WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ. ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G […]

WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?
ಸಾಧು ಶ್ರೀನಾಥ್​

Updated on: May 09, 2020 | 11:15 AM

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ.

ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G ತಂತ್ರಜ್ಞಾನ ಅಳವಡಿಸಲು ತಾನು ಭಾರೀ ಮೊತ್ತ ಕ್ರೋಢೀಕರಿಸುತ್ತಿರುವುದಾಗಿ ಜಿಯೋ ರಿಲಯನ್ಸ್ ಮೂಲಗಳು ಪಿಸುಗುಟ್ಟುತ್ತಿವೆ. ಈ ಮಧ್ಯೆ, ಮುಂಬೈನ ಆಂಟಿಲಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಮೇಲೆ ಭಾರೀ ಪ್ರಮಾಣದ ಸಾಲಸೋಲವಿದೆ. ಅದರಿಂದ ಹೊರಬರಲು ರಿಲಯನ್ಸ್ ಪೆಟ್ರೋಕೆಮಿಕಲ್ಸ್ ಕಂಪನಿಯ ಪಾಲು ಮಾರಾಟ ಮಾಡಲು ಅಂಬಾನಿ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಸದ್ಯ ಸಾಲಮುಕ್ತ ಕಂಪನಿಯಾಗಿ ಮುಂದಿನ ಯೋಜನೆಗಳಿಗೆ ಕೈಹಾಕುವುದು ಕಂಪನಿಯ ಉದ್ದೇಶವಾಗಿದೆ.

ಇದರ ಸಲುವಾಗಿ ಸೌದಿ ಅರೇಬಿಯಾದ ಆರಮ್​ಕೊ (Aramco) ಕಂಪನಿಯ ಜೊತೆಯೂ ಅಂಬಾನಿಯ ರಿಲಯನ್ಸ್ ಕಂಪನಿ ಮಾತುಕತೆ ನಡೆಸಿದ್ದು, ಲಾಕ್​ ಡೌನ್​ ಮುಗಿಯುವುದರೊಳಗಾಗಿ ನಾಲ್ಕನೆಯ ಸೇಲ್ ಡೀಲ್ ಮುಗಿಸುವ ಅಂದಾಜಿದೆ. ರಿಲಯನ್ಸ್ ರೀಫೈನಿಂಗ್ ಅಂಡ್ ಪೆಟ್ರೋಕೆಮಿಕಲ್ಸ್ ಕಂಪನಿಯ ಶೇ. 20ರಷ್ಟು ಪಾಲು ಮಾರಾಟ ಮಾಡುವ ನಿರೀಕ್ಷೆಯಿದೆ. ಇದರಿಂದ 1.13 ಲಕ್ಷ ಕೋಟಿ ರೂ. ರಿಲಯನ್ಸ್ ಖಜಾನೆ ತುಂಬಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?

Published On - 11:08 am, Sat, 9 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us