AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ: ವಿಶ್ವ ನಾಯಕರ ಓಡಾಟಕ್ಕಾಗಿ 1,500 ಐಷಾರಾಮಿ ಕಾರುಗಳನ್ನು ನೇಪಾಳದಿಂದ ಆಮದು ಮಾಡಿಕೊಂಡ ಭಾರತ

ಜಿ20 ಶೃಂಗಸಭೆ(G20 Summit)ಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಶೃಂಗಸಭೆಯನ್ನು ಯಶಸ್ವಿಗೊಳಿಸಲು ಭಾರತ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿದೇಶಿ ಅತಿಥಿಗಳಿಗೆ ಎಲ್ಲಾ ರೀತಿಯ ಸೌಕರ್ಯವನ್ನು ಒದಗಿಸಲು ನೇಪಾಳದಿಂದ 1500 ಐಷಾರಾಮಿ ಆಮದು ಮಾಡಿಕೊಳ್ಳಲಾಗಿದೆ. ಈ ಶೃಂಗಸಭೆಗಾಗಿ ಬುಗಾಟಿಯಿಂದ ಲಂಬೋರ್ಗಿನಿ, ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್‌ನಂತಹ ಐಷಾರಾಮಿ ವಾಹನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ.

ಜಿ20 ಶೃಂಗಸಭೆ: ವಿಶ್ವ ನಾಯಕರ ಓಡಾಟಕ್ಕಾಗಿ 1,500 ಐಷಾರಾಮಿ ಕಾರುಗಳನ್ನು ನೇಪಾಳದಿಂದ ಆಮದು ಮಾಡಿಕೊಂಡ ಭಾರತ
ಕಾರುImage Credit source: TV9 Bharatvarsh
Follow us
ನಯನಾ ರಾಜೀವ್
|

Updated on: Sep 05, 2023 | 3:33 PM

ಜಿ20 ಶೃಂಗಸಭೆ(G20 Summit)ಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಶೃಂಗಸಭೆಯನ್ನು ಯಶಸ್ವಿಗೊಳಿಸಲು ಭಾರತ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ವಿದೇಶಿ ಅತಿಥಿಗಳಿಗೆ ಎಲ್ಲಾ ರೀತಿಯ ಸೌಕರ್ಯವನ್ನು ಒದಗಿಸಲು ನೇಪಾಳದಿಂದ 1500 ಐಷಾರಾಮಿ ಆಮದು ಮಾಡಿಕೊಳ್ಳಲಾಗಿದೆ. ಈ ಶೃಂಗಸಭೆಗಾಗಿ ಬುಗಾಟಿಯಿಂದ ಲಂಬೋರ್ಗಿನಿ, ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್‌ನಂತಹ ಐಷಾರಾಮಿ ವಾಹನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ.

ಜಿ20 ಗೆ ಹಾಜರಾಗುವ ಪ್ರತಿನಿಧಿಗಳಿಗಾಗಿ 1,500 ಆಮದು ಮಾಡಿದ ಕಾರುಗಳು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಎಡಗೈ ಡ್ರೈವಿಂಗ್ ಕಾರುಗಳಾಗಿವೆ, ದೆಹಲಿಯ ರಸ್ತೆಗಳಲ್ಲಿ ನೇಪಾಳ ನಂಬರ್ ಹೊಂದಿರುವ ಕಾರುಗಳು ಓಡುತ್ತಿರುವುದು ಕಾಣಿಸುತ್ತಿವೆ.

ಈ ಐಷಾರಾಮಿ ಆಮದು ಮಾಡಲಾದ ಕಾರುಗಳು ವಿದೇಶದಿಂದ ಬರುವ ಅತಿಥಿಗಳನ್ನು ವಿಮಾನ ನಿಲ್ದಾಣದಿಂದ ಸ್ವೀಕರಿಸಲು, ಹೋಟೆಲ್‌ಗಳಿಂದ ಅವರನ್ನು ಕರೆದುಕೊಂಡು ಹೋಗಲು, ಅವರನ್ನು ಬಿಡಲು ಅಥವಾ ಮಾರುಕಟ್ಟೆಗಳು ಮತ್ತು ಕಾರ್ಯಕ್ರಮಗಳಿಗೆ ಕರೆದೊಯ್ಯಲು ಸಹಾಯ ಮಾಡುತ್ತವೆ.

ಜಿ20 ಸಮಯದಲ್ಲಿ, 70 ಲಕ್ಷದಿಂದ 2 ಕೋಟಿ ರೂಪಾಯಿವರೆಗಿನ ಪ್ರೀಮಿಯಂ ವಿದೇಶಿ ಕಾರುಗಳು ರಸ್ತೆಗಳಲ್ಲಿ ಓಡುತ್ತವೆ. ಇದು ಬುಗಾಟಿ, ಬೆಂಟ್ಲಿ, ಪೋರ್ಷೆ, ಫೋಕ್ಸ್‌ವ್ಯಾಗನ್, ಲಂಬೋರ್ಘಿನಿ, BMW 5 ಸರಣಿ, ಆಡಿ, ಮರ್ಸಿಡಿಸ್ ಇ-ಕ್ಲಾಸ್ ಮತ್ತು GLS ನಂತಹ ಕಾರುಗಳನ್ನು ಒಳಗೊಂಡಿದೆ.

ಮತ್ತಷ್ಟು ಓದಿ: G-20 Summit: ದೆಹಲಿಗೆ ಹೋಗುತ್ತಿದ್ದಿರಾ? ನವದೆಹಲಿ, ದೆಹಲಿ, ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ತೆರಳುವವರಿಗೆ ಇಲ್ಲಿದೆ ಸಲಹೆ

ವರದಿಗಳ ಪ್ರಕಾರ, ಈ ಆಮದು ಮಾಡಲಾದ ಹಲವು ವಾಹನಗಳನ್ನು ಸೇನೆ ಮತ್ತು ಸಿಆರ್‌ಪಿಎಫ್‌ಗೆ ನೀಡಲಾಗುವುದು. ಸಿಆರ್‌ಪಿಎಫ್‌ನ 450ಕ್ಕೂ ಹೆಚ್ಚು ವಿಶೇಷ ತರಬೇತಿ ಪಡೆದ ಕಮಾಂಡೋಗಳು ಪ್ರತಿನಿಧಿಗಳೊಂದಿಗೆ ಚಾಲನೆ ನೀಡಲಿದ್ದಾರೆ.

ಅತಿಥಿಗಳಿಗಾಗಿ 1258 ವಿದೇಶಿ ಕಾರುಗಳು, 242 ವಾಣಿಜ್ಯ ಟ್ಯಾಕ್ಸಿಗಳು ಮತ್ತು ಆಲ್ ಇಂಡಿಯಾ ಟೂರಿಸ್ಟ್ ನೋಂದಾಯಿತ ವಾಹನಗಳು, ಭಾರತೀಯ ಐಷಾರಾಮಿ ಕಾರುಗಳು, ಅರಾಬೇನಿಯಾ, ವೋಲ್ವೋ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ವರದಿಗಳ ಪ್ರಕಾರ, ಅತಿಥಿಗಳು ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ವಿದೇಶಿ ಬಸ್‌ಗಳು, ರಾಜಕಾರಣಿಗಳಿಗೆ ಸಣ್ಣ ಕಾರುಗಳು, ಇದರಲ್ಲಿ ಕಿಯಾ ಕಾರ್ನಿವಲ್, ಆರ್ಟಿಕಾ, ಇನ್ನೋವಾ ಕ್ರಿಸ್ಟಾ, ಹೈಕ್ರಾಸ್ ಮತ್ತು ವೋಲ್ವೋ ಹೆಚ್ಚಿನ ಬೇಡಿಕೆಗಳನ್ನು ಹೊಂದಿವೆ.

ವಾಹನಗಳ ದರ ಎಷ್ಟು?

G20 ಸಮಯದಲ್ಲಿ ಅತಿಥಿಗಳಿಗಾಗಿ ವಿದೇಶದಿಂದ ಬರುವ ಐಷಾರಾಮಿ ವಾಹನಗಳ ಒಂದು ದಿನದ ದರವು 10,000 ರಿಂದ 70,000 ರೂ. ಇರಲಿದೆ. ವರದಿಗಳ ಪ್ರಕಾರ, ದೆಹಲಿಯ ಕಾರು ಬಾಡಿಗೆ ಕಂಪನಿ KTC G20 ನಲ್ಲಿ ಪ್ರಯಾಣಿಸಲು ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದೆ. ಈ ಸಮಯದಲ್ಲಿ, 1,058 ವಿದೇಶಿ ಕಾರುಗಳನ್ನು ಸಹ ಏಜೆನ್ಸಿಗಳಿಗೆ ನೀಡಲಾಗುತ್ತದೆ.

ಇದರಲ್ಲಿ ಮರ್ಸಿಡಿಸ್ ಎಸ್ ಕ್ಲಾಸ್, ಇ. ಕ್ಲಾಸ್, ಜಿಎಲ್‌ಎಸ್ ವಿ ಕ್ಲಾಸ್, ಬಿಎಂಡಬ್ಲ್ಯುನ 5 ಮತ್ತು 7 ಸಿರೀಸ್, ಟೊಯೊಟಾದ ಹೈಎಸ್ ಸಿರೀಸ್ ಕಾರುಗಳು ಸೇರಿವೆ.

ಟೊಯೊಟಾದ HiS ಸರಣಿಯನ್ನು ನೇಪಾಳದಿಂದ ಆಮದು ಮಾಡಿಕೊಳ್ಳಲಾಗಿದೆ. ಟೊಯೊಟಾದ ಹೈಸ್ ಸರಣಿಯ ಕಾರಿನ ಬೇಡಿಕೆಯಿದ್ದು, ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ 25 ವಾಹನಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದಲ್ಲದೆ, ಹ್ಯುಂಡೈನ ಜೆನೆಸಿಸ್ ಮಾಡೆಲ್ 250 ಲೆಫ್ಟ್ ಹ್ಯಾಂಡ್ ಮಾಡೆಲ್ ಐಷಾರಾಮಿ ಕಾರು ಜಿ20 ಸಮಯದಲ್ಲಿ ಮೊದಲ ಬಾರಿಗೆ ದೆಹಲಿಯ ರಸ್ತೆಗಳಲ್ಲಿ ಓಡಲಿದೆ. BMW ಮತ್ತು ಹ್ಯುಂಡೈ ಎಂಬ ಎರಡು ಕಾರು ಕಂಪನಿಗಳು ತಮ್ಮ ಕಾರುಗಳನ್ನು G-20 ಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ