Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಡೆದು ಸುಸ್ತಾಗಿತ್ತು, ನಿದ್ರೆ ಬಂದುಬಿಡ್ತು.. ಕೂಗಿಕೊಂಡ್ರೂ ಎಚ್ರವಾಗ್ಲಿಲ್ಲ ಅವರಿಗೆ, ಅಷ್ಟೇ!’

ಮಹಾರಾಷ್ಟ್ರ: ಔರಂಗಾಬಾದ್ ಜಿಲ್ಲೆಯ ತಮ್ಮ ಹಳ್ಳಿಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕಿ, ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿಹಸಿಯಾಗಿದ್ದು, ಹೃದಯ ಕಲುಕುತ್ತಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಹೇಗೆ, ಬರೋಬ್ಬರಿ 16 ಮಂದಿ ಮೈಮರೆತಿದ್ದಾದರೂ ಹೇಗೆ? ಯಾಕೆ? ಎಂಬ ಪ್ರಶ್ನೆಗಳು ದೇಶದ ಉದ್ದಗಲಕ್ಕೂ ಎಲ್ಲರ ಮನಸ್ಸಿನಲ್ಲೂ ರೈಲಿನಷ್ಟೇ ವೇಗವಾಗಿ ಸುಳಿದಾಡುತ್ತಿದೆ. ಇದಕ್ಕೆ ಉತ್ತರವೆಂಬಂತೆ ಅಂದು ಆ ನತದೃಷ್ಟ ಕಾರ್ಮಿಕರ ಜೊತೆಯಲ್ಲೇ ಇದ್ದ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಹೀಗೆ ಹೇಳಿದ್ದಾನೆ. ಆ ಕರಾಳರಾತ್ರಿಯ ದುಃಸ್ವಪ್ನವನ್ನು ನೆನಪಿಸಿಕೊಳ್ಳುತ್ತಾ ಧೀರೇಂದ್ರ […]

‘ನಡೆದು ಸುಸ್ತಾಗಿತ್ತು, ನಿದ್ರೆ ಬಂದುಬಿಡ್ತು.. ಕೂಗಿಕೊಂಡ್ರೂ ಎಚ್ರವಾಗ್ಲಿಲ್ಲ ಅವರಿಗೆ, ಅಷ್ಟೇ!’
Follow us
ಸಾಧು ಶ್ರೀನಾಥ್​
|

Updated on:May 09, 2020 | 4:11 PM

ಮಹಾರಾಷ್ಟ್ರ: ಔರಂಗಾಬಾದ್ ಜಿಲ್ಲೆಯ ತಮ್ಮ ಹಳ್ಳಿಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕಿ, ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿಹಸಿಯಾಗಿದ್ದು, ಹೃದಯ ಕಲುಕುತ್ತಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಹೇಗೆ, ಬರೋಬ್ಬರಿ 16 ಮಂದಿ ಮೈಮರೆತಿದ್ದಾದರೂ ಹೇಗೆ? ಯಾಕೆ? ಎಂಬ ಪ್ರಶ್ನೆಗಳು ದೇಶದ ಉದ್ದಗಲಕ್ಕೂ ಎಲ್ಲರ ಮನಸ್ಸಿನಲ್ಲೂ ರೈಲಿನಷ್ಟೇ ವೇಗವಾಗಿ ಸುಳಿದಾಡುತ್ತಿದೆ. ಇದಕ್ಕೆ ಉತ್ತರವೆಂಬಂತೆ ಅಂದು ಆ ನತದೃಷ್ಟ ಕಾರ್ಮಿಕರ ಜೊತೆಯಲ್ಲೇ ಇದ್ದ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಹೀಗೆ ಹೇಳಿದ್ದಾನೆ.

ಆ ಕರಾಳರಾತ್ರಿಯ ದುಃಸ್ವಪ್ನವನ್ನು ನೆನಪಿಸಿಕೊಳ್ಳುತ್ತಾ ಧೀರೇಂದ್ರ ಸಿಂಗ್ ಎಂಬ ಯುವಕ ಹೇಳಿದ್ದಿಷ್ಟು: ಜಲ್ನಾದ ಎಸ್​ಆರ್​ಜಿ ಎಂಬ ಕಂಪನಿಯಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೆವು. ಲಾಕ್​ಡೌನ್​ನಿಂದಾಗಿ ಕೆಲಸ ನಿಂತುಹೋಯಿತು. ದುಡ್ಡಿಗೆ ಪರದಾಡುತ್ತಿದ್ದೆವು. ಹೊಟ್ಟೆಗೆ ಹಿಟ್ಟಿಲ್ಲದೆ ಪರಿತಪಿಸುತ್ತಿದ್ದೆವು. ಆಗ ಸೀದಾ ನಮ್ಮ ಹಳ್ಳಿಗಳಿಗೆ ಹೋಗುವುದು ಸರಿ ಎಂಬ ತೀರ್ಮಾನಕ್ಕೆ ಬಂದೆವು. ಗುರುವಾರ ಸಂಜೆ 7 ಗಂಟೆಗೆ ಹೆಗಲಮೇಲೆ ಬ್ಯಾಗ್​​ಗಳನ್ನು ಹಾಕಿಕೊಂಡು ನಮ್ಮ ರೂಮುಗಳನ್ನು ಬಿಟ್ಟು ಹೊರಟೆವು. ರೈಲ್ವೆ ಟ್ರ್ಯಾಕ್​ ಮೇಲೆ ನಡೆದರೆ ದಾರಿ ತಪ್ಪುವುದಿಲ್ಲ. ಹತ್ತಿರವೂ ಆಗುತ್ತದೆ ಎಂದು ರೈಲ್ವೆ ಹಳಿಗಳ ಮೇಲೆಯೇ ನಡೆಯುತ್ತಾ ಸಾಗಿದೆವು.

ಶುಕ್ರವಾರ ಬೆಳಗಿನ ಜಾವ 4 ಗಂಟೆ ಅಂದ್ಕೋತೀನಿ. ಅದೂ ಇದೂ ಮಾತಾಡ್ತಾ ಇದ್ದೆವು. ಖಾಲಿ ಹೊಟ್ಟೆಯಲ್ಲಿ ನಡೆದೂ ನಡೆದೂ ಎಲ್ಲರಿಗೂ ಸುಸ್ತಾಗಿತ್ತು. ಮಂಪರು ಹತ್ತಿತ್ತು. ಅಲ್ಲೇ ಹಳಿಗಳಿಗೆ ತಲೆಕೊಟ್ಟಿದ್ದೆವು. ಆದ್ರೆ ಹಾಗೆ ಮಾಡುವುದರಿಂದ ನಾವು ಯಮರಾಜನಿಗೆ ಆಹ್ವಾನ ನೀಡಿದ್ದೇವೆ ಎಂಬ ಸುಳಿವೇ ಇರಲಿಲ್ಲ. ತುಸು ನಿದ್ರೆಗೆ ಜಾರಿದೆವು. ಅಷ್ಟೇ!

ಟ್ರೈನ್ ಬಂದೇ ಬಿಡ್ತು. ನಾವೆಲ್ಲ ಸ್ವಲ್ಪ ದೂರ ದೂರ ಮಲಗಿಕೊಂಡಿದ್ದೆವು. ನನ್ನ ಮೂರ್ನಾಲ್ಕು ಸಂಗಾತಿಗಳು ನನಗಿಂತ ಮುಂದೆ ಮಲಗಿದ್ದರು. ನನಗ್ಯಾಕೋ ಎಚ್ಚರವಾಯ್ತು. ಕೂಗಿಕೊಂಡೆ- ಕೈ ಕಾಲು ಬಿಸಾಡಿದೆ. ಆದ್ರೆ ಸುಸ್ತಾಗಿ, ಸೋತು ಬಸವಳಿದಿದ್ದ ಅವರನ್ನು ನಿದ್ರಾದೇವಿ ಗಾಢವಾಗಿ ಆಲಂಗಿಸಿದ್ದಳು. ಇನ್ನೇನು ಟ್ರೈನು ಬಂದೇಬಿಟ್ಟಿತು ಅನ್ನುವಾಗ ನಾನು ಅಲ್ಲಿಂದ ದೂರಕ್ಕೆ ಚಿಮ್ಮಿಕೊಂಡೆ. ಅಷ್ಟೇ..

ಟ್ರೈನು ಹೊರಟುಹೋಯಿತು. ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ನನ್ನ ಅನೇಕ ಗೆಳೆಯರು ಅದಾಗಲೇ ಇಹಲೋಕ ತ್ಯಜಿಸಿದ್ದರು. ಎದೆಬಡಿದುಕೊಂಡೆ. ಏನೂ ಉಪಯೋಗ ಇರಲಿಲ್ಲ. ನಾನೂ, ಇನ್ನಿಬ್ಬರು ಅದುಹೇಗೋ ಬದುಕಿದ್ದೆವು. ನಂತ್ರ, ಸೀದಾ ಆಸ್ಪತ್ರೆ ಸೇರಿಕೊಂಡೆವು ಎಂದು ದೀರ್ಘ ನಿಟ್ಟುಸಿರುಬಿಟ್ಟ ಧೀರೇಂದ್ರ ಸಿಂಗ್.

Published On - 1:04 pm, Sat, 9 May 20

ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ