AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸ್ ಫರ್ಡ್ ವಿವಿ ಲಸಿಕೆಗೆ ಮತ್ತೆ ಗ್ರೀನ್ ಸಿಗ್ನಲ್, ಬ್ರಿಟನ್ ನಲ್ಲಿ ಶುರುವಾಯ್ತು 3ನೇ ಹಂತದ ಪ್ರಯೋಗ

ದೆಹಲಿ: ಕ್ರೂರಿ ಕೊರೊನಾ ಸದ್ದೆ ಇಲ್ಲದೆ ತನ್ನ ಅಟ್ಟಹಾಸ ಮುಂದುವರಿಸಿದೆ. ವಿಶ್ವದಾದ್ಯಂತ ಹತ್ತಿರತ್ತಿರ 3 ಕೋಟಿ ಪ್ರಕರಣಗಳು ಕನ್ಫರ್ಮ್ ಆಗಿವೆ. ಅದ್ರಲ್ಲೂ ಭಾರತದ ಸ್ಥಿತಿ ಊಹೆಗೂ ನಿಲುಕದಂಥ ಸಂದಿಗ್ಧ ಸ್ಥಿತಿಗೆ ತಲುಪಿದೆ. ಇನ್ನು ಈ ಹೊತ್ತಲ್ಲೇ ಆಕ್ಸ್​ಫರ್ಡ್ ಲಸಿಕೆಗೆ ದಿಢೀರ್ ಬ್ರೇಕ್ ಬಿದ್ದಿತ್ತು. ಇದು ಭಾರಿ ಆತಂಕ ಮೂಡಿಸಿದ್ದ ಬೆನ್ನಲ್ಲೇ ಮತ್ತೆ ಲಸಿಕೆ ಪ್ರಯೋಗ ಮುಂದುವರಿಸಲು ಬ್ರಿಟನ್ ಗ್ರೀನ್ ಸಿಗ್ನಲ್ ನೀಡಿದೆ. ಜಗತ್ತಿನಲ್ಲಿ ಕೊರೊನಾ ಕಂಟಕದಿಂದ ಪಾರಾಗಲು ಉಳಿದಿರುವ ಏಕೈಕ ಮಾರ್ಗ ಲಸಿಕೆ. ಅದ್ರಲ್ಲೂ ಇಡೀ ವಿಶ್ವದ […]

ಆಕ್ಸ್ ಫರ್ಡ್ ವಿವಿ ಲಸಿಕೆಗೆ ಮತ್ತೆ ಗ್ರೀನ್ ಸಿಗ್ನಲ್, ಬ್ರಿಟನ್ ನಲ್ಲಿ ಶುರುವಾಯ್ತು 3ನೇ ಹಂತದ ಪ್ರಯೋಗ
ಆಯೇಷಾ ಬಾನು
|

Updated on: Sep 13, 2020 | 6:58 AM

Share

ದೆಹಲಿ: ಕ್ರೂರಿ ಕೊರೊನಾ ಸದ್ದೆ ಇಲ್ಲದೆ ತನ್ನ ಅಟ್ಟಹಾಸ ಮುಂದುವರಿಸಿದೆ. ವಿಶ್ವದಾದ್ಯಂತ ಹತ್ತಿರತ್ತಿರ 3 ಕೋಟಿ ಪ್ರಕರಣಗಳು ಕನ್ಫರ್ಮ್ ಆಗಿವೆ. ಅದ್ರಲ್ಲೂ ಭಾರತದ ಸ್ಥಿತಿ ಊಹೆಗೂ ನಿಲುಕದಂಥ ಸಂದಿಗ್ಧ ಸ್ಥಿತಿಗೆ ತಲುಪಿದೆ. ಇನ್ನು ಈ ಹೊತ್ತಲ್ಲೇ ಆಕ್ಸ್​ಫರ್ಡ್ ಲಸಿಕೆಗೆ ದಿಢೀರ್ ಬ್ರೇಕ್ ಬಿದ್ದಿತ್ತು. ಇದು ಭಾರಿ ಆತಂಕ ಮೂಡಿಸಿದ್ದ ಬೆನ್ನಲ್ಲೇ ಮತ್ತೆ ಲಸಿಕೆ ಪ್ರಯೋಗ ಮುಂದುವರಿಸಲು ಬ್ರಿಟನ್ ಗ್ರೀನ್ ಸಿಗ್ನಲ್ ನೀಡಿದೆ.

ಜಗತ್ತಿನಲ್ಲಿ ಕೊರೊನಾ ಕಂಟಕದಿಂದ ಪಾರಾಗಲು ಉಳಿದಿರುವ ಏಕೈಕ ಮಾರ್ಗ ಲಸಿಕೆ. ಅದ್ರಲ್ಲೂ ಇಡೀ ವಿಶ್ವದ ಹಲವು ದೇಶಗಳು ಪೈಪೋಟಿಗೆ ಇಳಿದಿದ್ರೂ ಆಶಾಭಾವನೆ ಮೂಡಿಸಿದ್ದು ಮಾತ್ರ ಆಕ್ಸ್‌ಫರ್ಡ್‌ ವಿವಿ ಲಸಿಕೆಯೊಂದೇ. ಆದ್ರೆ, ಇತ್ತೀಚೆಗೆ ಆಕ್ಸ್​ಫರ್ಡ್ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಒಳಪಟ್ಟ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದ. ಹೀಗಾಗಿ, ದಿಢೀರ್ ಎಂದು ಲಸಿಕೆಯ ಪ್ರಯೋಗಕ್ಕೆ ಬ್ರೇಕ್ ಬಿದ್ದಿತ್ತು. ಭಾರತದಲ್ಲೂ ಲಸಿಕೆ ಪ್ರಯೋಗ ನಿಂತಿತ್ತು. ಆದ್ರೀಗ, ತೊಡಕುಗಳೆಲ್ಲಾ ಮಾಯವಾಗಿ ಪ್ರಯೋಗ ಪುನಾರಂಭಿಸಲು ಸೂಚಿಸಲಾಗಿದೆ.

3ನೇ ಹಂತದ ಪ್ರಯೋಗಕ್ಕೆ ಬ್ರಿಟನ್‌ ಸರ್ಕಾರದ ಅನುಮತಿ! ಬ್ರಿಟನ್​ನಲ್ಲಿ ಸ್ಥಗಿತಗೊಂಡಿದ್ದ ಆಕ್ಸ್​ಫರ್ಡ್ ಲಸಿಕೆಯ 3ನೇ ಹಂತದ ಪ್ರಯೋಗ ಈಗ ಮತ್ತೆ ಶುರುವಾಗಿದೆ. ಈ ಹಿಂದೆ ಬ್ರಿಟನ್‌ನಲ್ಲಿ ಪ್ರಯೋಗ ನಿಂತಾಗ ಭಾರತದಲ್ಲೂ ಪ್ರಯೋಗ ನಿಲ್ಲಿಸಲು ಪುಣೆಯ ಸೆರಮ್ ಇನ್ಸ್​ಟಿಟ್ಯೂಟ್​ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶೋಕಾಸ್ ನೋಟಿಸ್ ನೀಡಿತ್ತು. ಬ್ರಿಟನ್​ನಲ್ಲಿ ಪ್ರಯೋಗ ಪುನಾರಂಭ ಆಗುವವರೆಗೂ ತಟಸ್ಥವಾಗಿರಲು ಹೇಳಿತ್ತು. ಆದ್ರೀಗ ಬ್ರಿಟನ್​ನಲ್ಲಿ ಪ್ರಯೋಗ ಶುರುವಾಗಿರೋದ್ರಿಂದ ಭಾರತದಲ್ಲೂ ಈ ಲಸಿಕೆಯ ಪ್ರಯೋಗ ಮತ್ತೆ ಮುಂದುವರಿಯುವ ವಿಶ್ವಾಸ ಮೂಡಿದೆ.

ಒಟ್ನಲ್ಲಿ ಆಕ್ಸ್​ಫರ್ಡ್ ವ್ಯಾಕ್ಸಿನ್ ಪ್ರಯೋಗ ನಿಂತು ಹೋಗಿದ್ದು ಭಾರಿ ಆತಂಕ ಸೃಷ್ಟಿಮಾಡಿತ್ತು. ಆದರೆ ಈಗ ಪ್ರಯೋಗ ಪುನಾರಂಭಗೊಂಡಿರುವ ಹಿನ್ನೆಲೆ ವರ್ಷಾಂತ್ಯಕ್ಕೆ ಲಸಿಕೆ ಲಭ್ಯವಾಗುವ ಭರವಸೆ ಮೂಡಿಸಿದೆ. ಆದರೆ ಎಲ್ಲಾ ಅನುಮಾನ ಹಾಗೂ ಕುತೂಹಲಗಳಿಗೆ ಉತ್ತರ ಪಡೆಯಲು 3ನೇ ಪ್ರಯೋಗದ ಫಲಿತಾಂಶದವರೆಗೂ ಕಾಯಲೇಬೇಕಿದೆ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ