AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಬರಿಮಲೆಗೆ ತೆರಳುವವರ ಗಮನಕ್ಕೆ; ನಿಮ್ಮೊಂದಿಗೆ ಇರಲೇಬೇಕು ಕೊವಿಡ್​-19 ನೆಗೆಟಿವ್​ ರಿಪೋರ್ಟ್

ಡಿಸೆಂಬರ್​ 31ರಿಂದ ಜನವರಿ 19ರವರೆಗೆ ಮಕರಸಂಕ್ರಾಂತಿ (ಮಕರವಿಲಕ್ಕು) ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆ ಸಮಯದಲ್ಲಿ ಬೆಟ್ಟ ಹತ್ತುವ ಭಕ್ತರು ಆರ್​ಟಿ-ಪಿಸಿಆರ್​ನಲ್ಲಿ ನೆಗೆಟಿವ್​ ರಿಪೋರ್ಟ್​ ತರಲೇಬೇಕು.

ಶಬರಿಮಲೆಗೆ ತೆರಳುವವರ ಗಮನಕ್ಕೆ; ನಿಮ್ಮೊಂದಿಗೆ ಇರಲೇಬೇಕು ಕೊವಿಡ್​-19 ನೆಗೆಟಿವ್​ ರಿಪೋರ್ಟ್
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Dec 20, 2020 | 8:23 PM

Share

ತಿರುವನಂತಪುರಂ: ಮುಂದಿನ ಭಾನುವಾರ (ಡಿಸೆಂಬರ್​ 27)ರಿಂದ ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ತೆರಳಬಹುದಾಗಿದ್ದು, ಆದರೆ ಕೈಯಲ್ಲಿ ಪೂಜಾ ಸಾಮಗ್ರಿಗಳಷ್ಟೇ ಅಲ್ಲ, ಕೊವಿಡ್​-19 ಆರ್​ಟಿ-ಪಿಸಿಆರ್ ನೆಗೆಟಿವ್​ ರಿಪೋರ್ಟ್ ಇರಲೇಬೇಕು..

ಆ್ಯಂಟಿಜೆನ್​ ಟೆಸ್ಟ್ ರಿಪೋರ್ಟ್ ಸಾಕಾಗಲ್ಲ ! ಕೊರೊನಾ ವೈರಸ್ ಕಾರಣದಿಂದ ಬಹುತೇಕ ಎಲ್ಲ ದೇವಸ್ಥಾನಗಳಲ್ಲೂ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಕ್ಕೆ ಅಯ್ಯಪ್ಪಸ್ವಾಮಿಯ ಶಬರಿಮಲೆ ದೇಗುಲವೂ ಹೊರತಲ್ಲ. ಡಿ.27ರಿಂದ ಶಬರಿಮಲೆ ಪ್ರವೇಶಕ್ಕೆ ಕೇರಳ ಹೈಕೋರ್ಟ್ ಅನುಮತಿ ನೀಡಿದ್ದು, ಈ ಬಾರಿ 5000 ಯಾತ್ರಾರ್ಥಿಗಳು ಆಗಮಿಸಬಹುದು ಎಂದು ಹೇಳಿದೆ. ಅದರ ಬೆನ್ನಲ್ಲೇ ತಿರುವಾಂಕೂರು ದ್ವೇವಸ್ವಂ ಮಂಡಳಿ (TDB) ಕೊವಿಡ್​-19 ನೆಗೆಟಿವ್​ ರಿಪೋರ್ಟ್ ಕಡ್ಡಾಯ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅದರಲ್ಲೂ ಭಕ್ತರು ಆ್ಯಂಟಿಜೆನ್​ ಟೆಸ್ಟ್ ರಿಪೋರ್ಟ್ ತಂದರೆ ಸಾಲದು,  ಆರ್​ಟಿ-ಪಿಸಿಆರ್ ನೆಗೆಟಿವ್​ ರಿಪೋರ್ಟ್ ಹೊಂದಿರಬೇಕು. ಅದರಲ್ಲೂ ದೇಗುಲಕ್ಕೆ ಭೇಟಿ ನೀಡುವ ಎರಡೇ ದಿನ ಮೊದಲು ಪಡೆದ ರಿಪೋರ್ಟ್​ ಆಗಿರಬೇಕು. ಅದಕ್ಕೂ ಮೊದಲಿನ ಕೊವಿಡ್​ ರಿಪೋರ್ಟ್​ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.

ಹಾಗೇ ಡಿಸೆಂಬರ್​ 31ರಿಂದ ಜನವರಿ 19ರವರೆಗೆ ಮಕರಸಂಕ್ರಾಂತಿ (ಮಕರವಿಲಕ್ಕು) ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆ ಸಮಯದಲ್ಲಿ ಬೆಟ್ಟ ಹತ್ತುವ ಭಕ್ತರು ಆರ್​ಟಿ-ಪಿಸಿಆರ್​ನಲ್ಲಿ ನೆಗೆಟಿವ್​ ರಿಪೋರ್ಟ್​ ತರಲೇಬೇಕು. ಅದಿಲ್ಲದವರಿಗೆ ಯಾವ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು TDB ತಿಳಿಸಿದೆ. ಈ ಮೊದಲು ಬರಿ ಆ್ಯಂಟಿಜೆನ್​ ಟೆಸ್ಟ್ ರಿಪೋರ್ಟ್ ಮಾತ್ರ ಸಾಕು ಎಂದಿದ್ದ ಆಡಳಿತ ಮಂಡಳಿ, ಇದೀಗ ಹೆಚ್ಚಿನ ಜನರು ಸೇರುವುದರಿಂದ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಅದರಲ್ಲೂ ಶಬರಿಮಲೆಯಲ್ಲಿ ಸಂಕ್ರಾಂತಿ ಸಮಯದಲ್ಲಿ ಪ್ರತಿವರ್ಷವನ್ನೂ ಲಕ್ಷಾಂತರ ಭಕ್ತರು ಸೇರುತ್ತಾರೆ. ಮಾಲೆ ಹಾಕಿ ಬೆಟ್ಟ ಹತ್ತುವ ಅಯ್ಯಪ್ಪನ ಭಕ್ತರು ಸಂಕ್ರಾಂತಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಸಾಮಾನ್ಯವಾಗಿ ಜನವರಿ 15ರಂದು ದರ್ಶನವಾಗುವ ಮಕರಜ್ಯೋತಿಯನ್ನು ಕಣ್ತುಂಬಿಕೊಂಡು ಅಲ್ಲಿಂದ ವಾಪಸ್​ ಆಗುತ್ತಾರೆ. ಈ ಬಾರಿ ಕೊರೊನಾ ಭಯ ಇರುವುದರಿಂದ ಯಾತ್ರಾರ್ಥಿಗಳು ಮಾಸ್ಕ್​ ಮತ್ತಿತರ ಸಿದ್ಧತೆಯೊಂದಿಗೇ ಹೋಗಬೇಕಾಗಿದೆ.

ಕಡಂದಲೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಂಕ್ತಿಭೇದ ಆರೋಪ: ಅರ್ಚಕರ ನಡೆಗೆ ಭಕ್ತರ ಆಕ್ರೋಶ

Published On - 8:17 pm, Sun, 20 December 20

Follow Us
Lakshmi Hegde
Lakshmi Hegde
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!