Ram Mandir
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿದ್ದ ಮತ್ತು ಅಕ್ರಮವಾಗಿ ನಿರ್ಮಿಸಲಾಗಿತ್ತು ಎನ್ನಲಾಗಿರುವ ಬಾಬರಿ ಮಸೀದಿಯನ್ನು 90ರ ದಶಕದ ಆರಂಭದಲ್ಲಿ ಕರಸೇವಕರು ನೆಲಸಮಗೊಳಿಸಿದರು. ಘಟನೆಯು ದೇಶದಾದ್ಯಂತ ಉದ್ವಿಗ್ನತೆ ಸೃಷ್ಟಿಸಿದ್ದಲ್ಲದೆ ತೀವ್ರತರದ ರಾಜಕೀಯ ಸಂಚಲನವನ್ನೂ ಸೃಷ್ಟಿಸಿತು. ಅದಾದ ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ 2019ರ ನವೆಂಬರ್ 9ರಂದು ವಿವಾದಿತ ಭೂಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಕೊಟ್ಟು ಆದೇಶ ನೀಡಿತು. ಅದಕ್ಕಾಗಿ ಟ್ರಸ್ಟೊಂದನ್ನು ಸ್ಥಾಪಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಯೋಧ್ಯೆಯ ಮತ್ತೊಂದು ಜಾಗದಲ್ಲಿ ಮಸೀದಿ ನಿರ್ಮಾಣಕ್ಕೂ ಅನುವು ಮಾಡಿಕೊಡಲಾಯಿತು. ತದನಂತರ ಅಸ್ತಿತ್ವಕ್ಕೆ ಬಂದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತುಕೊಂಡಿತು. 2020 ರ ಆಗಸ್ಟ್ 5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಂದಿರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯಿತು. ರಾಮಾಯಣದ ಪ್ರಕಾರ, ಭಗವಾನ್ ಮಹಾವಿಷ್ಣುವಿನ ಅವತಾರವಾದ ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆ ಕೋಟ್ಯಂತರ ಹಿಂದೂಗಳ ಭಕ್ತಿಯ ತಾಣವಾಗಿದೆ. ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಬಳಿಕ ಮಂದಿರವು ಭಕ್ತರ ಪ್ರವೇಶಕ್ಕೆ ಮುಕ್ತವಾಗುತ್ತಿದೆ.
ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ, ಕೃಷ್ಣ ನಗರಿಯಲ್ಲಿ ನಮೋ ಭಾಷಣದ ಮುಖ್ಯಾಂಶಗಳು
ಉಡುಪಿಯ ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು. ಸಾವಿರಾರು ಭಕ್ತರು ಭಗವದೀತೆಯ ಶ್ಲೋಕ ಪಠಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ನೆರೆದಿದ್ದವರು ಧ್ವನಿಗೂಡಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಉಡುಪಿ ಪಾತ್ರವನ್ನು ಮೆಲುಕು ಹಾಕಿದರು. ಹಾಗೇ ಇದೇ ವೇಳೆ ಒಂಭತ್ತು ಸಂಕಲ್ಪ ಮಾಡುವಂತೆ ಕರೆ ನೀಡಿದರು.
- Ramesh B Jawalagera
- Updated on: Nov 28, 2025
- 3:10 pm
ನಿಮಗೆ ನೈತಿಕತೆಯೇ ಇಲ್ಲ; ರಾಮಮಂದಿರ ಧ್ವಜಾರೋಹಣದ ಕುರಿತ ಪಾಕಿಸ್ತಾನದ ಟೀಕೆಗೆ ಭಾರತ ತಿರುಗೇಟು
ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಧರ್ಮ ಧ್ವಜಾರೋಹಣದ ಕುರಿತಾದ ಪಾಕಿಸ್ತಾನದ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಮ ಮಂದಿರದಲ್ಲಿ ನಡೆದ ಸಮಾರಂಭದ ನಂತರ ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ, ದ್ವೇಷ ಭಾಷಣ ಮತ್ತು ದ್ವೇಷ ಪ್ರೇರಿತ ದಾಳಿಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ಗಮನಹರಿಸಬೇಕೆಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕರೆ ನೀಡಿತ್ತು.
- Sushma Chakre
- Updated on: Nov 26, 2025
- 8:07 pm
ಭಗವಾಧ್ವಜ ಹಾರಿಸಲು ರಾಮಮಂದಿರಕ್ಕೆ ಬಂದ ಮೋದಿ ಸೇರಿದಂತೆ ಇತರೆ ಗಣ್ಯರಿಗೆ ಕರ್ನಾಟಕದ ಆಹಾರ ಉಣಬಡಿಸಿದ ಕನ್ನಡಿಗ
ಈ ಧರ್ಮ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದ ನರೇಂದ್ರ ಮೋದಿ ಸೇರಿದಂತೆ ಇತರೆ ಗಣ್ಯರಿಗೆ ಆಹಾರದ ವ್ಯವಸ್ಥೆ ಮಾಡಿದ್ದು ಸಹ ಕನ್ನಡಿಗರು ಎನ್ನುವುದು ವಿಶೇಷ. ಹೌದು... ಮೋದಿ ಸೇರಿ ಇತರೇ VIP, VVIPಗಳಿಗೆ ಕರ್ನಾಟದ ಆಹಾರವನ್ನು ನೀಡಲಾಗಿದೆ. ಇನ್ನು ರಾಮಮಂದಿರದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಸುರೇಂದ್ರ ಕಾಂಚಣ್ ಪ್ರತಿಕ್ರಿಯಿಸಿ, VIP VVIPಗೆ ಕರ್ನಾಟದ ಆಹಾರವನ್ನು ಅಯೋಧ್ಯೆಯಲ್ಲಿ ನೀಡುತ್ತಿದ್ದೇವೆ. ಇದು ನಮಗೆ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಡಿಸಿದರು.
- Ramesh B Jawalagera
- Updated on: Nov 25, 2025
- 5:15 pm
ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
"ಸತ್ಯ ಮತ್ತು ಧರ್ಮದ ಸಂಕೇತವಾದ ಈ ರಾಮ ಮಂದಿರವು ಇಂದು ಎದ್ದು ನಿಂತಿದೆ. ಧರ್ಮ, ಜ್ಞಾನ ಮತ್ತು ಸತ್ಯವನ್ನು ಜಗತ್ತಿಗೆ ಹರಡುವ ಕೆಲಸ ಪ್ರಾರಂಭವಾಗಿದೆ. ನಾವು ಎಲ್ಲಾ ಅಡೆತಡೆಗಳ ನಡುವೆಯೂ ಧೈರ್ಯದಿಂದ ಮುಂದುವರಿಯಬೇಕು. ಈ ದೇಶದಲ್ಲಿ ಜನಿಸಿದವರು ಹಿರಿಯ ಸಹೋದರರಂತೆ. ಜಗತ್ತು ನಮ್ಮ ಮೇಲೆ ನಿರೀಕ್ಷೆಗಳನ್ನು ಇಟ್ಟಿದೆ. ನಾವು ಅವುಗಳನ್ನು ಪೂರೈಸಲು ಕೆಲಸ ಮಾಡಬೇಕು" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
- Sushma Chakre
- Updated on: Nov 25, 2025
- 5:02 pm
ಧರ್ಮ ಧ್ವಜಾರೋಹಣ ಸಮಾರಂಭಕ್ಕೆ ಅಯೋಧ್ಯೆ ರಾಮಮಂದಿರ ಪಳಪಳ ಹೊಳೆಯುವಂತೆ ಮಾಡಿದ ಕನ್ನಡಿಗ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಹೌದು...ಅಯೋಧ್ಯೆಯಲ್ಲಿ ಪ್ರತಿಷ್ಠಾನೆಯಾಗಿರುವ ರಾಮಮೂರ್ತಿಗೆ ಕರ್ನಾಟಕದ ಕಲ್ಲು ಬಳಸಲಾಗಿದೆ. ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದಿಂದ 2 ಬೃಹತ್ ಶಿಲೆಗಳನ್ನು ಆಯೋಧ್ಯೆಗೆ ರವಾನಿಸಲಾಗಿತ್ತು. ಇನ್ನು ಗರ್ಭಗುಡಿಯ ಮುಂಭಾಗದ ಮಂಟಪ ತಯಾರಿಯಲ್ಲಿ ಕೊಪ್ಪಳದ ಶಿಲ್ಪಿ ಸಹ ಇದ್ದ. ಅದರಲ್ಲೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆಯು ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕರ್ನಾಟಕದ ಹೆಮ್ಮೆ. ಇದೀಗ ಶ್ರೀರಾಮ ಮಂದಿರದ ಶಿಖರದ ಮೇಲೆ ಭಗವಾಧ್ವಜವನ್ನು ಹಾರಿಸುವ ಕಾರ್ಯಕ್ರಮ ಸಂಬಂಧ ಲೈಟಿಂಗ್ಸ್ ಅಲಂಕಾರ ಮಾಡಿದ್ದು ಸಹ ಕನ್ನಡಿಗ ರಾಜೇಶ್ ಶೆಟ್ಟಿ .
- Ramesh B Jawalagera
- Updated on: Nov 25, 2025
- 4:48 pm
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ; ರಾಮಜನ್ಮಭೂಮಿಯ ಜನರಿಂದ ಅದ್ದೂರಿ ಸ್ವಾಗತ
ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರದ ಶಿಖರವನ್ನು ಅಲಂಕರಿಸುತ್ತಿದ್ದಂತೆ ಏಕತೆ ಮತ್ತು ಭಕ್ತಿಯ ಮನೋಭಾವಕ್ಕೆ ಸಾಕ್ಷಿಯಾಗಲಿ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಜನ್ಮಭೂಮಿ ದೇವಾಲಯದಲ್ಲಿ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಿದರು.ಇದಾದ ಬಳಿಕ ಅವರು ರಾಮ ಮಂದಿರದ 191 ಅಡಿ ಎತ್ತರದ ಶಿಖರದ ಮೇಲೆ ಪವಿತ್ರ ಕೇಸರಿ ಧ್ವಜವನ್ನು ಹಾರಿಸಿದರು.
- Sushma Chakre
- Updated on: Nov 25, 2025
- 3:32 pm
500 ವರ್ಷಗಳಲ್ಲಿ ಒಂದು ಕ್ಷಣವೂ ವಿಚಲಿತವಾಗದೆ ನಡೆಸಿದ ಯಾಗ ಇದು: ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಮಾತು
ಅಯೋಧ್ಯೆ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಶ್ರೀ ರಾಮ ಮಂದಿರದ ಮೇಲೆ ಧರ್ಮ ಧ್ವಜವನ್ನು ಹಾರಿಸಲಾಯಿತು. ಅಭಿಜಿತ್ ಮುಹೂರ್ತದ ಶುಭ ಸಮಯದಲ್ಲಿ ನಡೆದ ವೇದ ಮಂತ್ರಗಳ ಪಠಣ ಮತ್ತು ಧ್ವಜಾರೋಹಣವು ಇಡೀ ರಾಮನಗರಿಯನ್ನು ಹಬ್ಬದ ವಾತಾವರಣದಲ್ಲಿ ಮುಳುಗಿಸಿತು. ಈ ಸಂದರ್ಭದಲ್ಲಿ, ಶತಮಾನಗಳ ನಂತರ ಗಾಯಗಳು ಗುಣವಾಗುತ್ತಿವೆ ಎಂದು ಪ್ರಧಾನಿ ಹೇಳಿದರು.ಅಯೋಧ್ಯಾ ನಗರವು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಮತ್ತೊಂದು ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ.
- Nayana Rajeev
- Updated on: Nov 25, 2025
- 12:42 pm
ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ, ಪ್ರಧಾನಿ ಮೋದಿಯಿಂದ ಉದ್ಘಾಟನೆ ಲೈವ್
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುತ್ತಿದ್ದು, ಅದರ ವಿಡಿಯೋ ಇಲ್ಲಿದೆ. ಧರ್ಮ ಧ್ವಜಾರೋಹಣ ಮಾಡುವ ಮೂಲಕ 500 ವರ್ಷಗಳ ಸುದೀರ್ಘ ಹೋರಾಟಕ್ಕೆ ತಾತ್ವಿಕ ಅಂತ್ಯ ಹಾಡಿದ್ದಾರೆ. ಈ ಧ್ವಜಾರೋಹಣವು ವಿಜಯದ ಸಂಕೇತವಾಗಿದ್ದು, ಶಾಸ್ತ್ರಗಳ ಪ್ರಕಾರ ಯುದ್ಧ, ಶಾಂತಿ ಅಥವಾ ರಾಜ ಪಟ್ಟಾಭಿಷೇಕದ ಸಂದರ್ಭಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.
- Nayana Rajeev
- Updated on: Nov 25, 2025
- 11:51 am
Ayodhya Ram Mandir: ಧ್ವಜಾರೋಹಣಕ್ಕೂ ಮುನ್ನ ಅಯೋಧ್ಯೆಯ ರಾಮ ಮಂದಿರ ಕಂಡಿದ್ದು ಹೀಗೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದ್ದು, ಇಂದು ಧ್ವಜಾರೋಹಣಕ್ಕೆ ಸಜ್ಜುಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರವು ಭಕ್ತರಿಂದ ತುಂಬಿದೆ. ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆ ನಗರವು ಅಭೂತಪೂರ್ವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ರಾಮಪಥ ಮತ್ತು ಭಕ್ತಿಪಥದಂತಹ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಆಧುನಿಕ ಸ್ಪರ್ಶದೊಂದಿಗೆ ವಿಸ್ತರಿಸಲಾಗಿದೆ.
- Nayana Rajeev
- Updated on: Nov 25, 2025
- 11:20 am
Ram Mandir Dhwajarohan 2025: ರಾಮ ಮಂದಿರದ ಧ್ವಜಾರೋಹಣಕ್ಕೆ ಈ ದಿನವನ್ನೇ ಆಯ್ಕೆ ಮಾಡಿದ್ದು ಏಕೆ ಗೊತ್ತಾ?
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರ ಸಂಕೇತವಾಗಿ ದೇಗುಲದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ. ಈ ಶುಭ ಸಮಾರಂಭ ವಿವಾಹ ಪಂಚಮಿಯಂದು ನಡೆಯುತ್ತಿದ್ದು, ಇದರೊಂದಿಗೆ ಹತ್ತು ಹಲವು ಶುಭ ಘಳಿಗೆಗಳಿಗೆ ಸಾಕ್ಷಿಯಾಗಲಿದೆ. ಈ ದಿನವನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Nov 25, 2025
- 11:02 am