ಮಾಲ್ಡೀವ್ಸ್​ನಿಂದ ನೇರವಾಗಿ ಕೇರಳಕ್ಕೆ ಭಾರತೀಯರನ್ನ ಕರೆತಂದ INS ಜಲಾಶ್ವ

ಕೊಚ್ಚಿ: ಕ್ರೂರಿ ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಪರಡಾಡುತ್ತಿದ್ದ ಭಾರತೀಯರನ್ನು INS ಜಲಾಶ್ವ ಕರೆತಂದಿದೆ. ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಇಂದು ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಅನಿವಾಸಿ ಭಾರತೀಯರನ್ನು ಕರೆತರಲು ಮುಂಬೈನ ಕರಾವಳಿ ತೀರದಿಂದ ಐಎನ್​ಎಸ್​ ಜಲಾಶ್ವ ಹಡಗನ್ನು ಕಳುಹಿಸಲಾಗಿತ್ತು. ಆಪರೇಷನ್ ಸಮುದ್ರ ಸೇತು ಹೆಸರಿನಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಹಡಗಿನಲ್ಲಿ ಕರೆತರಲಾಗುತ್ತಿದೆ. ಅದರಂತೆ ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಇಂದು ಮತ್ತೊಮ್ಮೆ ಕೊಚ್ಚಿಯಲ್ಲಿ 588 ಭಾರತೀಯರ […]

ಮಾಲ್ಡೀವ್ಸ್​ನಿಂದ ನೇರವಾಗಿ ಕೇರಳಕ್ಕೆ ಭಾರತೀಯರನ್ನ ಕರೆತಂದ INS ಜಲಾಶ್ವ
ಸಾಧು ಶ್ರೀನಾಥ್​

Updated on: May 17, 2020 | 7:57 PM

ಕೊಚ್ಚಿ: ಕ್ರೂರಿ ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಪರಡಾಡುತ್ತಿದ್ದ ಭಾರತೀಯರನ್ನು INS ಜಲಾಶ್ವ ಕರೆತಂದಿದೆ. ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಇಂದು ಕೇರಳದ ಕೊಚ್ಚಿಗೆ ಕರೆತರಲಾಗಿದೆ.

ಅನಿವಾಸಿ ಭಾರತೀಯರನ್ನು ಕರೆತರಲು ಮುಂಬೈನ ಕರಾವಳಿ ತೀರದಿಂದ ಐಎನ್​ಎಸ್​ ಜಲಾಶ್ವ ಹಡಗನ್ನು ಕಳುಹಿಸಲಾಗಿತ್ತು. ಆಪರೇಷನ್ ಸಮುದ್ರ ಸೇತು ಹೆಸರಿನಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಹಡಗಿನಲ್ಲಿ ಕರೆತರಲಾಗುತ್ತಿದೆ.

ಅದರಂತೆ ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಇಂದು ಮತ್ತೊಮ್ಮೆ ಕೊಚ್ಚಿಯಲ್ಲಿ 588 ಭಾರತೀಯರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us