AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Farmers Day 2020 | ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಸಂರಕ್ಷಣಾ ಕಾಯ್ದೆಯ ಕರಡು ಹೀಗಿದೆ

ಈಗಾಗಲೇ ಅಸ್ತಿತ್ವದಲ್ಲಿರುವ 1966ರ ಬೀಜ ಸಂರಕ್ಷಣಾ ಕಾಯ್ದೆಯ ಕೆಲ ಅಂಶಗಳಿಗೆ ತಿದ್ದುಪಡಿ ಮಸೂದೆ ಮೂಲಕ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರದ ನಿರ್ಧಾರದ ಪರ-ವಿರೋಧದ ಚರ್ಚೆಗಳು ಗರಿಗೆದರಿದವು.

National Farmers Day 2020 | ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಸಂರಕ್ಷಣಾ ಕಾಯ್ದೆಯ ಕರಡು ಹೀಗಿದೆ
ಸಾಂದರ್ಭಿಕ ಚಿತ್ರ
sandhya thejappa
|

Updated on:Dec 24, 2020 | 9:17 AM

Share

ಬೆಂಗಳೂರು: ದೇಶದ ಬೆನ್ನೆಲುಬು ರೈತರಿಗೆ ನೆರವಾಗುವ ದೃಷ್ಟಿಕೋನದಲ್ಲಿ ಹಲವು ಕಾಯ್ದೆಗಳು ಜಾರಿಗೆ ಬರುತ್ತಾ ಇರುತ್ತದೆ. ಕೆಲವೊಂದು ಕಾಯ್ದೆಗಳು ವಿಶ್ವಾಸಾರ್ಹವಾದರೇ ಇನ್ನು ಕೆಲವು ಕಾಯ್ದೆಗಳು ಹಲವು ಚರ್ಚೆಗಳಿಗೆ ಹಾಗೂ ಹೋರಾಟಕ್ಕೆ ಕಾರಣವಾಗುತ್ತದೆ. ಇಂತಹದೊಂದು ಚರ್ಚೆಯ ಸಾಲಿನಲ್ಲಿ ಬೀಜ ಸಂರಕ್ಷಣಾ ಕಾಯ್ದೆಯು ಇದೆ.

ಈಗಾಗಲೇ ಅಸ್ತಿತ್ವದಲ್ಲಿರುವ 1966ರ ಬೀಜ ಸಂರಕ್ಷಣಾ ಕಾಯ್ದೆಯ ಕೆಲ ಅಂಶಗಳಿಗೆ ತಿದ್ದುಪಡಿ ಮಸೂದೆ ಮೂಲಕ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರದ ನಿರ್ಧಾರದ ಪರ-ವಿರೋಧದ ಚರ್ಚೆಗಳು ಗರಿಗೆದರಿದವು. ಅಲ್ಲದೇ ಕೇಂದ್ರ ಸರ್ಕಾರ ರೂಪಿಸಿರುವ 2019ರ ಬೀಜ ಮಸೂದೆ ಕರಡನ್ನು ಕಾಯ್ದೆಯಾಗಿ ಜಾರಿಯಾಗದಂತೆ ತಡೆಯಲು ದೇಶದಾದ್ಯಂತ ರೈತ ಸಂಘಟನೆಗಳು ಹಾಗು ಇತರ ನಾಯಕರು ಒತ್ತಾಯಿಸುತ್ತಿದ್ದಾರೆ.

ಏನಿದು ಬೀಜ ಸಂರಕ್ಷಣಾ ಕಾಯಿದೆ? ಸದ್ಯ ಬಿತ್ತನೆ ಬೀಜಗಳ ದರದ ಮೇಲೆ ಕಂಪನಿಗಳ ಹಿಡಿತವಿದೆ. ಇದರಿಂದ ರೈತರಿಗೆ ಆಗುವ ಸಮಸ್ಯೆಗಳು ಒಂದೆರಡಲ್ಲ. ಉತ್ತಮ ಬೀಜದ ಕೊರತೆ, ಬೆಲೆ ಹೆಚ್ಳಳ, ಏಕಸ್ವಾಮ್ಯ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಬೀಜ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬಿತ್ತನೆ ಬೀಜಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಗದಿತ ಬೆಲೆ ಹೇರಲು ಅವಕಾಶವಿರುತ್ತದೆ.

ನೋಂದಣಿ ಅನಿವಾರ್ಯ ಕಳಪೆ ಬೀಜಗಳನ್ನು ಮಾರಾಟವಾಗದಂತೆ ತಡೆದಾಗ ರೈತರ ಬೆಳೆಗೆ ಸಿಗಬೇಕಾದ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಾದವೊಂದು ಚಾಲ್ತಿಯಲ್ಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಮಾರುಕಟ್ಟೆಗೆ ತರುವ ಎಲ್ಲ ತಳಿ ಅಥವಾ ಹೈಬ್ರೀಡ್​ ಬೀಜಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕೆಂದು ಕೇಂದ್ರ ಸರ್ಕಾರ ರೂಪಿಸಿರುವ ಈ ಬೀಜ ಸಂರಕ್ಷಣಾ ಮಸೂದೆಯ ಕರಡು ತಿಳಿಸುತ್ತದೆ.

ಕೇಂದ್ರಕ್ಕೆ ಪತ್ರ ಈ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಿದೆ ಹೊರತು ರೈತರಿಗೆ ಸಿಗಬೇಕಾದ ಅನುಕೂಲಗಳು ಯಾವುದು ಇಲ್ಲ. ರೈತರನ್ನು ಲೂಟಿ ಮಾಡಲು ಈ ಕಾಯ್ದೆ ಅನುವು ಮಾಡುತ್ತದೆ. ಇದರಿಂದ ಕೇಂದ್ರ ಸರ್ಕಾರ ರೂಪಿಸಿರುವ 2019ರ ಬೀಜ ಮಸೂದೆ ಕರಡನ್ನು ಕಾಯ್ದೆಯಾಗಿ ಜಾರಿಯಾಗದಂತೆ ತಡೆಯಬೇಕೆಂದು ವಿರೋಧ ಪಕ್ಷದ ನಾಯ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮೊದಲೇ ತಿಳಿಸಿದಂತೆ ಇದಕ್ಕೆ ಸಂಬಂಧಿಸಿದ ಕಾಯ್ದೆ ಜಾರಿಯಲ್ಲಿದೆ. ಇದರನ್ವಯ ದೇಶದಾದ್ಯಂತ ಯಾವುದೇ ಕೃಷಿ ಸಂಬಂಧಿತ ಬೀಜಗಳನ್ನು ಮಾರಾಟ ಮಾಡುವ ಮೊದಲು ಅದನ್ನು ಪರೀಕ್ಷೆ ಮಾಡಿ ಆ ಬಳಿಕೆ ಮಾರಾಟಕ್ಕೆ ಅವಕಾಶವನ್ನು ನೀಡಲಾಗುತ್ತದೆ. ಯಾವುದೇ ವಿಧದ ಬೀಜಗಳು ಅಥವಾ ಹೈಬ್ರೀಡ್ ಬೀಜಗಳ ಸರಣಿಯಲ್ಲಿ ಲೋಪಗಳು ಕಂಡುಬಂದರೆ ಅದನ್ನು ಮಾರಾಟ ಮಾಡದಂತೆ ತಡೆಹಿಡಿಯಲಾಗುತ್ತದೆ ಎಂದು ಸ್ಪಷ್ಟವಾಗಿದೆ.

ಕಬ್ಬು ಬೆಳೆಗಾರರಿಗೆ ₹3,500 ಕೋಟಿ ಸಬ್ಸಿಡಿ: ಕೇಂದ್ರ ಅನುಮೋದನೆ

Published On - 5:23 pm, Wed, 23 December 20

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ