Breaking News ಹರ್ಯಾಣದ ಖಾಸಗಿ ಬಸ್‌ಗಳ ವರ್ಕ್‌ಶಾಪ್‌ನಲ್ಲಿ ಅಗ್ನಿ ಅವಘಡ, 3 ಬಸ್‌ಗಳು ಬೆಂಕಿಗೆ ಆಹುತಿ

ನಾವು ಬೆಂಕಿಯನ್ನು ತ್ವರಿತವಾಗಿ ನಿಯಂತ್ರಿಸಿದ್ದೇವೆ, ಅದನ್ನು ಹರಡಲು ಬಿಡಲಿಲ್ಲ. ಹಿಂಬದಿಯ ಸ್ಲಂ ಪ್ರದೇಶಗಳು ಹಾಗೂ ಮುಂಭಾಗದಲ್ಲಿ ನಿಂತಿದ್ದ 3 ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ದಿನೇಶ್ ಕುಮಾರ್ ಹೇಳಿದ್ದಾರೆ.

Breaking News ಹರ್ಯಾಣದ ಖಾಸಗಿ ಬಸ್‌ಗಳ ವರ್ಕ್‌ಶಾಪ್‌ನಲ್ಲಿ ಅಗ್ನಿ ಅವಘಡ, 3 ಬಸ್‌ಗಳು ಬೆಂಕಿಗೆ ಆಹುತಿ
Updated By: ರಶ್ಮಿ ಕಲ್ಲಕಟ್ಟ

Updated on: Sep 06, 2022 | 4:04 PM

ಹರ್ಯಾಣದ ಖಾಸಗಿ ಬಸ್‌ಗಳ ವರ್ಕ್‌ಶಾಪ್‌ನಲ್ಲಿ ಅಗ್ನಿ ಅವಘಡ, 3 ಬಸ್‌ಗಳು ಬೆಂಕಿಗಾಹುತಿಯಾಗಿವೆ. ಮಾಹಿತಿ ಪಡೆದು ಭೀಮನಗರ ಅಗ್ನಿಶಾಮಕ ಠಾಣೆಯಿಂದ 2 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ನಾವು ಬೆಂಕಿಯನ್ನು ತ್ವರಿತವಾಗಿ ನಿಯಂತ್ರಿಸಿದ್ದೇವೆ, ಅದನ್ನು ಹರಡಲು ಬಿಡಲಿಲ್ಲ. ಹಿಂಬದಿಯ ಸ್ಲಂ ಪ್ರದೇಶಗಳು ಹಾಗೂ ಮುಂಭಾಗದಲ್ಲಿ ನಿಂತಿದ್ದ 3 ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ದಿನೇಶ್ ಕುಮಾರ್ ಹೇಳಿದ್ದಾರೆ.

ಶೀತಲಾ ಮಾತಾ ದೇವಸ್ಥಾನದ ಬಳಿ ಬೆಳಗ್ಗೆ 11:30 ರ ಸುಮಾರಿಗೆ ಈ ಘಟನೆ ನಡೆದಿದೆ. ಗುರುಗ್ರಾಮದ ಶೀತಲಾ ಮಾತಾ ರಸ್ತೆಯಲ್ಲಿರುವ ನೀರಿನ ಟ್ಯಾಂಕ್‌ನ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ಗೋದಾಮಿನಲ್ಲಿದ್ದ ಪ್ಲಾಸ್ಟಿಕ್ ಟ್ಯಾಂಕ್ ಹಾಗೂ ಇತರೆ ವಸ್ತುಗಳಿಂದ ಬೆಂಕಿ ಹೆಚ್ಚಾಯಿತು. ಈ ಬೆಂಕಿಯ ಘಟನೆಯ ನಂತರ, ದೂರದವರೆಗೆ ಆಕಾಶದಲ್ಲಿ ಕಪ್ಪು ಹೊಗೆಯೊಂದು ಗೋಚರಿಸಿತು. ತಕ್ಷಣ ಅಗ್ನಿಶಾಮಕ ದಳಕ್ಕೆ ಬೆಂಕಿಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಮೀಪದ ಅಗ್ನಿಶಾಮಕ ಠಾಣೆಗಳಿಂದ ಸುಮಾರು ಅರ್ಧ ಡಜನ್ ವಾಹನಗಳು ಬೆಂಕಿಯನ್ನು ನಿಯಂತ್ರಿಸಲು ಬಂದವು.

ಆದರೆ, ಇದಕ್ಕೂ ಮುನ್ನವೇ ಜೋರಾಗಿ ಗಾಳಿ ಬೀಸಿದ್ದರಿಂದ ಗೋದಾಮಿನ ಬಳಿಯಿರುವ ಖಾಸಗಿ ಬಸ್‌ಗಳ ವರ್ಕ್‌ಶಾಪ್‌ಗೆ ಬೆಂಕಿ ತಗುಲಿದ್ದು, ಅಲ್ಲೇ ನಿಂತಿದ್ದ ಖಾಸಗಿ ಬಸ್‌ಗಳಿಗೂ ಬೆಂಕಿ ಆವರಿಸಿದೆ. ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕಾರ್ಯಾಗಾರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಸ್‌ಗಳನ್ನು ಸುಮಾರು 7 ಬಸ್‌ಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಹೊತ್ತಲ್ಲಿ 3 ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆ ಕುರಿತು ಅಗ್ನಿಶಾಮಕ ಅಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ಬೆಂಕಿಯನ್ನು ಹೆಚ್ಚು ಹರಡಲು ಬಿಡದೆ ಬೆಂಕಿಯನ್ನು ಹತೋಟಿಗೆ ತಂದಿದ್ದೇವೆ.ಇಲ್ಲಿ ಹಿಂಬದಿಯ 2 ಸ್ಲಂ ಮತ್ತು ಮುಂಭಾಗದ 3 ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತನಿಖೆಯ ನಂತರ, ಎಷ್ಟು ಹಾನಿಯಾಗಿದೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Published On - 3:14 pm, Tue, 6 September 22