AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Mandir

Ram Mandir

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿದ್ದ ಮತ್ತು ಅಕ್ರಮವಾಗಿ ನಿರ್ಮಿಸಲಾಗಿತ್ತು ಎನ್ನಲಾಗಿರುವ ಬಾಬರಿ ಮಸೀದಿಯನ್ನು 90ರ ದಶಕದ ಆರಂಭದಲ್ಲಿ ಕರಸೇವಕರು ನೆಲಸಮಗೊಳಿಸಿದರು. ಘಟನೆಯು ದೇಶದಾದ್ಯಂತ ಉದ್ವಿಗ್ನತೆ ಸೃಷ್ಟಿಸಿದ್ದಲ್ಲದೆ ತೀವ್ರತರದ ರಾಜಕೀಯ ಸಂಚಲನವನ್ನೂ ಸೃಷ್ಟಿಸಿತು. ಅದಾದ ಬಳಿಕ ಪ್ರಕರಣ ಕೋರ್ಟ್​​ ಮೆಟ್ಟಿಲೇರಿತು. ಅಂತಿಮವಾಗಿ ಸುಪ್ರೀಂ ಕೋರ್ಟ್​ 2019ರ ನವೆಂಬರ್ 9ರಂದು ವಿವಾದಿತ ಭೂಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಕೊಟ್ಟು ಆದೇಶ ನೀಡಿತು. ಅದಕ್ಕಾಗಿ ಟ್ರಸ್ಟೊಂದನ್ನು ಸ್ಥಾಪಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಯೋಧ್ಯೆಯ ಮತ್ತೊಂದು ಜಾಗದಲ್ಲಿ ಮಸೀದಿ ನಿರ್ಮಾಣಕ್ಕೂ ಅನುವು ಮಾಡಿಕೊಡಲಾಯಿತು. ತದನಂತರ ಅಸ್ತಿತ್ವಕ್ಕೆ ಬಂದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತುಕೊಂಡಿತು. 2020 ರ ಆಗಸ್ಟ್ 5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಂದಿರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯಿತು. ರಾಮಾಯಣದ ಪ್ರಕಾರ, ಭಗವಾನ್ ಮಹಾವಿಷ್ಣುವಿನ ಅವತಾರವಾದ ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆ ಕೋಟ್ಯಂತರ ಹಿಂದೂಗಳ ಭಕ್ತಿಯ ತಾಣವಾಗಿದೆ. ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಬಳಿಕ ಮಂದಿರವು ಭಕ್ತರ ಪ್ರವೇಶಕ್ಕೆ ಮುಕ್ತವಾಗುತ್ತಿದೆ.

ಇನ್ನೂ ಹೆಚ್ಚು ಓದಿ

ರಾಮ ಮಂದಿರಕ್ಕೆ ಬೇಕಾಗಿದ್ದಾರೆ ಬಾಸ್: ಸಿಇಒ ಹುದ್ದೆಗೆ 1,000 ಮಂದಿಯಿಂದ ಅರ್ಜಿ, ಜುಲೈ 22ಕ್ಕೆ ಅಂತಿಮ ಮುದ್ರೆ

ಅಯೋಧ್ಯೆಯ ರಾಮ ಮಂದಿರದ ಪಾರದರ್ಶಕ ನಿರ್ವಹಣೆಗಾಗಿ ಸಿಇಒ ಹುದ್ದೆ ಸೃಷ್ಟಿಸಲಾಗಿದೆ. ಕೇವಲ 5 ದಿನಗಳಲ್ಲಿ 1,000 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಕಾರ್ಪೊರೇಟ್ ತಜ್ಞರು ಸೇರಿದ್ದಾರೆ. 'ರಾಮಭಕ್ತ' ಹಾಗೂ 20 ವರ್ಷಗಳ ಅನುಭವ ಕಡ್ಡಾಯ. ಜುಲೈ 22 ರಂದು ಅಂತಿಮ ಆಯ್ಕೆ ನಡೆಯಲಿದ್ದು, ತಿರುಪತಿ ಮಾದರಿಯಲ್ಲಿ ಮಂದಿರದ ದೈನಂದಿನ ಕಾರ್ಯನಿರ್ವಹಣೆ ಸುಧಾರಿಸುವುದು ಮುಖ್ಯ ಗುರಿಯಾಗಿದೆ.

ಹಗರಣದ ಬೆನ್ನಲ್ಲೇ ದೊಡ್ಡ ನಿರ್ಧಾರ: ರಾಮ ಮಂದಿರ ‘CEO’ ಹುದ್ದೆಗೆ ಅರ್ಜಿ ಆಹ್ವಾನಿಸಿದ ಟ್ರಸ್ಟ್

ರಾಮ ಮಂದಿರದ ದೇಣಿಗೆ ಹಗರಣದ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಮಂದಿರದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. 50-70 ವಯಸ್ಸಿನ, 20+ ವರ್ಷಗಳ ಅನುಭವವಿರುವ ರಾಮ ಭಕ್ತರು ಅರ್ಜಿ ಸಲ್ಲಿಸಬಹುದು. ಸಿಬ್ಬಂದಿಗೆ ಜೇಬಿಲ್ಲದ ಸಮವಸ್ತ್ರ, ಖಾಸಗಿ ಬ್ಯಾಂಕ್ ಸೇವೆಗಳ ಮೂಲಕ ಹಣಕಾಸು ಭದ್ರತೆಯನ್ನು ಬಲಪಡಿಸಲು ಟ್ರಸ್ಟ್ ಮುಂದಾಗಿದೆ.

ರಾಮಮಂದಿರ ದೇಣಿಗೆ ಕಳ್ಳತನ: ಅನುಪಮ್ ಖೇರ್ ಬಗ್ಗೆ ನಾಸಿರುದ್ದೀನ್ ಶಾ ಮಾತನಾಡಿದ್ದ ವಿಡಿಯೋ ವೈರಲ್

ರಾಮಮಂದಿರದ ದೇಣಿಗೆ ಕಳ್ಳತನದ ಕುರಿತಾದ ನಟ ಅನುಪಮ್ ಖೇರ್ ಹೇಳಿಕೆಗೆ ನೆಟ್ಟಿಗರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಾಸಿರುದ್ದೀನ್ ಶಾ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಬಾಲಿವುಡ್‌ನ ಈ ಇಬ್ಬರು ಹಿರಿಯ ನಟರ ವಾಕ್ಸಮರದ ವಿಡಿಯೋ ಮತ್ತೆ ಇಂಟರ್ನೆಟ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

ರಾಮ ಮಂದಿರದ ಕಾಣಿಕೆಗೆ ‘AI’ ಕಾವಲು: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಸ್‌ಐಟಿ ಮಾಸ್ಟರ್ ಪ್ಲ್ಯಾನ್

ರಾಮ ಮಂದಿರದಲ್ಲಿ ನಡೆದ ಕಾಣಿಕೆ ಕಳ್ಳತನಕ್ಕೆ ಕಡಿವಾಣ ಹಾಕಲು ಎಸ್‌ಐಟಿ AI-ಆಧಾರಿತ ಕಣ್ಗಾವಲು ವ್ಯವಸ್ಥೆ ಶಿಫಾರಸು ಮಾಡಿದೆ. ಇದು ಅನುಮಾನಾಸ್ಪದ ಚಲನವಲನ, ನಗದು ಸ್ಕ್ಯಾನಿಂಗ್ ಮೂಲಕ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುತ್ತದೆ. ಎಸ್​ಬಿಐ ಮೇಲಿನ ಆಕ್ರೋಶದ ನಂತರ ಬ್ಯಾಂಕ್ ಬದಲಾವಣೆಗೆ ಟ್ರಸ್ಟ್ ಚಿಂತಿಸಿದೆ. ಅಲ್ಲದೆ, ಆರೋಪಿಗಳ ಆಸ್ತಿ ಜಪ್ತಿ ಮತ್ತು ವಿಐಪಿ ಪಾಸ್ ದಂಧೆಗೂ ಬೀಗ ಹಾಕಲಾಗಿದೆ.

ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ ತನಿಖೆಯು ಅಂತಿಮ ಘಟ್ಟದಲ್ಲಿದೆ. ಹಿಂದೂ ಧರ್ಮ ಸೇನೆಯ ಮುಖ್ಯಸ್ಥ ಸಂತೋಷ್ ದುಬೆ ಅವರನ್ನು ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಭ್ರಷ್ಟಾಚಾರ ಆರೋಪಗಳಿಗೆ ಸೂಕ್ತ ಪುರಾವೆಗಳನ್ನು ಸಲ್ಲಿಸಲು ಎಸ್‌ಐಟಿ ಅವರಿಗೆ ಇಂದು ಅಂತಿಮ ಗಡುವು ನೀಡಿದೆ. ಕೋಟ್ಯಂತರ ಭಕ್ತರ ಭಾವನೆಗಳನ್ನು ಕೆರಳಿಸಿರುವ ಈ ಪ್ರಕರಣದಲ್ಲಿ ಸಲ್ಲಿಸುವ ಸಾಕ್ಷ್ಯಗಳು ಟ್ರಸ್ಟ್‌ನಲ್ಲಿನ ದೊಡ್ಡ ತಲೆಗಳ ಮೇಲೆ ಪರಿಣಾಮ ಬೀರಲಿವೆ.

ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣವು ಬಾಲಿವುಡ್ ಸಿನಿಮಾಗಳಿಗಿಂತಲೂ ಮಿಗಿಲಾದ ಮಾಸ್ಟರ್ ಪ್ಲಾನ್ ಒಳಗೊಂಡಿದೆ. ಬ್ಯಾಂಕ್ ಹೊರಗುತ್ತಿಗೆ ನೌಕರರು 40 ದಿನಗಳಲ್ಲಿ 70ಕ್ಕೂ ಹೆಚ್ಚು ಬಾರಿ ದೇಣಿಗೆ ಹಣವನ್ನು ಲೂಟಿ ಮಾಡಿದ್ದಾರೆ. ಬೆಳಗ್ಗೆಯೇ ಪಾತ್ರಗಳನ್ನು ಫಿಕ್ಸ್ ಮಾಡಿ, ಸಿಸಿಟಿವಿ ಮರೆಮಾಚಿ ಕಳ್ಳತನ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿದ ಶಂಕೆ ವ್ಯಕ್ತವಾಗಿದೆ. ಟ್ರಸ್ಟ್ ಈಗ ಡಿಜಿಟಲ್ ಪಾವತಿ ಮತ್ತು ಕಾಯಂ ಬ್ಯಾಂಕ್ ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ ದೊಡ್ಡ ಬದಲಾವಣೆ, ಚಂಪತ್ ರಾಯ್ ಐಡಿ ಬ್ಲಾಕ್, ಇನ್ಮುಂದೆ ವಿಐಪಿ ಪಾಸ್ ಯಾರು ಕೊಡ್ತಾರೆ?

ಅಯೋಧ್ಯೆ ರಾಮ ಮಂದಿರದ ವಿಐಪಿ ದರ್ಶನ ಪಾಸ್ ವಿತರಣಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಚಂಪತ್ ರಾಯ್ ಸೇರಿದಂತೆ ಪ್ರಮುಖರ ಐಡಿಗಳನ್ನು ಬ್ಲಾಕ್ ಮಾಡಲಾಗಿದ್ದು, ಮಹಂತ್ ದಿನೇಂದ್ರ ದಾಸ್ ಹೊಸದಾಗಿ ಪಾಸ್ ನೀಡಲಿದ್ದಾರೆ. ಪಾಸ್‌ಗಳ ದುರ್ಬಳಕೆ ಮತ್ತು ಹಗರಣದ ಆರೋಪಗಳ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಜುಲೈ 22 ರಂದು ಮಹತ್ವದ ಟ್ರಸ್ಟ್ ಸಭೆ ನಡೆಯಲಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ ಮಹಾವಂಚನೆ ಬಯಲು:ಕಾಣಿಕೆ ಕಳ್ಳತನ ಮಾತ್ರವಲ್ಲ, ನಕಲಿ ರಶೀದಿ ನೀಡಿ ಭಕ್ತರಿಗೆ ಕೋಟಿ ಕೋಟಿ ನಾಮ

ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ಕಾಣಿಕೆ ಕಳ್ಳತನದ ಜೊತೆಗೇ ಬೃಹತ್ ನಕಲಿ ರಶೀದಿ ವಂಚನೆ ಬಯಲಾಗಿದೆ. ಸಿಬ್ಬಂದಿ ನಕಲಿ ರಶೀದಿ ಪುಸ್ತಕಗಳನ್ನು ಬಳಸಿ ಭಕ್ತರಿಂದ ಕೋಟಿಗಟ್ಟಲೆ ದೇಣಿಗೆ ವಸೂಲಿ ಮಾಡಿ ತಮ್ಮ ಜೇಬಿಗಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಿಂದ ಕಳ್ಳತನ ದೃಢಪಟ್ಟಿದ್ದು, ತನಿಖೆಯಿಂದ ಪ್ರಮುಖ ಆರೋಪಿಗಳನ್ನು ಬಂಧಿಸಿ, ಅವರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಟ್ರಸ್ಟ್ ಈಗ ಡಿಜಿಟಲ್ ದೇಣಿಗೆಗೆ ಒತ್ತು ನೀಡುತ್ತಿದೆ.

ರಾಮ ಮಂದಿರದ ಬೆನ್ನಲ್ಲೇ ಮಧ್ಯಪ್ರದೇಶದ ಬಾಗಲಾಮುಖಿ ದೇವಸ್ಥಾನದಲ್ಲೂ ಭುಗಿಲೆದ್ದ ದೇಣಿಗೆ ಕಳ್ಳತನ ವಿವಾದ

ಕೆಲವು ದಿನಗಳಿಂದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಮಧ್ಯಪ್ರದೇಶದ ನಾಗ್ಪುರದ ಪೀತಾಂಬರ ಪೀಠದ ಅಡಿಯಲ್ಲಿ ಬರುವ ಪ್ರಸಿದ್ಧ ಮಾ ಬಾಗಲಾಮುಖಿ ದೇವಸ್ಥಾನ ಕೂಡ ತೀವ್ರ ವಿವಾದಕ್ಕೆ ಸಿಲುಕಿದೆ. ಈ ದೇವಸ್ಥಾನಕ್ಕೆ ನೀಡಲಾದ ದೇಣಿಗೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಬರುವ ಭಾರಿ ಪ್ರಮಾಣದ ದೇಣಿಗೆ ಮತ್ತು ಆಸ್ತಿಯ ಉಸ್ತುವಾರಿಗೆ ಸಂಬಂಧಿಸಿದಂತೆ ಟ್ರಸ್ಟಿಗಳ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ತಲೆದೋರಿವೆ ಎನ್ನಲಾಗಿದೆ. ಹಣಕಾಸಿನ ಪಾರದರ್ಶಕತೆಯ ಕೊರತೆ ಮತ್ತು ನಿಧಿಯ ದುರುಪಯೋಗ ನಡೆದಿದೆ ಎಂಬ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.

ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ; ಚಂಪತ್ ರಾಯ್ ಮೊದಲ ಪ್ರತಿಕ್ರಿಯೆ

ತಮ್ಮ ಮೇಲಿನ ಹಣಕಾಸು ಅಕ್ರಮ ಹಾಗೂ ದೇಣಿಗೆ ಕಳ್ಳತನದ ಆರೋಪಗಳ ನಂತರ ಮೊದಲ ಬಾರಿಗೆ ಮೌನ ಮುರಿದಿರುವ ಚಂಪತ್ ರಾಯ್, ಮಾಧ್ಯಮಗಳ ಮುಂದೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ನನ್ನ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪಾರದರ್ಶಕತೆಗೆ ಧಕ್ಕೆ ತರಲು ಈ ರೀತಿಯ ಸಂಚು ರೂಪಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ: ಭಕ್ತರ ನಂಬಿಕೆ ಮರಳಿ ಪಡೆಯಲು ಟ್ರಸ್ಟ್ ಯತ್ನ

ಅಯೋಧ್ಯೆ ರಾಮಮಂದಿರದ ಹುಂಡಿ ದೇಣಿಗೆ ಕಳ್ಳತನ ವಿವಾದದ ನಡುವೆ, ರಾಮಮಂದಿರ ಟ್ರಸ್ಟ್ ತನ್ನ ಸಂಪೂರ್ಣ ಹಣಕಾಸು ಲೆಕ್ಕಪತ್ರವನ್ನು ಬಹಿರಂಗಪಡಿಸಿದೆ. ಭಕ್ತರಿಂದ ಸಂಗ್ರಹವಾದ ಒಟ್ಟು 3,264 ಕೋಟಿ ರೂ. ದೇಣಿಗೆಯಲ್ಲಿ, 2,370 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಉಳಿದ ಹಣ ಬ್ಯಾಂಕ್ ಖಾತೆಗಳಲ್ಲಿ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದೆ.

ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ

ಅಯೋಧ್ಯೆ ರಾಮ ಮಂದಿರ ದೇಣಿಗೆ ದುರುಪಯೋಗ ಹಗರಣದಲ್ಲಿ ಎಸ್‌ಐಟಿ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಕೇವಲ 45 ದಿನಗಳಲ್ಲಿ 70 ಬಾರಿ ದೇಣಿಗೆ ಹಣ ಕಳ್ಳತನವಾಗಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ರಾಜೀನಾಮೆ ಅಂಗೀಕರಿಸಲಾಗಿದೆ. ದೇಣಿಗೆ ಎಣಿಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದ ಅನಿಲ್ ಮಿಶ್ರಾ ಪಾತ್ರದ ಬಗ್ಗೆ ತನಿಖೆ ತೀವ್ರಗೊಂಡಿದೆ. ಟ್ರಸ್ಟ್ ಹೊಸ ಸಿಇಒ ಆಯ್ಕೆಗೆ ಸಮಿತಿ ರಚಿಸಿದೆ.

ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್
ಕಾಲ್ತುಳಿತದಲ್ಲಿ ಮೃತ 11 ಜನರ ಸಾವಿಗೆ ಹೊಣೆ ಯಾರು? ಅಶೋಕ್​​ ಪ್ರಶ್ನೆ
ಕಾಲ್ತುಳಿತದಲ್ಲಿ ಮೃತ 11 ಜನರ ಸಾವಿಗೆ ಹೊಣೆ ಯಾರು? ಅಶೋಕ್​​ ಪ್ರಶ್ನೆ
ಬಿವೈ ವಿಜಯೇಂದ್ರ ಆರ್ ಅಶೋಕ್​ ಕಾಮಿಡಿ
ಬಿವೈ ವಿಜಯೇಂದ್ರ ಆರ್ ಅಶೋಕ್​ ಕಾಮಿಡಿ