AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon 2021: ಕೇರಳಕ್ಕೆ ಪ್ರವೇಶ ವಿಳಂಬವಾದರೂ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದೆ ಮಾನ್ಸೂನ್​; ಕಾರಣ ಏನು?

ಮಂಗಳವಾರ ಮಾನ್ಸೂನ್​​ನ ಉತ್ತರದ ಮಿತಿ ದಿಯು, ಸೂರತ್​, ನಂದರ್ಬಾರ್​, ಭೋಪಾಲ್​, ನಾಗೌನ್​, ಹಮೀರ್​ಪುರ, ಬಾರ್ಬಂಕಿ, ಬರೇಲಿ, ಸಹರಾನ್​ಪುರ, ಅಂಬಾಲಾ ಮತ್ತು ಅಮೃತಸರ ಮೂಲಕ ಹಾದು ಹೋಗಿದೆ.. ಮಾನ್ಸೂನ್​ ನಿರಂತರವಾಗಿ ಎಲ್ಲ ಪ್ರದೇಶಗಳನ್ನೂ ಪ್ರವೇಶಿಸುತ್ತಿದೆ.

Monsoon 2021: ಕೇರಳಕ್ಕೆ ಪ್ರವೇಶ ವಿಳಂಬವಾದರೂ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದೆ ಮಾನ್ಸೂನ್​; ಕಾರಣ ಏನು?
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on: Jun 16, 2021 | 6:04 PM

Share

ಈಗಿನ್ನೂ ಜೂನ್​ ಎರಡನೇ ವಾರ.. ನೈಋತ್ಯ ಮಾನ್ಸೂನ್​ ಈಗಾಗಲೇ ದೇಶದ ಮೂರನೇ ಎರಡರಷ್ಟು ಭಾಗವನ್ನು ಆವರಿಸಿದೆ..ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ನೀವು ಗಮನಿಸಿ, ನೈಋತ್ಯ ಮಾನ್ಸೂನ್​ ತುಂಬ ಬೇಗಬೇಗ ದೇಶಾದ್ಯಂತ ಪ್ರವೇಶಿಸುತ್ತಿದೆ. ಈ ಬಾರಿ ನಿಗದಿತ ಸಮಯಕ್ಕಿಂತಲೂ ಎರಡು ದಿನ ತಡವಾಗಿಯೇ ಕೇರಳ ಕರಾವಳಿಯನ್ನು ಪ್ರವೇಶಿಸಿರುವ ಮುಂಗಾರು, ನಂತರ ಕೇವಲ ಹತ್ತೇ ದಿನಗಳಲ್ಲಿ ದೇಶದ ಮೂರರಲ್ಲಿ ಎರಡರಷ್ಟು ಪ್ರದೇಶವನ್ನು ಆವರಿಸಿದೆ.

ಮಂಗಳವಾರ ಮಾನ್ಸೂನ್​​ನ ಉತ್ತರದ ಮಿತಿ ದಿಯು, ಸೂರತ್​, ನಂದರ್ಬಾರ್​, ಭೋಪಾಲ್​, ನಾಗೌನ್​, ಹಮೀರ್​ಪುರ, ಬಾರ್ಬಂಕಿ, ಬರೇಲಿ, ಸಹರಾನ್​ಪುರ, ಅಂಬಾಲಾ ಮತ್ತು ಅಮೃತಸರ ಮೂಲಕ ಹಾದು ಹೋಗಿದೆ.. ಮಾನ್ಸೂನ್​ ನಿರಂತರವಾಗಿ ಎಲ್ಲ ಪ್ರದೇಶಗಳನ್ನೂ ಪ್ರವೇಶಿಸುತ್ತಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಸದ್ಯಕ್ಕಂತೂ ದೇಶದ ಕೆಲವೇ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಮುಂಗಾರು ಮಳೆ ಸುರಿಯುತ್ತಿದೆ. ಈ ವರ್ಷ ಮುಂಗಾರು ಮುಂಚಿತವಾಗಿಯೇ ಕಾಲಿಟ್ಟಿದೆ.

ನೈಋತ್ವ ಮಾನ್ಸೂನ್​ ಬೇಗನೇ ವ್ಯಾಪಿಸುತ್ತಿರಲು ಕಾರಣವೇನು? ಮೇ ಮೂರನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದ ಯಾಸ್ ಚಂಡಮಾರುತದಿಂದ ಈ ಬಾರಿ ಮಾನ್ಸೂನ್ ಸರಿಯಾದ ಸಮಯಕ್ಕೆ, ಅಂದರೆ​ ಮೇ 21ಕ್ಕೆ ಅಂಡಮಾನ್​ ತಲುಪಲು ಸಹಾಯ ಮಾಡಿದೆ. ಜೂ.1ಕ್ಕೆ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಎರಡು ದಿನಗಳ ನಂತರ ಅಪ್ಪಳಿಸಿತು. ಆದರೆ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರಲು ಕಾರಣ, ಅರೇಬಿಯನ್​ ಸಮುದ್ರದಿಂದ ಗಾಳಿ ಪಶ್ಚಿಮಾಭಿಮುಖವಾಗಿ ಬೀಸುತ್ತಿರುವುದು ಮತ್ತು ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಜೂ.11ರಂದು ಕಡಿಮೆ ಒತ್ತಡ ಉಂಟಾಗಿದ್ದು. ಸದ್ಯ ನೈಋತ್ಯ ಮಾನ್ಸೂನ್​ ಬಲಗೊಂಡಿದ್ದು, ಈಶಾನ್ಯ, ಪಶ್ಚಿಮಬಂಗಾಳ, ಓಡಿಶಾ, ಜಾರ್ಖಂಡ, ಬಿಹಾರ ಮತ್ತು ಛತ್ತೀಸ್​ಗಢ್​​​ಗಳತ್ತ ವ್ಯಾಪಿಸುತ್ತಿದೆ.

2011ರಿಂದ ಅಂದರೆ ಕಳೆದೊಂದು ದಶಕಗಳಿಂದ ಮಾನ್ಸೂನ್​ ಜೂನ್​​ನಲ್ಲಿಯೇ ಇಡೀ ದೇಶಕ್ಕೆ ವ್ಯಾಪಿಸುತ್ತಿದೆ. 2020ರಲ್ಲಿ ಜೂ.1ರಿಂದ ಶುರವಾಗಿ 26ರಹೊತ್ತಿಗೆ ದೇಶಾದ್ಯಂತ ಮುಂಗಾರು ಪ್ರವೇಶ ಆಗಿತ್ತು. 2018ರಲ್ಲಿ ಮೇ 28ರಲ್ಲೇ ಮುಂಗಾರು ಪ್ರಾರಂಭವಾಗಿತ್ತು. ಆದರೆ ದೇಶಾದ್ಯಂತ ವ್ಯಾಪಿಸಲು ಜೂ.29ರವರೆಗೆ ಸಮಯ ತೆಗೆದುಕೊಂಡಿತ್ತು. 2015ರಲ್ಲಿ ಜೂ.5ರಿಂದ 26ರವರೆಗೆ ಇಡೀ ದೇಶದಲ್ಲಿ ಮಾನ್ಸೂನ್​ ಶುರುವಾಗಿತ್ತು. ಹಾಗೇ 2013ರಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಜೂ.1ರಲ್ಲಿ ಪ್ರವೇಶಿಸಿದ್ದ ಮುಂಗಾರು 16ರ ಹೊತ್ತಿಗೆ ಇಡೀ ದೇಶಕ್ಕೆ ವ್ಯಾಪಿಸಿಯಾಗಿತ್ತು. ಇನ್ನುಳಿದಂತೆ 2019ರಲ್ಲಿ ವಾಯು ಚಂಡಮಾರುತದಿಂದ, 2017ರಲ್ಲಿ ಮೋರಾ ಸೈಕ್ಲೋನ್​ನಿಂದಾಗಿ, ಪ್ರಮುಖ ನಗರಗಳಿಗೆ ಮುಂಗಾರು ಪ್ರವೇಶ ವಿಳಂಬವಾಗಿತ್ತು.

ಮುಂಚಿತ ಮುಂಗಾರಿನಿಂದ ವಿಪರೀತ ಮಳೆಯಾಗುತ್ತದೆಯೇ? ಮುಂಗಾರು ಆಗಮನಕ್ಕೂ..ಮಳೆಯ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು. ಯಾವುದೇ ಪ್ರದೇಶದಲ್ಲಿ ಮಾನ್ಸೂನ್​ ಪ್ರಾರಂಭವಾಗುವ ಸಮಯಕ್ಕೂ, ನಂತರ ಬೀಳುವ ಮಳೆಗೂ ಸಂಬಂಧವಿರುವುದಿಲ್ಲ. 2014ರಲ್ಲಿ ಮಾನ್ಸೂನ್​ ಇಡೀ ದೇಶವನ್ನು ಆವರಿಸಲು ಒಟ್ಟಾರೆ 42 ದಿನಗಳು ಬೇಕಾದವು. 2015ರಲ್ಲಿ 22ದಿನಗಳಲ್ಲೇ ಇಡೀ ದೇಶಕ್ಕೆ ಮುಂಗಾರು ಆವರಿಸಿತು. ಆದರೆ ಈ ಎರಡೂ ವರ್ಷಗಳಲ್ಲಿ ಭಾರತದಲ್ಲಿ ಮಳೆಯ ಪ್ರಮಾಣ ತುಂಬ ಕಡಿಮೆ ದಾಖಲಾಗಿದೆ. ಈ ವರ್ಷವೂ ಸಹ ಜೂನ್​ ಅಂತ್ಯದ ಒಳಗೇ ಇಡೀ ದೇಶಾದ್ಯಂತ ಮುಂಗಾರು ಪ್ರವೇಶ ಮಾಡುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ

Monsoon hit the Kerala coast two days behind schedule but already covered two thirds of the country

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!