ಆಂಧ್ರ ಪ್ರದೇಶದಲ್ಲಿ ಪ್ರವಾಹ: 30 ದಾಟಿದ ಸಾವಿನ ಸಂಖ್ಯೆ; ಹಲವಾರು ಗ್ರಾಮಗಳು ನಾಶ

Andhra floods ಚಿತ್ತೂರು, ನೆಲ್ಲೂರು, ಕಡಪ ಮತ್ತು ಅನಂತಪುರ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಯ ಪರಿಶೀಲನಾ ಸಭೆಯ ನಂತರ ಆಂಧ್ರಪ್ರದೇಶ ಸರ್ಕಾರವು ಎಲ್ಲಾ ಪ್ರವಾಹ ಪೀಡಿತ ಕುಟುಂಬಗಳಿಗೆ ಅಕ್ಕಿ, ಬೇಳೆ, ಖಾದ್ಯ ಎಣ್ಣೆ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ.

ಆಂಧ್ರ ಪ್ರದೇಶದಲ್ಲಿ ಪ್ರವಾಹ: 30 ದಾಟಿದ ಸಾವಿನ ಸಂಖ್ಯೆ; ಹಲವಾರು ಗ್ರಾಮಗಳು ನಾಶ
ಆಂಧ್ರದಲ್ಲಿ ಪ್ರವಾಹ
Edited By: ರಶ್ಮಿ ಕಲ್ಲಕಟ್ಟ

Updated on: Nov 21, 2021 | 11:11 PM

ಹೈದರಾಬಾದ್: ಕಳೆದ ವಾರದಿಂದ ಆಂಧ್ರಪ್ರದೇಶದಲ್ಲಿ (Andhra Pradesh Floods) ಪ್ರವಾಹವುಂಟಾಗಿದ್ದು ಹಲವು ನಾಶ ನಷ್ಟಗಳನ್ನುಂಟು ಮಾಡಿದೆ. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 31 ಕ್ಕೆ ತಲುಪಿದೆ. ಪೆನ್ನಾರ್ (Rivers Pennar) ಮತ್ತು ಚೆಯ್ಯೆರು (Cheyyeru) ನದಿಗಳು ಜಲಾವೃತಗೊಂಡಿವೆ. ಹಲವಾರು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ ಮತ್ತು ರಸ್ತೆಗಳು ಜಲಾವೃತವಾಗಿವೆ. ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯ ಪಡುಗುಪಾಡು ಎಂಬಲ್ಲಿ ರಸ್ತೆಗಳು ಜಲಾವೃತಗೊಂಡ ನಂತರ ಪೆನ್ನಾ ನದಿಯು ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-16 ಕ್ಕೆ ಉಕ್ಕಿ ಹರಿಯಿತು. ಪಡುಗುಪಾಡು ರೈಲ್ವೆ ಹಳಿ ಮೇಲೆ ಪ್ರವಾಹ ಉಕ್ಕಿ ಹರಿಯುತ್ತಿರುವುದರಿಂದ ಚೆನ್ನೈ-ವಿಜಯವಾಡ ಗ್ರ್ಯಾಂಡ್ ಟ್ರಂಕ್ ಮಾರ್ಗದಲ್ಲಿ 17ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಯಿತು.  ಆಂಧ್ರಪ್ರದೇಶದ ವಿಪತ್ತು ನಿರ್ವಹಣಾ ಸಂಸ್ಥೆಯು ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯ ಸೋಮಶಿಲಾ ಜಲಾಶಯದಿಂದ ಎರಡು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬಂದಿದ್ದರಿಂದ ಪ್ರವಾಹ ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ನೆಲ್ಲೂರು ಮತ್ತು ವಿಜಯವಾಡ ನಡುವಿನ ರಾಷ್ಟ್ರೀಯ ಹೆದ್ದಾರಿ-16 ರ ಎರಡೂ ಬದಿಗಳಲ್ಲಿ ಪ್ರವಾಹದಿಂದಾಗಿ ವಾಹನಗಳು ಸಿಲುಕಿಕೊಂಡಿವೆ.

ಅನ್ನಮಯ್ಯ ಯೋಜನೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಎರಡು ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಚೆಯ್ಯೂರು ನದಿಗೆ ಅನ್ನಮಯ್ಯ ಯೋಜನೆ ಉಕ್ಕಿ ಹರಿದಿದ್ದರಿಂದ ತೊಗೂರುಪೇಟೆ, ಮಂದಪಲ್ಲಿ, ಪುಲಪತ್ತೂರು, ಗುಂಡ್ಲೂರು ಗ್ರಾಮಗಳು ಪ್ರವಾಹದಲ್ಲಿ ಸಿಲುಕಿವೆ. ಕನಿಷ್ಠ 18 ಜನರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ನೀರು ಬಿಡುಗಡೆಯಿಂದಾಗಿ ಮಧ್ಯಮ ನೀರಾವರಿ ಯೋಜನೆಯು ಮುರಿದುಹೋಗಿದ್ದರಿಂದ ಅನೇಕರು ನಾಪತ್ತೆಯಾಗಿದ್ದಾರೆ.

ಇದು ಆಡಳಿತದ ಘೋರ ದುರಾಡಳಿತವೇ ಹೊರತು ಬೇರೇನೂ ಅಲ್ಲ. ಇಷ್ಟು ಭಾರಿ ಮಳೆಯಾದಾಗ ಪ್ರವಾಹ ಬಂದಿದ್ದು ಅವರಿಗೆ ಗೊತ್ತಿರಲಿಲ್ಲವೇ? ಅದು ನಮ್ಮನ್ನು ನಾಶಮಾಡುವ ಮೊದಲು ಅಪಾಯದ ಬಗ್ಗೆ ನಮಗೆ ಏಕೆ ಎಚ್ಚರಿಕೆ ನೀಡಲಿಲ್ಲ ?ಎಂದು ಕೋಪಗೊಂಡ ಮಂದಪಲ್ಲಿ ಮತ್ತು ತೊಗುರುಪೇಟೆಯ ಗ್ರಾಮಸ್ಥರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಚೆಯ್ಯೆರು ಪ್ರವಾಹಕ್ಕೆ ಪುಲಪತ್ತೂರು ಗ್ರಾಮದಲ್ಲಿ 12 ಮಂದಿ ಸಾವನ್ನಪ್ಪಿದ್ದರೆ, ಮಂದಪಲ್ಲಿಯಲ್ಲಿ ಒಂಬತ್ತು ಮಂದಿ ಹಾಗೂ ಗುಂಡ್ಲೂರಿನಲ್ಲಿ ಐವರು ಸಾವನ್ನಪ್ಪಿದ್ದಾರೆ. ಮಂದಪಲ್ಲಿಯಲ್ಲಿ ಚೆಯ್ಯೆರು ನದಿಯ ಪ್ರವಾಹದಿಂದಾಗಿ ಎರಡು ಕುಟುಂಬಗಳು ನಾಶವಾಗಿವೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
“ನದಿಯ ಹರಿವು ಬದಲಾಯಿತು ಆದರೆ ಅಣೆಕಟ್ಟು ಒಡೆದು ನಿಜವಾದ ವಿನಾಶಕ್ಕೆ ಕಾರಣವಾಯಿತು. ನಾವು ಇನ್ನೂ ಸುಮಾರು 600 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಕಡಪ ಜಿಲ್ಲಾಧಿಕಾರಿ ವಿಜಯ ರಾಮರಾಜು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರವಾಹ ಪೀಡಿತ ಕುಟುಂಬಗಳಿಗೆ ಉಚಿತ ಆಹಾರ


ಚಿತ್ತೂರು, ನೆಲ್ಲೂರು, ಕಡಪ ಮತ್ತು ಅನಂತಪುರ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಯ ಪರಿಶೀಲನಾ ಸಭೆಯ ನಂತರ ಆಂಧ್ರಪ್ರದೇಶ ಸರ್ಕಾರವು ಎಲ್ಲಾ ಪ್ರವಾಹ ಪೀಡಿತ ಕುಟುಂಬಗಳಿಗೆ ಅಕ್ಕಿ, ಬೇಳೆ, ಖಾದ್ಯ ಎಣ್ಣೆ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ.

ಇದನ್ನೂ ಓದಿ:  ‘ಇದು ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ’; ಆಂಧ್ರಕ್ಕೆ ಸೋನು ಸೂದ್​ ಸಹಾಯ ಹಸ್ತ

 

Web contact

TV9 Kannada

Read More
Follow Us