AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ […]

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!
KUSHAL V
|

Updated on: Aug 02, 2020 | 3:36 PM

Share

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ ನುಗ್ಗಿದೆ. ಅದೃಷ್ಟವಶಾತ್​ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಕಾಲಿಗೆ ಮಾತ್ರ ಗಾಯಗಳಾಗಿವೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ಕೇಸ್​ ದಾಖಲಿಸಿದರು. ಅಚ್ಚರಿಯ ಸಂಗತಿಯೆಂದರೆ, ಮಹಿಳೆಯ ವಿಚಾರಣೆ ವೇಳೆ ನಾನು ಕಾರ್​ನಲ್ಲಿ ಕೂತು ಐಸ್​ಕ್ರೀಮ್ ತಿನ್ನುತ್ತಿದ್ದೆ. ಇದೇ ವೇಳೆ ನನ್ನ ನಾಯಿ ಗೇರ್​ ಮೇಲೆ ಕಾಲಿಟ್ಟು ಕಿಟಕಿಯಿಂದ ಹೊರಕ್ಕೆ ಜಿಗಿಯಿತು. ಹಾಗಾಗಿ, ನಿಂತಿದ್ದ ವಾಹನ ಮುನ್ನುಗ್ಗಿ ಅಪಘಾತ ಸಂಭವಿಸಿತು ಎಂದು ಹೇಳಿದ್ದಳಂತೆ.

ಸದ್ಯ ಮಹಿಳೆಯನ್ನ ಜಾಮೀನಿನ ಮೇಲೆ ರಿಲೀಸ್​ ಮಾಡಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು