ಆಪರೇಷನ್ ಕಾವೇರಿ: ಸುಡಾನ್‌ನಿಂದ 231 ಭಾರತೀಯರನ್ನು ಅಹಮದಾಬಾದ್​​ಗೆ ಕರೆತಂದ 10ನೇ ವಿಮಾನ

ಸುಡಾನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿದ್ದರಿಂದ ಕಳೆದ ಕೆಲವು ದಿನಗಳಲ್ಲಿ 1600 ಕ್ಕೂ ಹೆಚ್ಚು ಭಾರತೀಯರನ್ನು ವಾಯುಪಡೆ ಸ್ಥಳಾಂತರಿಸಿದೆ

ಆಪರೇಷನ್ ಕಾವೇರಿ: ಸುಡಾನ್‌ನಿಂದ 231 ಭಾರತೀಯರನ್ನು ಅಹಮದಾಬಾದ್​​ಗೆ ಕರೆತಂದ 10ನೇ ವಿಮಾನ
ಆಪರೇಷನ್ ಕಾವೇರಿ

Updated on: May 02, 2023 | 7:27 PM

ಸಂಘರ್ಷ ಪೀಡಿತ ಸುಡಾನ್‌ನಿಂದ (Sudan) ತನ್ನ ನಾಗರಿಕರನ್ನು ಮನೆಗೆ ಕರೆತರಲು ಸರ್ಕಾರದ ರಕ್ಷಣಾ ಕಾರ್ಯಾಚರಣೆ ಆಪರೇಷನ್ ಕಾವೇರಿ (Operation Kaveri) ಭಾಗವಾಗಿ 231 ಭಾರತೀಯ ನಾಗರಿಕರನ್ನು ಹೊತ್ತ 10 ನೇ ವಿಮಾನವು ಮಂಗಳವಾರ ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿದೆ. ಮತ್ತೊಂದು ಆಪರೇಷನ್ ಕಾವೇರಿ ವಿಮಾನ ಅಹಮದಾಬಾದ್‌ನಲ್ಲಿ (Ahmedabad) ಇಳಿಯಿತು. ಇನ್ನೂ 231 ಪ್ರಯಾಣಿಕರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಭಾರತೀಯರು ಸೌದಿ ಅರೇಬಿಯಾದ ಜಿದ್ದಾದಿಂದ ಆಗಮಿಸಿದ್ದಾರೆ. ಅಲ್ಲಿ ಕೇಂದ್ರವು ಸ್ಥಳಾಂತರಿಸುವವರಿಗೆ ಸಾರಿಗೆ ಶಿಬಿರವನ್ನು ಸ್ಥಾಪಿಸಿದೆ. ಭಾರತ ಸರ್ಕಾರವು ಇಲ್ಲಿಯವರೆಗೆ 3,000 ಭಾರತೀಯ ಮೂಲದ ಜನರನ್ನು ಸುಡಾನ್‌ನಿಂದ ಸ್ಥಳಾಂತರಿಸಿದೆ.

ಸೋಮವಾರ ಮುಂಜಾನೆ, ಸುಡಾನ್‌ನಿಂದ ಭಾರತೀಯ ವಾಯುಪಡೆಯ 9 ನೇ ವಿಮಾನದಲ್ಲಿ 186 ಭಾರತೀಯರನ್ನು ಸ್ಥಳಾಂತರಿಸಲಾಯಿತು.

ಶುಕ್ರವಾರ ಎರಡು ಬ್ಯಾಚ್‌ಗಳಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ, 754 ಭಾರತೀಯರು ದೇಶಕ್ಕೆ ಆಗಮಿಸಿದ್ದಾರೆ. ಬುಧವಾರ 360 ಮಂದಿಯ ಮೊದಲ ಗುಂಪು ವಾಣಿಜ್ಯ ವಿಮಾನದಲ್ಲಿ ನವದೆಹಲಿಗೆ ಮರಳಿತು.


ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಮುಂದುವರೆಸುತ್ತಾ, ಗುರುವಾರ, ಭಾರತೀಯ ವಾಯುಪಡೆಯ (IAF) C17 ಗ್ಲೋಬ್‌ಮಾಸ್ಟರ್ 246 ಭಾರತೀಯ ಸ್ಥಳಾಂತರಿಸುವವರ ಎರಡನೇ ಗುಂಪನ್ನು ಮುಂಬೈಗೆ ಕರೆತಂದಿದೆ.

ಸುಡಾನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿದ್ದರಿಂದ ಕಳೆದ ಕೆಲವು ದಿನಗಳಲ್ಲಿ 1600 ಕ್ಕೂ ಹೆಚ್ಚು ಭಾರತೀಯರನ್ನು ವಾಯುಪಡೆ ಸ್ಥಳಾಂತರಿಸಿದೆ.ಆಪರೇಷನ್ ಕಾವೇರಿಯ ಭಾಗವಾಗಿ, ಭಾರತವು ತನ್ನ ಪ್ರಜೆಗಳನ್ನು ಖಾರ್ಟೂಮ್‌ನ ಸಂಘರ್ಷದ ಪ್ರದೇಶಗಳು ಮತ್ತು ಇತರ ಸವಾಲಿನ ಸ್ಥಳಗಳಿಂದ ಪೋರ್ಟ್ ಸುಡಾನ್‌ಗೆ ರಸ್ತೆ ಸಾರಿಗೆಯನ್ನು ಬಳಸಿಕೊಂಡು ಸ್ಥಳಾಂತರಿಸುತ್ತಿದೆ. ನಂತರ ಅವರನ್ನು ಹಡಗುಗಳು ಮತ್ತು ಭಾರತೀಯ ವಾಯುಪಡೆಯ ಹೆವಿ-ಲಿಫ್ಟ್ ಸಾರಿಗೆ ವಿಮಾನಗಳ ಮೂಲಕ ಜಿದ್ದಾಗೆ ಸಾಗಿಸಲಾಗುತ್ತದೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಸುಡಾನ್ ನಲ್ಲಿ ಸಂಘರ್ಷವುಂಟಾಗಿದೆ.

ಇದನ್ನೂ ಓದಿ: ಮನೆಯಿಂದ ಮತ ಚಲಾಯಿಸಿದ 103 ವರ್ಷದ ಅಜ್ಜನಿಗೆ ಕೇಂದ್ರ ಚುನಾವಣಾ ಆಯೋಗದಿಂದ ಶಹಬ್ಬಾಶ್ ​ಗಿರಿ

ಸುಡಾನ್ ಸೇನಾ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಅವರಿಗೆ ನಿಷ್ಠರಾಗಿರುವ ಸೈನಿಕರು ಮತ್ತು ಅವರ ಉಪ, ಅರೆಸೇನಾ ಕ್ಷಿಪ್ರ ಬೆಂಬಲ ಸೈನಿಕರ (RSF) ಕಮಾಂಡರ್ ಮೊಹಮದ್ ಹಮ್ದಾನ್ ಡಾಗ್ಲೋ ನಡುವೆ ಸಂಘರ್ಷ ಭುಗಿಲೆದ್ದಿದೆ.

ಸುಡಾನ್‌ನಲ್ಲಿ ಯಾವುದೇ ಭಾರತೀಯ ಪ್ರಜೆ ಉಳಿಯಬಾರದು. ಭಾರತವು ತನ್ನ ಮಿಲಿಟರಿ ವಿಮಾನಗಳು ಮತ್ತು ಯುದ್ಧನೌಕೆಗಳನ್ನು ಯುದ್ಧ ಪೀಡಿತ ದೇಶದಲ್ಲಿ ತನ್ನ ನಾಗರಿಕರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಸುರಕ್ಷಿತವಾಗಿ ತರಲು ನಿಯೋಜಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ