರತಿಭಟನೆ ಕಾವು ಹೆಚ್ಚುತ್ತಲೇ ಇರುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Delhi Chalo | ದೆಹಲಿ ಗಡಿಭಾಗದಲ್ಲಿ ವಿಪರೀತ ಚಳಿಗೆ ಪ್ರತಿಭಟನಾ ನಿರತ ರೈತ ಸಾವು

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us