AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಂಸದ ರಾಹುಲ್​ ಗಾಂಧಿಯನ್ನು ಹುಡುಕುತ್ತಿದ್ದೀರಾ, ಹಾಗಾದ್ರೆ ಅಮೆರಿಕವನ್ನು ಸಂಪರ್ಕಿಸಿ: ಸ್ಮೃತಿ ಇರಾನಿ

ಮಾಜಿ ಸಂಸದ ರಾಹುಲ್ ಗಾಂಧಿಯನ್ನು ಹುಡುಕುತ್ತಿದ್ದೀರಾ ಹಾಗಾದ್ರೆ ಅಮೆರಿಕವನ್ನು ಸಂಪರ್ಕಿಸಿ ಎಂದು ಸ್ಮೃತಿ ಇರಾನಿ(Smriti Irani) ಟ್ವೀಟ್​ ಮಾಡಿದ್ದಾರೆ.

ಮಾಜಿ ಸಂಸದ ರಾಹುಲ್​ ಗಾಂಧಿಯನ್ನು ಹುಡುಕುತ್ತಿದ್ದೀರಾ, ಹಾಗಾದ್ರೆ ಅಮೆರಿಕವನ್ನು ಸಂಪರ್ಕಿಸಿ: ಸ್ಮೃತಿ ಇರಾನಿ
ಸ್ಮೃತಿ ಇರಾನಿImage Credit source: The Print
Follow us
ನಯನಾ ರಾಜೀವ್
|

Updated on: Jun 01, 2023 | 10:36 AM

ಮಾಜಿ ಸಂಸದ ರಾಹುಲ್ ಗಾಂಧಿ(Rahul Gandhi)ಯನ್ನು ಹುಡುಕುತ್ತಿದ್ದೀರಾ ಹಾಗಾದ್ರೆ ಅಮೆರಿಕವನ್ನು ಸಂಪರ್ಕಿಸಿ ಎಂದು ಸ್ಮೃತಿ ಇರಾನಿ(Smriti Irani) ಟ್ವೀಟ್​ ಮಾಡಿದ್ದಾರೆ. ಹೀಗೆ ಹೇಳಲು ಕಾರಣವೂ ಇದೆ, ಕಾಂಗ್ರೆಸ್​ ತನ್ನ ಟ್ವೀಟ್​ನಲ್ಲಿ ಸ್ಮೃತಿ ಇರಾನಿಯವರ ಫೋಟೊ ಹಾಕಿ ಅದರಲ್ಲಿ ಕಾಣೆಯಾಗಿದ್ದಾರೆ ಎಂದು ಬರೆದಿತ್ತು. ಅದಕ್ಕೆ ತಿರುಗೇಟಿ ನೀಡಿರುವ ಇರಾನಿ, ನಾನು ಈಗಷ್ಟೇ ಸಿರ್ಸಿರಾ ಗ್ರಾಮ, ವಿಧಾನಸಭಾ ಸಲೂನ್, ಲೋಕಸಭೆ ಅಮೇಥಿ ಬಿಟ್ಟು ಧುರಣಪುರದ ಕಡೆಗೆ ಹೋಗುತ್ತಿದ್ದೇನೆ. ಮಾಜಿ ಸಂಸದರನ್ನು ಹುಡುಕುತ್ತಿದ್ದರೆ, ದಯವಿಟ್ಟು ಅಮೆರಿಕವನ್ನು ಸಂಪರ್ಕಿಸಿ ಎಂದು ಬರೆದಿದ್ದಾರೆ.

ಅಮೇಥಿಯ ಮಾಜಿ ಸಂಸದ ರಾಹುಲ್ ಗಾಂಧಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಅವರನ್ನು ಸೋಲಿಸಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನೂ ಗುರಿಯಾಗಿಸಿದರು.

ಮತ್ತಷ್ಟು ಓದಿ: ರಾಹುಲ್ ಗಾಂಧಿ ವಯನಾಡ್​​ನಲ್ಲೇ ಇದ್ದರೆ ಅಮೇಠಿ ಹಿಂದೆ ಹೇಗಿತ್ತೋ ಹಾಗೆಯೇ ಇದೂ ಆಗಲಿದೆ: ಸ್ಮೃತಿ ಇರಾನಿ

ಭಾರತದಲ್ಲಿ ಒಂದು ಗುಂಪಿನ ಜನರಿದ್ದಾರೆ, ಅವರು ಎಲ್ಲವನ್ನೂ ತಿಳಿದಿದ್ದಾರೆ ಎಂದುಕೊಂಡಿದ್ದಾರೆ, ಅವರು ದೇವರಿಗಿಂತ ಹೆಚ್ಚು ತಿಳಿದಿದ್ದಾರೆಂದು ಅವರು ಭಾವಿಸುತ್ತಾರೆ ಎಂದಿದ್ದಾರೆ.

ಕಾಂಗ್ರೆಸ್​ನ ನಾಯಕಿ ಸುಪ್ರಿಯಾ ಟ್ವೀಟ್​ ಮಾಡಿ, ಮಹಿಳಾ ಕುಸ್ತಿಪಟುಗಳು ನಿಮ್ಮನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ, ಒಮ್ಮೆ ಅವರ ಬಳಿ ಮಾತನಾಡಿ ಎಂದು ಬರೆದಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕುಸ್ತಿಪಟುಗಳು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ