AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಹೋಮದ ಬಳಿಕ ಅದರ ತಿಲಕಧಾರಣೆಯಿಂದ ಆಗುವ ಲಾಭಗಳು!

Daily Devotional: ಹೋಮದ ಬಳಿಕ ಅದರ ತಿಲಕಧಾರಣೆಯಿಂದ ಆಗುವ ಲಾಭಗಳು!

ಭಾವನಾ ಹೆಗಡೆ
|

Updated on: Feb 22, 2026 | 7:21 AM

Share

ತಿಲಕವನ್ನು ಹಣೆಗೆ ಧರಿಸುವುದರಿಂದ ಆಜ್ಞಾ ಚಕ್ರ ಜಾಗೃತಗೊಳ್ಳುತ್ತದೆ. ಇದು ದೈವಿಕ ಶಕ್ತಿಯ ಸಂಕೇತವಾಗಿದ್ದು, ಸಾತ್ವಿಕ ಗುಣಗಳನ್ನು ಹೆಚ್ಚಿಸುತ್ತದೆ. ಹೋಮದ ಭಸ್ಮದಲ್ಲಿರುವ ತುಪ್ಪ, ಗಿಡಮೂಲಿಕೆಗಳು ಮತ್ತು ಸವಿತ್ತುಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಈ ಭಸ್ಮವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ. ಇದು ಧನಾತ್ಮಕ ಶಕ್ತಿಯನ್ನು ನೀಡಿ, ನಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಶುಭ ಫಲಗಳನ್ನು ನೀಡಲು ಸಹಕರಿಸುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಫೆಬ್ರವರಿ​ 22​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹೋಮದ ಬಳಿಕ ಅದರ ತಿಲಕಧಾರಣೆಯಿಂದ ಆಗುವ ಲಾಭಗಳೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಹೋಮ ತಿಲಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕೇಸರಿ, ಚಂದನ, ವಿಭೂತಿ, ಗಂಧ ಇತ್ಯಾದಿಗಳನ್ನು ಹಣೆಗೆ ಧರಿಸುವ ಪದ್ಧತಿಯಲ್ಲಿ ಹೋಮದ ತಿಲಕ ಅತ್ಯಂತ ವಿಶೇಷವಾಗಿದೆ. ಗಣಹೋಮ, ಚಂಡಿ ಹೋಮ, ಮೃತ್ಯುಂಜಯ ಹೋಮ, ಸುದರ್ಶನ ಹೋಮ ಸೇರಿದಂತೆ ಯಾವುದೇ ಹೋಮದ ಬಳಿಕ ದೊರೆಯುವ ತಿಲಕವನ್ನು ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ತನಕ ಧರಿಸಬಹುದು. ಇದು ಸುಮಾರು ಒಂದು ತಿಂಗಳ ಅವಧಿಯಾಗಿರುತ್ತದೆ. ನಂತರ ಇದನ್ನು ನೀರಿಗೆ ಅರ್ಪಿಸಬಹುದು ಅಥವಾ ತುಳಿಯದ ಜಾಗದಲ್ಲಿ ಇಡಬಹುದು.

ತಿಲಕವನ್ನು ಹಣೆಗೆ ಧರಿಸುವುದರಿಂದ ಆಜ್ಞಾ ಚಕ್ರ ಜಾಗೃತಗೊಳ್ಳುತ್ತದೆ. ಇದು ದೈವಿಕ ಶಕ್ತಿಯ ಸಂಕೇತವಾಗಿದ್ದು, ಸಾತ್ವಿಕ ಗುಣಗಳನ್ನು ಹೆಚ್ಚಿಸುತ್ತದೆ. ಹೋಮದ ಭಸ್ಮದಲ್ಲಿರುವ ತುಪ್ಪ, ಗಿಡಮೂಲಿಕೆಗಳು ಮತ್ತು ಸವಿತ್ತುಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಈ ಭಸ್ಮವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ. ಇದು ಧನಾತ್ಮಕ ಶಕ್ತಿಯನ್ನು ನೀಡಿ, ನಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಶುಭ ಫಲಗಳನ್ನು ನೀಡಲು ಸಹಕರಿಸುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.