ನಿರ್ಭಯಾ ಪ್ರಕರಣ: ದಿಲ್ಲಿ ಕೋರ್ಟ್​ಗೆ ಹೊಸ ಅರ್ಜಿ ಸಲ್ಲಿಸಿದ ಮತ್ತೊಬ್ಬ ಅತ್ಯಾಚಾರಿ

ದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ.. ರಾಷ್ಟ್ರ ರಾಜಧಾನಿ ದಿಲ್ಲಿಯನ್ನೇ ನಡುಗಿಸಿದ್ದ ನಿರ್ಭಯಾ ಗ್ಯಾಂಗ್​ರೇಪ್ ನಡೆದು ಏಳು ವರ್ಷಗಳೇ ಉರುಳಿವೆ. ಆದ್ರೂ ಆಕೆಯ ಮೇಲೆ ಮೃಗಗಳಂತೆ ಎರಗಿ, ರಣಹದ್ದುಗಳಂತೆ ಕಿತ್ತು ತಿಂದ ನರ ರಾಕ್ಷಸರು ಇನ್ನೂ ಜೀವಂತವಾಗಿದ್ದಾರೆ. ಮರಣ ಶಾಸನದಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ದಿಲ್ಲಿ ಕೋರ್ಟ್​ಗೆ ಹೊಸ ಅರ್ಜಿ ಸಲ್ಲಿಸಿದ ಮತ್ತೊಬ್ಬ ಅತ್ಯಾಚಾರಿ: ಹೌದು, ಮರಣದಂಡನೆ ಶಿಕ್ಷೆ ಮರುಪರಿಶೀಲನೆ ಕೋರಿ ಅತ್ಯಾಚಾರಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅರ್ಜಿಯನ್ನ ವಜಾಗೊಳಿಸಿ […]

ನಿರ್ಭಯಾ ಪ್ರಕರಣ: ದಿಲ್ಲಿ ಕೋರ್ಟ್​ಗೆ ಹೊಸ ಅರ್ಜಿ ಸಲ್ಲಿಸಿದ ಮತ್ತೊಬ್ಬ ಅತ್ಯಾಚಾರಿ

Updated on: Dec 19, 2019 | 4:18 PM

ದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ.. ರಾಷ್ಟ್ರ ರಾಜಧಾನಿ ದಿಲ್ಲಿಯನ್ನೇ ನಡುಗಿಸಿದ್ದ ನಿರ್ಭಯಾ ಗ್ಯಾಂಗ್​ರೇಪ್ ನಡೆದು ಏಳು ವರ್ಷಗಳೇ ಉರುಳಿವೆ. ಆದ್ರೂ ಆಕೆಯ ಮೇಲೆ ಮೃಗಗಳಂತೆ ಎರಗಿ, ರಣಹದ್ದುಗಳಂತೆ ಕಿತ್ತು ತಿಂದ ನರ ರಾಕ್ಷಸರು ಇನ್ನೂ ಜೀವಂತವಾಗಿದ್ದಾರೆ. ಮರಣ ಶಾಸನದಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ.

ದಿಲ್ಲಿ ಕೋರ್ಟ್​ಗೆ ಹೊಸ ಅರ್ಜಿ ಸಲ್ಲಿಸಿದ ಮತ್ತೊಬ್ಬ ಅತ್ಯಾಚಾರಿ:
ಹೌದು, ಮರಣದಂಡನೆ ಶಿಕ್ಷೆ ಮರುಪರಿಶೀಲನೆ ಕೋರಿ ಅತ್ಯಾಚಾರಿ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅರ್ಜಿಯನ್ನ ವಜಾಗೊಳಿಸಿ ಮರಣದಂಡನೆ ಶಿಕ್ಷೆಯನ್ನ ಎತ್ತಿ ಹಿಡಿದಿದೆ. ಅಲ್ಲಿಗೆ ನಿರ್ಭಯಾ ಅತ್ಯಾಚಾರಿಗಳ ನೇಣು ಕುಣಿಕೆ ಮತ್ತಷ್ಟು ಬಿಗಿಯಾಯ್ತು ಅಂತ ಇಡೀ ದೇಶ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಆದ್ರೀಗ ಮತ್ತೊಬ್ಬ ಅತ್ಯಾಚಾರಿ ದಿಲ್ಲಿ ಹೈಕೋರ್ಟ್​ಗೆ ಹೊಸ ಅರ್ಜಿಯೊಂದನ್ನ ಸಲ್ಲಿಸಿ ಎಲ್ಲರಿಗೂ ಶಾಕ್ ನೀಡಿದ್ದಾನೆ.

ಅರ್ಜಿಯಲ್ಲಿ ಮಹತ್ವದ ವಿಚಾರವೊಂದನ್ನ ಉಲ್ಲೇಖಿಸಿರೋ ಪವನ್ ಕುಮಾರ್ ಗುಪ್ತಾ, ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ. ಹಾಗಿದ್ರೆ ಪವನ್ ಗುಪ್ತ ಪ್ಲಾನ್ ಏನು..? ಆತ ಸಲ್ಲಿಸಿದ ಹೊಸ ಅರ್ಜಿಯಲ್ಲಿ ಏನಿದೆ ಎನ್ನುವುದಾದರೆ…

ಅತ್ಯಾಚಾರಿ ಪವನ್ ಅರ್ಜಿಯಲ್ಲಿ ಏನಿದೆ..?
ಅತ್ಯಾಚಾರ ಕೃತ್ಯ ಎಸಗುವ ವೇಳೆ ನಾನು ಅಪ್ರಾಪ್ತನಾಗಿದ್ದೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿರೋ ಪವನ್ ಗುಪ್ತ, 2012ರಲ್ಲಿ ತನಿಖಾಧಿಕಾರಿಗಳು ನನ್ನ ಅಪ್ರಾಪ್ತತೆ ಪರೀಕ್ಷೆಯನ್ನೇ ನಡೆಸಿರಲಿಲ್ಲ ಅಂತ ಹೇಳಿದ್ದಾನೆ. ಹೀಗಾಗಿ ಯಾವುದೇ ಸಮಯದಲ್ಲಾದರೂ ಅರ್ಜಿಯನ್ನ ಸಲ್ಲಿಸಲು ಬಾಲಾಪರಾಧ ಕಾಯ್ದೆಯ ಅಡಿಯಲ್ಲಿ ಅವಕಾಶ ಇದೆ ಅಂತ ಉಲ್ಲೇಸಿದ್ದಾನೆ.

ಈ ಮೂಲಕ ಬಾಲಾಪರಾಧಿ ಎಂಬ ವಿನಾಯಿತಿ ಪಡೆದು ಮರಣದಂಡನೆಯಿಂದ ಪಾರಾಗಲು ಸಂಚು ಹೂಡಿದ್ದಾನೆ. ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೈಟ್ ಪೀಠದಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಯಲಿದ್ದು ಭಾರಿ ಕುತೂಹಲ ಮೂಡಿಸಿದೆ.

Published On - 7:49 am, Thu, 19 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us