ಶಿಮ್ಲಾದಲ್ಲಿ ಹಿಮಮಳೆ, ವಾಹನ ಸವಾರರ ಪರದಾಟ

ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಹಿಮಮಳೆ ಆರಂಭವಾಗಿದೆ. ನಿರಂತರವಾಗಿ ಸುರಿಯುತ್ತಿರೋ ಹಿಮಮಳೆಗೆ ಜನರ ಓಡಾಟಕ್ಕೆ ಅಡ್ಡಿಯಾಗಿದ್ರೆ, ವಾಹನ ಸವಾರರು ಕೂಡ ಪರದಾಡ್ತಿದ್ದಾರೆ. ಹ್ಯಾಪಿ ಫ್ರಿಡ್ಜ್ ಯೋಜನೆ: ನಕ್ಸಲ್​ ಪೀಡಿತ ಪ್ರದೇಶ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹ್ಯಾಪಿ ಫ್ರಿಡ್ಜ್​​ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಹ್ಯಾಪಿ ಫ್ರಿಡ್ಜ್​ ಇರಿಲಾಗಿದ್ದು, ರೋಗಿಗಳು ತಮಗಿಷ್ಟವಾದ ಹಣ್ಣು, ಹಂಪಲುಗಳನ್ನ ಕೊಂಡೊಯ್ಯಬಹುದಾಗಿದೆ. ಅಕ್ರಮ ಕಟ್ಟಡ ತೆರವು: ಅಕ್ರಮವಾಗಿ ನಿರ್ಮಿಸಿದ್ದ ಹೋಟೆಲ್ ಬಳಿಯ​​​ ಕಟ್ಟಡವನ್ನ ಗುಜರಾತ್​​ನ ಭೋಪಾಲ್​​ನಲ್ಲಿ ನೆಲಸಮ ಮಾಡಲಾಗಿದೆ. ಭೋಪಾಲ್ ಮುನ್ಸಿಪಾಲ್ […]

ಶಿಮ್ಲಾದಲ್ಲಿ ಹಿಮಮಳೆ, ವಾಹನ ಸವಾರರ ಪರದಾಟ

Updated on: Dec 16, 2019 | 1:46 PM

ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಹಿಮಮಳೆ ಆರಂಭವಾಗಿದೆ. ನಿರಂತರವಾಗಿ ಸುರಿಯುತ್ತಿರೋ ಹಿಮಮಳೆಗೆ ಜನರ ಓಡಾಟಕ್ಕೆ ಅಡ್ಡಿಯಾಗಿದ್ರೆ, ವಾಹನ ಸವಾರರು ಕೂಡ ಪರದಾಡ್ತಿದ್ದಾರೆ.

ಹ್ಯಾಪಿ ಫ್ರಿಡ್ಜ್ ಯೋಜನೆ:
ನಕ್ಸಲ್​ ಪೀಡಿತ ಪ್ರದೇಶ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹ್ಯಾಪಿ ಫ್ರಿಡ್ಜ್​​ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಹ್ಯಾಪಿ ಫ್ರಿಡ್ಜ್​ ಇರಿಲಾಗಿದ್ದು, ರೋಗಿಗಳು ತಮಗಿಷ್ಟವಾದ ಹಣ್ಣು, ಹಂಪಲುಗಳನ್ನ ಕೊಂಡೊಯ್ಯಬಹುದಾಗಿದೆ.

ಅಕ್ರಮ ಕಟ್ಟಡ ತೆರವು:
ಅಕ್ರಮವಾಗಿ ನಿರ್ಮಿಸಿದ್ದ ಹೋಟೆಲ್ ಬಳಿಯ​​​ ಕಟ್ಟಡವನ್ನ ಗುಜರಾತ್​​ನ ಭೋಪಾಲ್​​ನಲ್ಲಿ ನೆಲಸಮ ಮಾಡಲಾಗಿದೆ. ಭೋಪಾಲ್ ಮುನ್ಸಿಪಾಲ್ ಕಾರ್ಪೊರೇಷನ್ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನ ತೆರವುಗೊಳಿಸಿದ್ದಾರೆ.

150 ಕೆ.ಜಿ ಗಾಂಜಾ ವಶ:
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 150 ಕೆ.ಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಅಂಬಾಸಿಡರ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ:
ಪಶ್ಚಿಮ ಬಂಗಾಳದ ಬುರ್ದ್ವಾನ್​​​ನಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಟಿಎಂಸಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದು, ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Published On - 10:43 am, Mon, 16 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us