ವಿಮಾನ ಪ್ರಯಾಣದ ನಡುವೆ ಸಿಗರೇಟ್ ಸೇದಿದ್ದ ಕೇರಳದ ವ್ಯಕ್ತಿಯ ಬಂಧನ

ಪೊಲೀಸರ ಪ್ರಕಾರ, ತ್ರಿಶೂರ್ ನಿವಾಸಿ ಸುಕುಮಾರನ್ ವಿರುದ್ಧ ವಿಮಾನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜನವರಿ 29 ರಂದು ಪ್ರಕರಣ ದಾಖಲಾಗಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ

ವಿಮಾನ ಪ್ರಯಾಣದ ನಡುವೆ ಸಿಗರೇಟ್ ಸೇದಿದ್ದ ಕೇರಳದ ವ್ಯಕ್ತಿಯ ಬಂಧನ
ಪ್ರಾತಿನಿಧಿಕ ಚಿತ್ರ
Edited By:

Updated on: Jan 31, 2023 | 8:38 PM

ಕೊಚ್ಚಿ: ಜನವರಿ 29 ರಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಖಾಸಗಿ ಏರ್‌ಲೈನ್ಸ್‌ನ ಶೌಚಾಲಯದೊಳಗೆ ಸಿಗರೇಟ್ ಸೇದಿದ ಆರೋಪದ ಮೇಲೆ ಕೇರಳದ 62 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ತ್ರಿಶೂರ್ ನಿವಾಸಿ ಸುಕುಮಾರನ್ ವಿರುದ್ಧ ವಿಮಾನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜನವರಿ 29 ರಂದು ಪ್ರಕರಣ ದಾಖಲಾಗಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ. ನಂತರ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.

ವಿಮಾನದ ಹಾರಾಟದಲ್ಲಿರುವಾಗಲೇ ಸ್ಪೈಸ್‌ಜೆಟ್ ಏರ್‌ವೇಸ್‌ನ ಶೌಚಾಲಯದೊಳಗೆ ವ್ಯಕ್ತಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ ಮತ್ತು ಸಿಬ್ಬಂದಿ ಆತನನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ಎಫ್ಐಆರ್ ಹೇಳಿದೆ.

ದುಬೈನಿಂದ ಕೊಚ್ಚಿಗೆ ಬರುವ ಸ್ಪೈಸ್‌ಜೆಟ್ ವಿಳಂಬ

ದುಬೈನಿಂದ ಕೊಚ್ಚಿಗೆ ಬರುವ ಸ್ಪೈಸ್‌ಜೆಟ್ ವಿಮಾನ ತಡವಾಗಿದೆ. ಮಂಗಳವಾರ ಮಧ್ಯಾಹ್ನ 12.10ಕ್ಕೆ ಹೊರಡಬೇಕಿದ್ದ ವಿಮಾನ ಇನ್ನೂ ಟೇಕಾಫ್ ಆಗಿಲ್ಲ. ಬುಧವಾರ ಬೆಳಗ್ಗೆ 7.30ಕ್ಕೆ ಹೊರಡಲಿದೆ ಎಂಬುದು ಅಧಿಸೂಚನೆ  ಲಭಿಸಿದೆ. ವಿಮಾನ ವಿಳಂಬವಾಗಲು ತಾಂತ್ರಿಕ ದೋಷವೇ ಕಾರಣ ಎನ್ನಲಾಗಿದೆ.

ಸುಮಾರು 150 ಪ್ರಯಾಣಿಕರಿದ್ದಾರೆ. ತಂ ಪರ್ಯಾಯ ಸೌಲಭ್ಯ ಕಲ್ಪಿಸಿಲ್ಲ ಎಂದು ಪ್ರಯಾಣಿಕರು ದೂರಿದ್ದು,ಪ್ರಯಾಣಿಕರು ವಿಮಾನ ನಿಲ್ದಾಣ ಅಥವಾ ಹೋಟೆಲ್‌ನಲ್ಲಿ ರಾತ್ರಿ ಕಳೆಯಬೇಕಾಗಿದೆ.

ಕಳೆದ ದಿನ, ಶಾರ್ಜಾದಿಂದ ಕೋಯಿಕ್ಕೋಡ್​​ಗೆ  ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅಸಮರ್ಪಕ ಕಾರ್ಯದಿಂದಾಗಿ ಹಿಂತಿರುಗಿಸಲಾಗಿತ್ತು. ಈ ವಿಮಾನದ ಪ್ರಯಾಣಿಕರನ್ನು 38 ಗಂಟೆಗಳ ನಂತರ ಮನೆಗೆ ಕಳುಹಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Tue, 31 January 23