AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 160 ರೂ.ಗೆ 16 ಜಿಬಿ ಡೇಟಾ ಬಳಸ್ತಿರೋದು ದುರಂತ: AirTel Boss ಮಿತ್ತಲ್‌

ನವೆದೆಹಲಿ: ಕೇವಲ 160 ರೂಪಾಯಿಗಳನ್ನು ಕೊಟ್ಟು ತಿಂಗಳಿಗೆ 16 ಜಿಬಿ ಡೇಟಾ ಬಳಸುತ್ತಿರೋದು ನಿಜಕ್ಕೂ ಒಂದು ದುರಂತವೇ ಸರಿ ಎಂದು ಏರ್‌ಟೆಲ್‌ ಮಾಲೀಕ ಸುನೀಲ್‌ ಮಿತ್ತಲ್‌ ಕಿಡಿಕಾರಿದ್ದಾರೆ. ಕನಿಷ್ಟ 200-250 ರೂ. ಇರಬೇಕು, ಇಲ್ಲವಾದ್ರೆ ಕಷ್ಟದ ದಿನಗಳು ಬರಲಿವೆ ದೆಹಲಿಯಲ್ಲಿ ಏರ್‌ಟೆಲ್‌ ಎಕ್ಸಿಕ್ಯೂಟಿವ್‌ ಒಬ್ಬರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುನೀಲ್‌ ಮಿತ್ತಲ್‌, ನಾವು ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳಲ್ಲಿರುವಂತೆ ತಿಂಗಳಿಗೆ 50 ರಿಂದ 60 ಡಾಲರ್‌ ಕೇಳುತ್ತಿಲ್ಲ. ಬದಲು ಬಳಸುವ 16 ಜಿಬಿ ಡೇಟಾಕ್ಕೆ […]

ಕೇವಲ 160 ರೂ.ಗೆ 16 ಜಿಬಿ ಡೇಟಾ ಬಳಸ್ತಿರೋದು ದುರಂತ: AirTel Boss ಮಿತ್ತಲ್‌
Guru
Guru| Edited By: ಸಾಧು ಶ್ರೀನಾಥ್​|

Updated on:Aug 25, 2020 | 12:52 PM

Share

ನವೆದೆಹಲಿ: ಕೇವಲ 160 ರೂಪಾಯಿಗಳನ್ನು ಕೊಟ್ಟು ತಿಂಗಳಿಗೆ 16 ಜಿಬಿ ಡೇಟಾ ಬಳಸುತ್ತಿರೋದು ನಿಜಕ್ಕೂ ಒಂದು ದುರಂತವೇ ಸರಿ ಎಂದು ಏರ್‌ಟೆಲ್‌ ಮಾಲೀಕ ಸುನೀಲ್‌ ಮಿತ್ತಲ್‌ ಕಿಡಿಕಾರಿದ್ದಾರೆ.

ಕನಿಷ್ಟ 200-250 ರೂ. ಇರಬೇಕು, ಇಲ್ಲವಾದ್ರೆ ಕಷ್ಟದ ದಿನಗಳು ಬರಲಿವೆ ದೆಹಲಿಯಲ್ಲಿ ಏರ್‌ಟೆಲ್‌ ಎಕ್ಸಿಕ್ಯೂಟಿವ್‌ ಒಬ್ಬರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುನೀಲ್‌ ಮಿತ್ತಲ್‌, ನಾವು ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳಲ್ಲಿರುವಂತೆ ತಿಂಗಳಿಗೆ 50 ರಿಂದ 60 ಡಾಲರ್‌ ಕೇಳುತ್ತಿಲ್ಲ. ಬದಲು ಬಳಸುವ 16 ಜಿಬಿ ಡೇಟಾಕ್ಕೆ ಕನಿಷ್ಟ 200 ರೂಪಾಯಿ ಅಥವಾ 250 ರೂ.ಗಳಾದ್ರೆ ಟೆಲಿಕಾಂ‌ ಇಂಡಸ್ಟ್ರಿ ಉಳಿಯುತ್ತೆ. ಇಲ್ಲವಾದ್ರೆ ಕಷ್ಟದ ದಿನಗಳು ಬರಲಿವೆ ಎಂದು ಎಚ್ಚರಿಸಿದ್ದಾರೆ.

ಜಾಗತಿಕ ಸಂಕಷ್ಟದ ಸಮಯದಲ್ಲಿ ಟೆಲಿಕಾಂ‌ ಕಂಪನಿಗಳು ಸಾಕಷ್ಟು ಸಹಕಾರ ನೀಡಿವೆ. ಆದ್ರೆ ಕೇವಲ 160 ರೂ.ಗಳನ್ನು ಕೊಟ್ಟು ತಿಂಗಳಿಗೆ 16 ಜಿಬಿ ಡೇಟಾ ಬಳಸಲಾಗುತ್ತಿದೆ. ಅದೂ ಕೂಡಾ ಕೇವಲ ಮನರಂಜನೆ ಅಥವಾ ಸಿನೆಮಾ ನೋಡುವುದಕ್ಕಾಗಿ. ಇದರಿಂದಾಗಿ ಟೆಲಿಕಾಂ‌ ನೆಟ್‌ವರ್ಕ್‌ಗಳು ನೀಡುವ ಇತರೆ ಸೇವೆಗಳನ್ನು ಬಳಸಲಾಗುತ್ತಿಲ್ಲ.

ಬಳಕೆದಾರರ ಈ ವರ್ತನೆಯಿಂದ ಟೆಲಿಕಾಂ‌ ಕಂಪನಿಗಳಿಗೆ ನಷ್ಟವಂಟಾಗುತ್ತಿದೆ. 16 ಜಿಬಿಯಷ್ಟು ಡೇಟಾವನ್ನು ಕೇವಲ ಸಿನೆಮಾಕ್ಕಾಗಿ ಬಳಸುವುದಾದರೇ ಇನ್ನೂ ಹೆಚ್ಚಿನ ಹಣ ನೀಡಿ. ಇದು ಟೆಲಿಕಾಂ‌ ಕಂಪನಿಗಳ ಉಳಿವು-ಬಾಳಿಕೆಗೆ ಸಹಕಾರಿಯಾಗುತ್ತೆ. ಯಾಕಂದ್ರೆ ಇನ್ನೂ ಹೆಚ್ಚಿನ ಫೈಬರ್‌ ಹಾಗೂ ಸಬ್‌ಮೆರಿನ್‌ ಕೇಬಲ್‌ಗಳನ್ನು ಹಾಕಬೇಕಿದೆ. ಜೊತೆಗೆ 5G ನೆಟ್‌ವರ್ಕ್‌ ನೀಡಬೇಕಿದೆ. ಇಲ್ಲವಾದರೆ ಜಾಗತಿಕವಾಗಿ ನಾವು ಹಿಂದುಳಿಯಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

Published On - 12:51 pm, Tue, 25 August 20

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!