ವಿಶ್ವಕ್ಕೆಲ್ಲಾ ಕೊರೊನಾ ಹಂಚಿದ ಚೀನಾ, ಈಗ ಭಾರತದಲ್ಲಿ ಜೈವಿಕ ವಾರ್​ ಶುರು ಮಾಡಿದೆ

ಗದಗ:ವಿಶ್ವಕ್ಕೆಲ್ಲಾ ಕೊರೊನಾ ಸೋಂಕು ಹರಡಿದ ಚೀನಾ, ಈಗ ಭಾರತದಾದ್ಯಂತ ಜೈವಿಕ ವಾರ್​ ನಡೆಸಲು ಸಂಚು ರೂಪಿಸಿದೆ. ಚೀನಾದಿಂದ ಭಾರತದ ರಾಜ್ಯಗಳಿಗೆ ನಕಲಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಹಿನ್ನೆಲೆಯಿಂದಾಗಿ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದ್ದು, ಅನಾಮಧೇಯರು ಮನೆಗೆ ತಂದು ಕೊಡುವ ಪಾರ್ಸೆಲ್​ಗಳನ್ನು ರೈತರು ತೆಗೆದುಕೊಳ್ಳಬಾರದೆಂದು ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಚೀನಾದಿಂದ ಸರಬರಾಜಾಗಿರುವ ಬಿತ್ತನೆ ಬೀಜಗಳಲ್ಲಿ, ಹಲವು […]

ವಿಶ್ವಕ್ಕೆಲ್ಲಾ ಕೊರೊನಾ ಹಂಚಿದ ಚೀನಾ, ಈಗ ಭಾರತದಲ್ಲಿ ಜೈವಿಕ ವಾರ್​ ಶುರು ಮಾಡಿದೆ
ಸಾಧು ಶ್ರೀನಾಥ್​

Updated on: Aug 25, 2020 | 11:05 AM

ಗದಗ:ವಿಶ್ವಕ್ಕೆಲ್ಲಾ ಕೊರೊನಾ ಸೋಂಕು ಹರಡಿದ ಚೀನಾ, ಈಗ ಭಾರತದಾದ್ಯಂತ ಜೈವಿಕ ವಾರ್​ ನಡೆಸಲು ಸಂಚು ರೂಪಿಸಿದೆ.

ಚೀನಾದಿಂದ ಭಾರತದ ರಾಜ್ಯಗಳಿಗೆ ನಕಲಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಹಿನ್ನೆಲೆಯಿಂದಾಗಿ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದ್ದು, ಅನಾಮಧೇಯರು ಮನೆಗೆ ತಂದು ಕೊಡುವ ಪಾರ್ಸೆಲ್​ಗಳನ್ನು ರೈತರು ತೆಗೆದುಕೊಳ್ಳಬಾರದೆಂದು ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

ಚೀನಾದಿಂದ ಸರಬರಾಜಾಗಿರುವ ಬಿತ್ತನೆ ಬೀಜಗಳಲ್ಲಿ, ಹಲವು ರೀತಿಯ ವೈರಲ್ ರೋಗಗಳು ಹರಡುವ ಸಾಧ್ಯತೆಗಳಿವೆ. ಹೀಗಾಗಿ ರೈತರ ಮನೆಗೆ ಯಾವುದಾದರೂ ಅನುಮಾನಸ್ಪದ ವಸ್ತುಗಳು ಪಾರ್ಸೆಲ್ ಬಂದರೆ ಕೂಡಲೇ ರೈತರು, ಕೃಷಿ ಇಲಾಖೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೃಷಿ ಇಲಾಖೆ ಮನವಿ ಮಾಡಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us