ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ. ಈ ಹೊಸ ತದ್ರೂಪಿ ತೇಜಸ್ ಕರುವನ್ನು […]

ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ
ಸಾಧು ಶ್ರೀನಾಥ್​ Edited By:

Updated on: Sep 20, 2020 | 7:20 PM

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ.

ಈ ಹೊಸ ತದ್ರೂಪಿ ತೇಜಸ್ ಕರುವನ್ನು ಎಮ್ಮೆ ಜಾತಿಯ ಮುರ್ರಾ ತಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಮುರ್ರಾ ಎಮ್ಮೆ ತಳಿ ಹೆಚ್ಚಿನ ಹಾಲು ಇಳುವರಿಗೆ ಹೆಸರುವಾಸಿಯಾಗಿದೆ ಎಂದು ಚೌಹಾನ್ ಹೇಳಿದ್ದಾರೆ. ಜೊತೆಗೆ, 2021-22ರ ವೇಳೆಗೆ ಎಮ್ಮೆಗಳ ಕೃತಕ ಗರ್ಭಧಾರಣೆಗೆ ದೇಶದಲ್ಲಿ 140 ದಶಲಕ್ಷ ವೀರ್ಯದ ಡೋಸ್​ನ ಅವಶ್ಯಕತೆಯಿದೆ. ಆದರೆ ಪ್ರಸ್ತುತ, 85 ದಶಲಕ್ಷ ಡೋಸ್‌ ಮಾತ್ರ ಲಭ್ಯವಿದೆ ಎಂಬ ಮಾಹಿತಿಯನ್ನು ಚೌಹಾನ್​ ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಎಮ್ಮೆಯ ಹಾಲು, ಕಿವಿ, ಮೂತ್ರ, ರಕ್ತ ಮತ್ತು ವೀರ್ಯದಲ್ಲಿರುವ ಜೀವಕೋಶಗಳನ್ನು ಬಳಸಿ ದೇಶದಲ್ಲಿ 16 ತದ್ರೂಪಿ ಎಮ್ಮೆಗಳನ್ನುಅಭಿವೃದ್ಧಿಪಡಿಸಲಾಗಿದೆ ಎಂದು ಚೌಹಾನ್ ಹೇಳಿದ್ದಾರೆ. 2009ರಲ್ಲಿ, NDRI ಸಂಸ್ಥೆಯು ಗರಿಮಾ ಎಂಬ ಹೆಸರಿನ ತದ್ರೂಪಿ ಎಮ್ಮೆಯನ್ನು ಅಭಿವೃದ್ಧಿಪಡಿಸಿತ್ತು. ನಂತರ, ಗರಿಮಾ ಸಾಮಾನ್ಯ ಜನನದ ಮೂಲಕ 2013 ಮತ್ತು 2014 ರಲ್ಲಿ ಮಹಿಮಾ ಮತ್ತು ಕರಿಷ್ಮಾ ಎಂಬ ಎಮ್ಮೆ ಕರುಗಳಿಗೆ ಜನ್ಮ ನೀಡಿತ್ತು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us