AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಲದಲ್ಲಿ Cashಗೆ ಇತ್ತು ಸಿಕ್ಕಾಪಟ್ಟೆ ಡಿಮ್ಯಾಂಡ್​, ಯಾಕೆ?

ದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ,  ಫೆಬ್ರವರಿ 28ರಿಂದ (22.55 ಲಕ್ಷ ಕೋಟಿ ರೂ.) ಜುಲೈ 17ರವರೆಗಿನ ಕಾಲಾವಧಿಯಲ್ಲಿ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿದ್ದ ನಗದಿನಿ ಪ್ರಮಾಣವು 3,24,500 ಕೋಟಿ ರೂ.ಗಳಷ್ಟು ಏರಿಕೆಯಾಗಿತ್ತು. ಹೀಗಾಗಿ, ಜುಲೈ 17ರ ವೇಳೆಗೆ ಸಾರ್ವಜನಿಕರ ಬಳಿಯಿದ್ದ ನಗದಿನ ಪ್ರಮಾಣ  25.8 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು RBI ತಿಳಿಸಿದೆ. ಆದರೆ, ಜುಲೈ 17ರಿಂದ ಜುಲೈ 31 ರವರೆಗೆ, ಅಂದರೆ ಕೇವಲ 15 ದಿನಗಳಲ್ಲಿ ಈ ಮೊತ್ತವು […]

ಕೊರೊನಾ ಕಾಲದಲ್ಲಿ Cashಗೆ ಇತ್ತು ಸಿಕ್ಕಾಪಟ್ಟೆ ಡಿಮ್ಯಾಂಡ್​, ಯಾಕೆ?
ಶೇ 16,000ದಷ್ಟು ಏರಿಕೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Aug 25, 2020 | 3:17 PM

Share

ದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ,  ಫೆಬ್ರವರಿ 28ರಿಂದ (22.55 ಲಕ್ಷ ಕೋಟಿ ರೂ.) ಜುಲೈ 17ರವರೆಗಿನ ಕಾಲಾವಧಿಯಲ್ಲಿ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿದ್ದ ನಗದಿನಿ ಪ್ರಮಾಣವು 3,24,500 ಕೋಟಿ ರೂ.ಗಳಷ್ಟು ಏರಿಕೆಯಾಗಿತ್ತು. ಹೀಗಾಗಿ, ಜುಲೈ 17ರ ವೇಳೆಗೆ ಸಾರ್ವಜನಿಕರ ಬಳಿಯಿದ್ದ ನಗದಿನ ಪ್ರಮಾಣ  25.8 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು RBI ತಿಳಿಸಿದೆ.

ಆದರೆ, ಜುಲೈ 17ರಿಂದ ಜುಲೈ 31 ರವರೆಗೆ, ಅಂದರೆ ಕೇವಲ 15 ದಿನಗಳಲ್ಲಿ ಈ ಮೊತ್ತವು 3,982 ಕೋಟಿ ರೂಪಾಯಿಗಳಷ್ಟು ಇಳಿಕೆ ಕಂಡಿದ್ದು ಇದೀಗ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿರುವ ನಗದಿನ ಮೊತ್ತವು 25.76 ಲಕ್ಷ ಕೋಟಿಗೆ ಇಳಿದಿದೆ.

ಕೇಂದ್ರವು ಲಾಕ್​ಡೌನ್​ ನಿರ್ಬಂಧನೆಗಳನ್ನು ಸಡಿಲಗೊಳಿಸಿದ ಪರಿಣಾಮದಿಂದಾಗಿ ಜೂನ್ ಮತ್ತು ಜುಲೈನಲ್ಲಿ ನಗದು ಕ್ರೋಢೀಕರಣದ ವೇಗವೂ ಕೊಂಚ ತಗ್ಗಿತು ಎಂಬುದು ತಿಳಿದುಬಂದಿದೆ. ಜೊತೆಗೆ, ಲಾಕ್​ಡೌನ್​ನ ಆರಂಭಿಕ ಹಂತದಲ್ಲಿ, E-ಕಾಮರ್ಸ್ ವಹಿವಾಟಿಗೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಜನರು ನೆರೆಹೊರೆಯ ಮಳಿಗೆಗಳನ್ನು ಅವಲಂಬಿಸಬೇಕಾಗಿತ್ತು. ಇದರ ಪರಿಣಾಮವಾಗಿ ನಗದಿನ ಬಳಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಯ್ತು. ಆದ್ದರಿಂದ, ಜನರು ಹೆಚ್ಚಿನ ಪ್ರಮಾಣದಲ್ಲಿ ATM ಮತ್ತು ಬ್ಯಾಂಕ್​ಗಳಿಂದ ಹಣ ಹಿಂಪಡೆದರು.

ಇದಲ್ಲದೆ, ಜನರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಒಂದೇ ಬಾರಿಯಲ್ಲಿ ದೊಡ್ಡ ಮೊತ್ತವನ್ನು ಬ್ಯಾಂಕ್​ನಿಂದ ಹಿಂಪಡೆಕೊಂಡರು. ಹಾಗಾಗಿ, ಜನರು ನೋಟು  ಮತ್ತು ನಾಣ್ಯಗಳನ್ನು ಹೆಚ್ಚಾಗಿ ಬಳಸಲು ಇದು ಕಾರಣವಾಯಿತು. ಈಗ E-ಕಾಮರ್ಸ್ ವಹಿವಾಟು ವೇಗ ಪಡೆಯುತ್ತಿರುವುದರಿಂದ, ನಗದು ಮೇಲಿನ ಅವಲಂಬನೆ ಕಡಿಮೆಯಾಗಿದೆ.

Published On - 3:15 pm, Tue, 25 August 20

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!