AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊರ್ಬಿ ಸೇತುವೆ ದುರಂತ: ನ್ಯಾಯಾಲಯಕ್ಕೆ ಶರಣಾದ ಒರೆವಾ ಗ್ರೂಪ್​​ನ ಜಯಸುಖ್ ಪಟೇಲ್

Morbi Bridge Tragedy ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಸಂಸ್ಥೆಯ ಭಾಗದಲ್ಲಿ ಅನೇಕ ಲೋಪದೋಷಗಳನ್ನು ಉಲ್ಲೇಖಿಸಿದೆ. ನವೀಕರಣದ ಸಮಯದಲ್ಲಿ ತುಕ್ಕು ಹಿಡಿದ ಕೇಬಲ್‌ಗಳು, ಮುರಿದ ಆಂಕರ್ ಪಿನ್‌ಗಳು ಮತ್ತು ಸಡಿಲವಾದ ಬೋಲ್ಟ್‌ಗಳನ್ನು ಬದಲಾಯಿಸಲಾಗಿಲ್ಲ ಎಂದು ವಿಧಿವಿಜ್ಞಾನ ಪರೀಕ್ಷೆಗಳು ಬಹಿರಂಗಪಡಿಸಿವೆ

ಮೊರ್ಬಿ ಸೇತುವೆ ದುರಂತ: ನ್ಯಾಯಾಲಯಕ್ಕೆ ಶರಣಾದ ಒರೆವಾ ಗ್ರೂಪ್​​ನ ಜಯಸುಖ್ ಪಟೇಲ್
ಮೊರ್ಬಿ ಸೇತುವೆ
TV9 Web
| Edited By: |

Updated on: Jan 31, 2023 | 6:37 PM

Share

ದೆಹಲಿ: ಅಕ್ಟೋಬರ್‌ನಲ್ಲಿ ಕುಸಿದುಬಿದ್ದ ಗುಜರಾತ್‌ನ (Gujarat) ಮೊರ್ಬಿಯಲ್ಲಿ (Morbi Bridge Tragedy) 135 ಮಂದಿ ಸಾವನ್ನಪ್ಪಿದ ಸೇತುವೆಯ ನಿರ್ವಹಣೆ ಮತ್ತು ದುರಸ್ತಿಗಾಗಿ ಒರೆವಾ (Oreva group) ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಮಂಗಳವಾರ ಸ್ಥಳೀಯ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲ್ಪಟ್ಟ ನಂತರ ಕಳೆದ ವಾರ ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಘಟನೆಯ ನಂತರ ಪಟೇಲ್ ನಾಪತ್ತೆಯಾಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಅರ್ಜಿ ಸಲ್ಲಿಸಿದ್ದರು. ಅಜಂತಾ ಬ್ರಾಂಡ್‌ನ ಅಡಿಯಲ್ಲಿ ಗೋಡೆ ಗಡಿಯಾರಗಳ ತಯಾರಕರಾದ ಒರೆವಾ ಗ್ರೂಪ್‌ಗೆ ಮಚ್ಚು ನದಿಯ ಮೇಲಿನ ಬ್ರಿಟಿಷರ ಕಾಲದ ತೂಗು ಸೇತುವೆಯ ನವೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಯಿತು. ಅಕ್ಟೋಬರ್ 30 ರಂದು, ಅದು ಮತ್ತೆ ತೆರೆದ ನಾಲ್ಕು ದಿನಗಳ ನಂತರ, ಕೇಬಲ್‌ಗಳು ತುಂಡಾಗಿ ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಸುಮಾರು 300 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಸಂಸ್ಥೆಯ ಭಾಗದಲ್ಲಿ ಅನೇಕ ಲೋಪದೋಷಗಳನ್ನು ಉಲ್ಲೇಖಿಸಿದೆ. ನವೀಕರಣದ ಸಮಯದಲ್ಲಿ ತುಕ್ಕು ಹಿಡಿದ ಕೇಬಲ್‌ಗಳು, ಮುರಿದ ಆಂಕರ್ ಪಿನ್‌ಗಳು ಮತ್ತು ಸಡಿಲವಾದ ಬೋಲ್ಟ್‌ಗಳನ್ನು ಬದಲಾಯಿಸಲಾಗಿಲ್ಲ ಎಂದು ವಿಧಿವಿಜ್ಞಾನ ಪರೀಕ್ಷೆಗಳು ಬಹಿರಂಗಪಡಿಸಿವೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯುವ ಮೊದಲು ಅದರ ಭಾರ ಹೊರುವ ಸಾಮರ್ಥ್ಯವನ್ನು ನಿರ್ಣಯಿಸಲು ಯಾವುದೇ ಪರಿಣಿತ ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ ಎಂದು ಹೇಳಿದೆ. ಕಳೆದ ವಾರ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ, ಕಂಪನಿಯು ಕೇಬಲ್-ಸ್ಟೇಡ್ ರಚನೆಯನ್ನು “ಪರೋಪಕಾರಿ ಚಟುವಟಿಕೆಗಳ” ಭಾಗವಾಗಿ ನಿರ್ವಹಿಸುತ್ತಿದೆ ಮತ್ತು “ವಾಣಿಜ್ಯ ಉದ್ಯಮ” ವಾಗಿ ಅಲ್ಲ ಎಂದು ಹೇಳಿದೆ.

ಈ ಪ್ರಕರಣದಲ್ಲಿ ಜೈಸುಖ್ ಪಟೇಲ್ ಬಂಧಿತ 10ನೇ ಆರೋಪಿ. ಮೊದಲು ಬಂಧಿಸಲ್ಪಟ್ಟವರಲ್ಲಿ ಉಪಗುತ್ತಿಗೆದಾರರು, ಟಿಕೆಟ್ ಗುಮಾಸ್ತರಾಗಿ ಕೆಲಸ ಮಾಡಿದ ದಿನಗೂಲಿ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಪಟೇಲ್ ಬಂಧನ ವಿಳಂಬವಾಗಿದ್ದಕ್ಕೆ ರಾಜ್ಯದ ಬಿಜೆಪಿ ಸರ್ಕಾರವು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯವಾಗಿ ಪ್ರಭಾವಿ ಕೈಗಾರಿಕೋದ್ಯಮಿಯನ್ನು ರಕ್ಷಿಸುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು.

ಮಾರ್ಚ್ 7, 2022 ರಂದು ಮುಚ್ಚುವವರೆಗೆ ಡಿಸೆಂಬರ್ 29, 2021 ರಿಂದ ಸೇತುವೆಯನ್ನು ಬಳಸಲು ಒರೆವಾ ಗ್ರೂಪ್‌ಗೆ ಹೇಗೆ ಅನುಮತಿ ನೀಡಲಾಯಿತು ಎಂಬುದನ್ನು ಬಹಿರಂಗಪಡಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ಮೊರ್ಬಿಯ ನಾಗರಿಕ ಸಂಸ್ಥೆಯನ್ನು ಪ್ರಶ್ನಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ