AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ […]

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!
KUSHAL V
|

Updated on: Aug 02, 2020 | 3:36 PM

Share

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ ನುಗ್ಗಿದೆ. ಅದೃಷ್ಟವಶಾತ್​ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಕಾಲಿಗೆ ಮಾತ್ರ ಗಾಯಗಳಾಗಿವೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ಕೇಸ್​ ದಾಖಲಿಸಿದರು. ಅಚ್ಚರಿಯ ಸಂಗತಿಯೆಂದರೆ, ಮಹಿಳೆಯ ವಿಚಾರಣೆ ವೇಳೆ ನಾನು ಕಾರ್​ನಲ್ಲಿ ಕೂತು ಐಸ್​ಕ್ರೀಮ್ ತಿನ್ನುತ್ತಿದ್ದೆ. ಇದೇ ವೇಳೆ ನನ್ನ ನಾಯಿ ಗೇರ್​ ಮೇಲೆ ಕಾಲಿಟ್ಟು ಕಿಟಕಿಯಿಂದ ಹೊರಕ್ಕೆ ಜಿಗಿಯಿತು. ಹಾಗಾಗಿ, ನಿಂತಿದ್ದ ವಾಹನ ಮುನ್ನುಗ್ಗಿ ಅಪಘಾತ ಸಂಭವಿಸಿತು ಎಂದು ಹೇಳಿದ್ದಳಂತೆ.

ಸದ್ಯ ಮಹಿಳೆಯನ್ನ ಜಾಮೀನಿನ ಮೇಲೆ ರಿಲೀಸ್​ ಮಾಡಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್