AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರಿಗೆ ಪತ್ರ ಬರೆದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು

ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗ್ಲೋಕಲ್​ ಯೂನಿವರ್ಸಿಟಿ ಉಪಕುಲಪತಿ ಅಕೀಲ್​ ಅಹ್ಮದ್​, ಮೆಡಿಕಲ್​ ಕೌನ್ಸಿಲ್​ ಆಫ್ ಇಂಡಿಯಾ ನಮ್ಮ ಯೂನಿವರ್ಸಿಟಿಯನ್ನು ಅಮಾನ್ಯ ಮಾಡಿದ್ದರೂ, ನಾವು ನಮ್ಮ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳಲಿ ಎಂದುಕೊಂಡೆವು ಎಂದು ಹೇಳಿದ್ದಾರೆ.

ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರಿಗೆ ಪತ್ರ ಬರೆದ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು
ಗ್ಲೋಕಲ್​ ಕಾಲೇಜು
TV9 Web
| Edited By: |

Updated on:Feb 02, 2022 | 3:51 PM

Share

ಉತ್ತರ ಪ್ರದೇಶದ ಶಹರನ್​ಪುರದ ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಗೆ ಪತ್ರ ಬರೆದು, ನಮಗೆಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಬೇಡಿಕೊಂಡಿದ್ದಾರೆ. ಕಲಿಕೆ ಸ್ಥಗಿತಗೊಂಡಿದ್ದರಿಂದ ತುಂಬ ಸಮಸ್ಯೆ ಉಂಟಾಗಿದೆ. ಹೀಗಾಗಿ ನಮಗೆ ದಯಾಮರಣಕ್ಕೆ ಅನುಮತಿಸಿ ಎಂದು  ಕೇಳಿಕೊಂಡಿದ್ದಾರೆ.

ಶಹರನ್​​ಪುರದ ಗ್ಲೋಕಲ್​ ವೈದ್ಯಕೀಯ ಕಾಲೇಜು ಎಂಬಿಬಿಎಸ್​ ಕೋರ್ಸ್​​​ಗಾಗಿ  66 ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಂಡಿತ್ತು. ಆದರೆ ಮೂರೇ ತಿಂಗಳ ನಂತರ ಈ ಕಾಲೇಜನ್ನು ಭಾರತದ ವೈದ್ಯಕೀಯ ಮಂಡಳಿ (MCI-Medical Council Of India) ಅಮಾನ್ಯಗೊಳಿಸಿತು. ಆದರೆ ಕಾಲೇಜು ಆಡಳಿತ ಮಂಡಳಿ ಇದನ್ನು ನಮಗೆ ತಿಳಿಸಲೇ ಇಲ್ಲ. ನಾವು ಅಲ್ಲಿಂದ 2021ರವರೆಗೆ 5ವರ್ಷಗಳ ಕಾಲ ಅಲ್ಲಿಯೇ ಎಂಬಿಬಿಎಸ್ ಮಾಡಿದೆವು. ನಂತರ ಕಾಲೇಜು ಅಮಾನ್ಯಗೊಂಡ ವಿಚಾರ ನಮಗೆ ಗೊತ್ತಾಗಿದೆ.  ಅಲಹಾಬಾದ್ ಹೈಕೋರ್ಟ್​ ಮೆಟ್ಟಿಲೇರಿದೆವು. ಅದೂ ಕೂಡ ಪ್ರಯೋಜನವಾಗಲಿಲ್ಲ. ನಮಗೆ ಈಗ ಯಾವುದೇ ಭರವಸೆ ಉಳಿದಿಲ್ಲ. ಇಷ್ಟು ವರ್ಷ ಕಾಲ ಶಿಕ್ಷಣ ಪಡೆದೂ ಅದನ್ನು ಸರಿಯಾಗಿ ಮುಂದುವರಿಸಲು ಆಗಲಿಲ್ಲ. ಇದರಿಂದ ಜೀವನವೇ ಸಾಕೆನಿಸಿದೆ ಎಂದು ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ ಎಂದು ಹಿಂದುಸ್ತಾನ್​ ಟೈಮ್ಸ್​ ವರದಿ ಮಾಡಿದೆ.

66 ವಿದ್ಯಾರ್ಥಿಗಳಲ್ಲಿ ಒಟ್ಟು 12 ಮಂದಿ ಸೇರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.  ವಿದ್ಯಾರ್ಥಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗ್ಲೋಕಲ್​ ಯೂನಿವರ್ಸಿಟಿ ಉಪಕುಲಪತಿ ಅಕೀಲ್​ ಅಹ್ಮದ್​, ಮೆಡಿಕಲ್​ ಕೌನ್ಸಿಲ್​ ಆಫ್ ಇಂಡಿಯಾ ನಮ್ಮ ಯೂನಿವರ್ಸಿಟಿಯನ್ನು ಅಮಾನ್ಯ ಮಾಡಿದ್ದರೂ, ನಾವು ನಮ್ಮ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳಲಿ ಎಂದುಕೊಂಡೆವು.  ಈ ವಿದ್ಯಾರ್ಥಿಗಳ ಮನವಿ ಮೇರೆಗೆ ಎಂಸಿಐ ನಿರಾಕ್ಷೇಪಣಾ ಪತ್ರವನ್ನು (No Objection Certificate) ಕೂಡ ರದ್ದುಗೊಳಿಸಿತು. ವಿದ್ಯಾರ್ಥಿಗಳು ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದರು. ಬಳಿಕ ಸುಪ್ರೀಂಕೋರ್ಟ್​ಗೆ ಹೋದರು. ಅಲ್ಲೆಲ್ಲ ಕಡೆಗಳಲ್ಲೂ ಅರ್ಜಿ ವಜಾಗೊಂಡಿದೆ. ಇಷ್ಟೆಲ್ಲ ಆದರೂ ನಾವು ನಮ್ಮ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದೇವೆ ಎಂದಿದ್ದಾರೆ.

ಅಂದಹಾಗೇ, ಗ್ಲೋಕಲ್​ ಮೆಡಿಕಲ್​ ಕಾಲೇಜಿನಲ್ಲಿ ಮೂಲಸೌಕರ್ಯಗಳು, ಸವಲತ್ತುಗಳು ಅತ್ಯಂತ ಕಳಪೆಮಟ್ಟದಲ್ಲಿ ಇದ್ದ ಕಾರಣ ಎಂಸಿಐ ಅದನ್ನು ಅಮಾನ್ಯ ಮಾಡಿತ್ತು ಎಂದು ಹೇಳಲಾಗಿದೆ. 2020ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು, ಈ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ನಿರ್ದೇಶನ ನೀಡಿ ಎಂದು ಕೇಳಿತ್ತು.

ಇದನ್ನೂ ಓದಿ: ವೈದ್ಯರ ಕಳ್ಳಾಟ ಪತ್ತೆ ಹಚ್ಚಲು ದಿನದಲ್ಲಿ 3 ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆ

Published On - 3:50 pm, Wed, 2 February 22

Follow Us
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!