AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ. ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G […]

WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?
ಸಾಧು ಶ್ರೀನಾಥ್​
|

Updated on:May 09, 2020 | 11:15 AM

Share

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ.

ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G ತಂತ್ರಜ್ಞಾನ ಅಳವಡಿಸಲು ತಾನು ಭಾರೀ ಮೊತ್ತ ಕ್ರೋಢೀಕರಿಸುತ್ತಿರುವುದಾಗಿ ಜಿಯೋ ರಿಲಯನ್ಸ್ ಮೂಲಗಳು ಪಿಸುಗುಟ್ಟುತ್ತಿವೆ. ಈ ಮಧ್ಯೆ, ಮುಂಬೈನ ಆಂಟಿಲಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಮೇಲೆ ಭಾರೀ ಪ್ರಮಾಣದ ಸಾಲಸೋಲವಿದೆ. ಅದರಿಂದ ಹೊರಬರಲು ರಿಲಯನ್ಸ್ ಪೆಟ್ರೋಕೆಮಿಕಲ್ಸ್ ಕಂಪನಿಯ ಪಾಲು ಮಾರಾಟ ಮಾಡಲು ಅಂಬಾನಿ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಸದ್ಯ ಸಾಲಮುಕ್ತ ಕಂಪನಿಯಾಗಿ ಮುಂದಿನ ಯೋಜನೆಗಳಿಗೆ ಕೈಹಾಕುವುದು ಕಂಪನಿಯ ಉದ್ದೇಶವಾಗಿದೆ.

ಇದರ ಸಲುವಾಗಿ ಸೌದಿ ಅರೇಬಿಯಾದ ಆರಮ್​ಕೊ (Aramco) ಕಂಪನಿಯ ಜೊತೆಯೂ ಅಂಬಾನಿಯ ರಿಲಯನ್ಸ್ ಕಂಪನಿ ಮಾತುಕತೆ ನಡೆಸಿದ್ದು, ಲಾಕ್​ ಡೌನ್​ ಮುಗಿಯುವುದರೊಳಗಾಗಿ ನಾಲ್ಕನೆಯ ಸೇಲ್ ಡೀಲ್ ಮುಗಿಸುವ ಅಂದಾಜಿದೆ. ರಿಲಯನ್ಸ್ ರೀಫೈನಿಂಗ್ ಅಂಡ್ ಪೆಟ್ರೋಕೆಮಿಕಲ್ಸ್ ಕಂಪನಿಯ ಶೇ. 20ರಷ್ಟು ಪಾಲು ಮಾರಾಟ ಮಾಡುವ ನಿರೀಕ್ಷೆಯಿದೆ. ಇದರಿಂದ 1.13 ಲಕ್ಷ ಕೋಟಿ ರೂ. ರಿಲಯನ್ಸ್ ಖಜಾನೆ ತುಂಬಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?

Published On - 11:08 am, Sat, 9 May 20

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ