AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸ್ಟೆಲ್ ಒಳಗಡೆಯೇ ಬಾರ್ ಓಪನ್ ಮಾಡಿದ ವಾರ್ಡನ್! ಸಚಿತ್ರಣ ಇಲ್ಲಿದೆ

ಹಾಸ್ಟೆಲ್ ಒಳಗಡೆಯೇ ಬಾರ್ ಓಪನ್ ಮಾಡಿದ ವಾರ್ಡನ್! ಹಾಸ್ಟೆಲ್‌ಗಳಲ್ಲಿ ಮದ್ಯದ ಬಾರ್‌ಗಳನ್ನು ತೆರೆದರೆ ವಿದ್ಯಾರ್ಥಿಗಳ ಭವಿಷ್ಯ ಏನಾಗುತ್ತದೆ ಎಂದು ಪೋಷಕರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ.

ಸಾಧು ಶ್ರೀನಾಥ್​
|

Updated on: Jan 29, 2024 | 11:38 AM

Share

ಅನಂತಪುರ, ಜನವರಿ 28: ಆತ ಜವಾಬ್ದಾರಿಯುತ ಹಾಸ್ಟೆಲ್ ವಾರ್ಡನ್. ಹಾಸ್ಟೆಲ್‌ಗಳಲ್ಲಿ ಓದಲು ಬಂದ ಮಕ್ಕಳನ್ನು ಎಚ್ಚರಿಕೆಯಿಂದ ಗಮನಿಸುವುದು… ತಂದೆ-ತಾಯಿಯಿಂದ ದೂರ ಉಳಿದು ಓದುತ್ತಿರುವ ಮಕ್ಕಳು ಕೆಟ್ಟ ದಾರಿಯಲ್ಲಿ ಹೋಗದಂತೆ ಅವರ ಮೇಲೆ ನಿಗಾ ಇಡುವುದು ಅವರ ಜವಾಬ್ದಾರಿಯಾಗಿದೆ. ಆದರೆ ಇದೆಲ್ಲದಕ್ಕಿಂತ ಭಿನ್ನವಾಗಿ … ನೇರಾನೇರ ಹಾಸ್ಟೆಲ್‌ನಲ್ಲಿ ಮದ್ಯ ಸೇವಿಸಲು ಬಾರ್ ಅನ್ನು ತೆರೆದುಬಿಟ್ಟಿದ್ದಾನೆ ಆ ಹಾಸ್ಟೆಲ್ ವಾರ್ಡನ್ ಭೂಪ. ಅನಂತಪುರದ ಪ್ರತಿಷ್ಠಿತ ಇಂಟರ್‌ನ್ಯಾಶನಲ್ ಸ್ಕೂಲ್ ಹಾಸ್ಟೆಲ್ ವಾರ್ಡನ್ ಆಟಾಟೋಪದ ಸಚಿತ್ರಣ ಇಲ್ಲಿದೆ . ಹಾಸ್ಟೆಲ್‌ ವಾರ್ಡನ್ ವಿಜಯ್ ಶಂಕರ್ ವರಪ್ರಸಾದ್ ಕೊಠಡಿಯನ್ನು ನೋಡಿದಾಗ, ಅದು ಖಂಡಿತವಾಗಿಯೂ ಮದ್ಯದ ಬಾಟಲಿಗಳಿಂದ ತುಂಬಿದ ಬಾರ್ ಎಂಬುದು ರುಜುವಾತಾಗುತ್ತದೆ. ದಿನವೂ ಹಾಸ್ಟೆಲ್ ಗೆ ಮದ್ಯ ತಂದು ಕುಡಿಯುತ್ತಾ ವಿದ್ಯಾರ್ಥಿಗಳನ್ನು ಗೋಳಾಡಿಸುತ್ತಿದ್ದಾನೆ ವಾರ್ಡನ್.

ಹಾಸ್ಟೆಲ್ ವಾರ್ಡನ್ ವಿಜಯ್ ಶಂಕರ್ ಹೊಡೆತ ತಾಳಲಾರದೆ ವಿದ್ಯಾರ್ಥಿಗಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳ ಪೋಷಕರು ಡಯಲ್ 100ಗೆ ಕರೆ ಮಾಡಿ ಹಿರಿಯ ಶಾಲಾ ಆಡಳಿತ ಮಂಡಳಿ ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಸ್ಟೆಲ್‌ಗೆ ಬಂದಿದ್ದು, ವಿಜಯ್ ಶಂಕರ್ ಅವರನ್ನು ಬಂಧಿಸಲಾಗಿದೆ. ಹಾಸ್ಟೆಲ್‌ಗೆ ಬಂದ ಪೊಲೀಸರಿಗೆ ವಿದ್ಯಾರ್ಥಿಗಳು ತಮ್ಮ ಬೆನ್ನಿನ ಮೇಲಿನ ಗಾಯಗಳನ್ನು ತೋರಿಸಿದಾಗ ವಾರ್ಡನ್ ವಿಜಯ್ ಶಂಕರ್ ಅವರ ಕ್ರೌರ್ಯ ಹೊರಬಿದ್ದಿದೆ. ಅಂತೆಯೇ ಕೊಠಡಿಯನ್ನು ಪರಿಶೀಲಿಸಿದ ಪೊಲೀಸರಿಗೆ ವಾರ್ಡನ್ ವಿಜಯ್ ಶಂಕರ್ ಬಾರ್​​ ದೃಶ್ಯಾವಳಿಗಳು ಕಂಡಿವೆ. ಕುಡಿದು ಖಾಲಿ ಮಾಡಿರುವ ಮದ್ಯದ ಬಾಟಲಿಗಳು ನೂರಾರು ಕಂಡವು. ಅಸಲಿಗೆ ಇದು ಹಾಸ್ಟೆಲಾ, ವಾರ್ಡನ್ ಕೊಠಡಿಯಾ ಅಥವಾ ಮದ್ಯದ ಅಂಗಡಿಯಾ ಎಂಬಂತೆ ಕಂಡುಬಂದಿದೆ.

ಶಾಲಾ ಹಾಸ್ಟೆಲ್ ವಾರ್ಡನ್ ವಿಜಯಶಂಕರ್ ಅವರ ವರ್ತನೆಗೆ ಹಲವು ವಿದ್ಯಾರ್ಥಿ ಸಂಘಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ. ವಾರ್ಡನ್ ಕಾರ್ಯವೈಖರಿ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದ್ಯಾರ್ಥಿ ಸಂಘದ ಮುಖಂಡರು ಶಾಲಾ ಆಡಳಿತ ಮಂಡಳಿ ಮತ್ತು ವಾರ್ಡನ್ ವಿಜಯಶಂಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ದೂರದ ಪ್ರದೇಶಗಳಲ್ಲಿ ವಾಸಿಸುವ ಪೋಷಕರು ತಮ್ಮ ಮಕ್ಕಳನ್ನು ಅವರ ಪೋಷಕರು ಶಿಕ್ಷಣಕ್ಕಾಗಿ ಹಾಸ್ಟೆಲ್‌ಗಳಿಗೆ ಕಳುಹಿಸುತ್ತಾರೆ. ಆದರೆ ಇಂತಹ ವಾರ್ಡನ್‌ಗಳಿರುವ ಹಾಸ್ಟೆಲ್‌ಗಳಲ್ಲಿ ಮಕ್ಕಳು ವ್ಯಾಸಂಗ ಮಾಡಬೇಕಾದೀತು. ಹಾಸ್ಟೆಲ್ ವಾರ್ಡನ್‌ಗಳು ಹಾಸ್ಟೆಲ್‌ನಲ್ಲಿರುವ ಮಕ್ಕಳನ್ನು ಕೆಟ್ಟ ಹಾದಿಯಲ್ಲಿ ಹೋಗದಂತೆ ಸುರಕ್ಷಿತವಾಗಿರಿಸಬೇಕಾಗುತ್ತದೆ. ಆದರೆ ಹಾಸ್ಟೆಲ್‌ಗಳಲ್ಲಿ ಮದ್ಯದ ಬಾರ್‌ಗಳನ್ನು ತೆರೆದರೆ ಅವರ ಭವಿಷ್ಯ ಏನಾಗುತ್ತದೆ ಎಂದು ಪೋಷಕರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ