AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಲದಲ್ಲಿ Cashಗೆ ಇತ್ತು ಸಿಕ್ಕಾಪಟ್ಟೆ ಡಿಮ್ಯಾಂಡ್​, ಯಾಕೆ?

ದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ,  ಫೆಬ್ರವರಿ 28ರಿಂದ (22.55 ಲಕ್ಷ ಕೋಟಿ ರೂ.) ಜುಲೈ 17ರವರೆಗಿನ ಕಾಲಾವಧಿಯಲ್ಲಿ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿದ್ದ ನಗದಿನಿ ಪ್ರಮಾಣವು 3,24,500 ಕೋಟಿ ರೂ.ಗಳಷ್ಟು ಏರಿಕೆಯಾಗಿತ್ತು. ಹೀಗಾಗಿ, ಜುಲೈ 17ರ ವೇಳೆಗೆ ಸಾರ್ವಜನಿಕರ ಬಳಿಯಿದ್ದ ನಗದಿನ ಪ್ರಮಾಣ  25.8 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು RBI ತಿಳಿಸಿದೆ. ಆದರೆ, ಜುಲೈ 17ರಿಂದ ಜುಲೈ 31 ರವರೆಗೆ, ಅಂದರೆ ಕೇವಲ 15 ದಿನಗಳಲ್ಲಿ ಈ ಮೊತ್ತವು […]

ಕೊರೊನಾ ಕಾಲದಲ್ಲಿ Cashಗೆ ಇತ್ತು ಸಿಕ್ಕಾಪಟ್ಟೆ ಡಿಮ್ಯಾಂಡ್​, ಯಾಕೆ?
ಶೇ 16,000ದಷ್ಟು ಏರಿಕೆ
ಸಾಧು ಶ್ರೀನಾಥ್​
|

Updated on:Aug 25, 2020 | 3:17 PM

Share

ದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ,  ಫೆಬ್ರವರಿ 28ರಿಂದ (22.55 ಲಕ್ಷ ಕೋಟಿ ರೂ.) ಜುಲೈ 17ರವರೆಗಿನ ಕಾಲಾವಧಿಯಲ್ಲಿ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿದ್ದ ನಗದಿನಿ ಪ್ರಮಾಣವು 3,24,500 ಕೋಟಿ ರೂ.ಗಳಷ್ಟು ಏರಿಕೆಯಾಗಿತ್ತು. ಹೀಗಾಗಿ, ಜುಲೈ 17ರ ವೇಳೆಗೆ ಸಾರ್ವಜನಿಕರ ಬಳಿಯಿದ್ದ ನಗದಿನ ಪ್ರಮಾಣ  25.8 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು RBI ತಿಳಿಸಿದೆ.

ಆದರೆ, ಜುಲೈ 17ರಿಂದ ಜುಲೈ 31 ರವರೆಗೆ, ಅಂದರೆ ಕೇವಲ 15 ದಿನಗಳಲ್ಲಿ ಈ ಮೊತ್ತವು 3,982 ಕೋಟಿ ರೂಪಾಯಿಗಳಷ್ಟು ಇಳಿಕೆ ಕಂಡಿದ್ದು ಇದೀಗ ಸಾರ್ವಜನಿಕರು ಕ್ರೋಢೀಕರಿಸಿಕೊಂಡಿರುವ ನಗದಿನ ಮೊತ್ತವು 25.76 ಲಕ್ಷ ಕೋಟಿಗೆ ಇಳಿದಿದೆ.

ಕೇಂದ್ರವು ಲಾಕ್​ಡೌನ್​ ನಿರ್ಬಂಧನೆಗಳನ್ನು ಸಡಿಲಗೊಳಿಸಿದ ಪರಿಣಾಮದಿಂದಾಗಿ ಜೂನ್ ಮತ್ತು ಜುಲೈನಲ್ಲಿ ನಗದು ಕ್ರೋಢೀಕರಣದ ವೇಗವೂ ಕೊಂಚ ತಗ್ಗಿತು ಎಂಬುದು ತಿಳಿದುಬಂದಿದೆ. ಜೊತೆಗೆ, ಲಾಕ್​ಡೌನ್​ನ ಆರಂಭಿಕ ಹಂತದಲ್ಲಿ, E-ಕಾಮರ್ಸ್ ವಹಿವಾಟಿಗೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಜನರು ನೆರೆಹೊರೆಯ ಮಳಿಗೆಗಳನ್ನು ಅವಲಂಬಿಸಬೇಕಾಗಿತ್ತು. ಇದರ ಪರಿಣಾಮವಾಗಿ ನಗದಿನ ಬಳಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಯ್ತು. ಆದ್ದರಿಂದ, ಜನರು ಹೆಚ್ಚಿನ ಪ್ರಮಾಣದಲ್ಲಿ ATM ಮತ್ತು ಬ್ಯಾಂಕ್​ಗಳಿಂದ ಹಣ ಹಿಂಪಡೆದರು.

ಇದಲ್ಲದೆ, ಜನರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಒಂದೇ ಬಾರಿಯಲ್ಲಿ ದೊಡ್ಡ ಮೊತ್ತವನ್ನು ಬ್ಯಾಂಕ್​ನಿಂದ ಹಿಂಪಡೆಕೊಂಡರು. ಹಾಗಾಗಿ, ಜನರು ನೋಟು  ಮತ್ತು ನಾಣ್ಯಗಳನ್ನು ಹೆಚ್ಚಾಗಿ ಬಳಸಲು ಇದು ಕಾರಣವಾಯಿತು. ಈಗ E-ಕಾಮರ್ಸ್ ವಹಿವಾಟು ವೇಗ ಪಡೆಯುತ್ತಿರುವುದರಿಂದ, ನಗದು ಮೇಲಿನ ಅವಲಂಬನೆ ಕಡಿಮೆಯಾಗಿದೆ.

Published On - 3:15 pm, Tue, 25 August 20

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?