AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿತ ತಾಯಿ ಸತ್ತಳೆಂದು ನಂಬಿಸಿ.. Free ಆಟೋ ಸವಾರಿ ಜೊತೆಗೆ ಹಣ ಸಹ ದೋಚಿದ ಐನಾತಿ ಭೂಪ!

ತಿರುವನಂತಪುರಂ: ತನ್ನ ತಾಯಿ ಕೊರೊನಾದಿಂದ ಮೃತಪಟ್ಟಿದ್ದಾಳೆ ಎಂದು ಚಾಲಕನನ್ನು ನಂಬಿಸಿ, ಆತನ ಆಟೋದಲ್ಲಿ ಸುಮಾರು 300 ಕಿಲೋಮೀಟರ್ ಪ್ರಯಾಣ ಮಾಡಿ, ಕೊನೆಗೆ ಚಾಲಕನಿಗೇ ಯಾಮಾರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೋಸ ಹೋದ ಆಟೋ ಚಾಲಕ ರೇವಾಧ್ ಎಂದು ತಿಳಿದುಬಂದಿದ್ದು ಮೋಸ ಮಾಡಿದ ವ್ಯಕ್ತಿ ನಿಶಾಂತ್ ಎಂದು ಗುರುತಿಸಲಾಗಿದೆ. ತನ್ನ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧನಾಗಿದ್ದ ರೇವಾಧ್​ನ ಬಳಿಗೆ ಬಂದ ನಿಶಾಂತ್, ತಿರುವನಂತಪುರಂಗೆ ಯಾವ ಬಸ್​ಗಳಿವೆ ಎಂದು ಕೇಳಿದ್ದಾನೆ. ಆದರೆ ಕೊನೆಯ ಬಸ್​ ಹೋಗಿದ್ದರಿಂದ, ರೇವಾಧ್ ಯಾವ […]

ಸೋಂಕಿತ ತಾಯಿ ಸತ್ತಳೆಂದು ನಂಬಿಸಿ.. Free ಆಟೋ ಸವಾರಿ ಜೊತೆಗೆ ಹಣ ಸಹ ದೋಚಿದ ಐನಾತಿ ಭೂಪ!
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Aug 24, 2020 | 7:22 PM

ತಿರುವನಂತಪುರಂ: ತನ್ನ ತಾಯಿ ಕೊರೊನಾದಿಂದ ಮೃತಪಟ್ಟಿದ್ದಾಳೆ ಎಂದು ಚಾಲಕನನ್ನು ನಂಬಿಸಿ, ಆತನ ಆಟೋದಲ್ಲಿ ಸುಮಾರು 300 ಕಿಲೋಮೀಟರ್ ಪ್ರಯಾಣ ಮಾಡಿ, ಕೊನೆಗೆ ಚಾಲಕನಿಗೇ ಯಾಮಾರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೋಸ ಹೋದ ಆಟೋ ಚಾಲಕ ರೇವಾಧ್ ಎಂದು ತಿಳಿದುಬಂದಿದ್ದು ಮೋಸ ಮಾಡಿದ ವ್ಯಕ್ತಿ ನಿಶಾಂತ್ ಎಂದು ಗುರುತಿಸಲಾಗಿದೆ.

ತನ್ನ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧನಾಗಿದ್ದ ರೇವಾಧ್​ನ ಬಳಿಗೆ ಬಂದ ನಿಶಾಂತ್, ತಿರುವನಂತಪುರಂಗೆ ಯಾವ ಬಸ್​ಗಳಿವೆ ಎಂದು ಕೇಳಿದ್ದಾನೆ. ಆದರೆ ಕೊನೆಯ ಬಸ್​ ಹೋಗಿದ್ದರಿಂದ, ರೇವಾಧ್ ಯಾವ ಬಸ್ಸ್​ಗಳಿಲ್ಲ ಎಂದು ತಿಳಿಸಿದ್ದಾನೆ.

ಆಗ ನಿಶಾಂತ್ ತಿರುವನಂತಪುರಂ ಆಸ್ಪತ್ರೆಯಲ್ಲಿ ನನ್ನ ತಾಯಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾಳೆ. ಹಾಗಾಗಿ ನಾನು ಅಲ್ಲಿಗೆ ಹೋಗಬೇಕಿದೆ, ಆದರೆ ಟ್ಯಾಕ್ಸಿ ಮಾಡಿಕೊಂಡು ಹೋಗುವಷ್ಟು ಹಣ ನನ್ನಲ್ಲಿ ಇಲ್ಲ. ದಯಾಮಾಡಿ ನಿಮ್ಮ ಆಟೋದಲ್ಲಿ ನನ್ನನ್ನು ತಿರುವನಂತಪುರಂಗೆ ತಲುಪಿಸಿ ಎಂದು ಕೇಳಿಕೊಂಡಿದ್ದಾನೆ. ಅಲ್ಲದೆ, ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಆಸ್ಪತ್ರೆಯನ್ನು ತಲುಪಿದ ನಂತರ ನಿಮ್ಮ ಬಾಡಿಗೆ ಹಣವನ್ನು ನೀಡುತ್ತೇನೆಂದು ನಿಶಾಂತ್ ವಿನಂತಿಸಿಕೊಂಡಿದ್ದಾನೆ.

ನಿಶಾಂತ್​ ತಾಯಿಯ ಮರಣದ ವಿಚಾರ ತಿಳಿದ ರೇವಾಧ್ 6,500 ರೂಪಾಯಿ ಎಂದು ಬಾಡಿಗೆ ನಿಗದಿ ಮಾಡಿಕೊಂಡು, ತಿರುವನಂತಪುರಂ ಕಡೆಗೆ ಹೊರಟಿದ್ದಾನೆ. ರಾತ್ರಿಯಿಡೀ ಆಟೋ ಚಲಾಯಿಸಿ ರೇವಾಧ್ ಮುಂಜಾನೆ ಆರು ಗಂಟೆಗೆ ತಿರುವನಂತಪುರಂ ತಲುಪಿದ್ದಾನೆ.

ಈ ವೇಳೆ ಆಟೋದಲ್ಲಿ ಕುಳಿತಿದ್ದ ನಿಶಾಂತ್ ನನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬೇಕಾಗಿದೆ. ಹಾಗಾಗಿ ಸ್ವಲ್ಪ ಹಣ ನೀಡಿ ಎಂದು ಕೇಳಿಕೊಂಡಿದ್ದಾನೆ. ಹೀಗಾಗಿ ರೇವಾಧ್ ಆತನಿಗೆ ಒಂದು ಸಾವಿರ ರೂಪಾಯಿ ನೀಡಿದ್ದಾನೆ.

ಹಣ ಪಡೆದ ಕೂಡಲೇ ನಿಶಾಂತ್ ಅಂಗಡಿಯೊಂದಕ್ಕೆ ತೆರಳಿ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಗಲಿಬಿಲಿಗೊಂಡ ರೇವಾಧ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ನಿಶಾಂತ್​ನನ್ನ ಬಂಧಿಸಿದ್ದಾರೆ. ಈತನಿಂದ ಮೋಸಕ್ಕೊಳಗಾದ ರೇವಾಧ್​ಗೆ ಸ್ಥಳೀಯರು ಧನ ಸಹಾಯ ಮಾಡಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ.

ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ