AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯೆಯಾಗಬೇಕಿದ್ದ ಮಗಳು ರೋಗಿಯಿಂದ ಹತ್ಯೆಗೊಳಗಾದಳು; ಡಾ ವಂದನಾಳ ಎಂಬಿಬಿಎಸ್ ಪ್ರಮಾಣಪತ್ರ ಸ್ವೀಕರಿಸಿ ಕಣ್ಣೀರಾದ ಪೋಷಕರು

ಉಪಕುಲಪತಿ ಮೋಹನ್ ಕುನ್ನುಮ್ಮಾಲ್ ನೇತೃತ್ವದಲ್ಲಿ ನಡೆದ ಕೆಯುಎಚ್‌ಎಸ್‌ನ ಆಡಳಿತ ಮಂಡಳಿ ಸಭೆಯಲ್ಲಿ ಡಾ ವಂದನಾ ಅವರಿಗೆ ಮರಣೋತ್ತರ ಗೌರವವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ವೈದ್ಯೆಯಾಗಬೇಕಿದ್ದ ಮಗಳು ರೋಗಿಯಿಂದ ಹತ್ಯೆಗೊಳಗಾದಳು; ಡಾ ವಂದನಾಳ ಎಂಬಿಬಿಎಸ್ ಪ್ರಮಾಣಪತ್ರ ಸ್ವೀಕರಿಸಿ ಕಣ್ಣೀರಾದ ಪೋಷಕರು
ಪ್ರಮಾಣಪತ್ರ ಸ್ವೀಕರಿಸುತ್ತಿರುವ ಡಾ. ವಂದನಾದಾಸ್ ಅವರ ಪೋಷಕರು
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Aug 02, 2023 | 7:17 PM

Share

ತ್ರಿಶೂರ್ ಆಗಸ್ಟ್ 02:  25ರ ಹರೆಯದ ವಂದನಾ ದಾಸ್ (Dr Vandana Das) ಎಂಬಿಬಿಎಸ್ ಕಲಿತು, ಹೌಸ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ  ಮೇ 10 ರಂದು ಕೊಟ್ಟಾರಕ್ಕರದ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬಆಕೆಯನ್ನು  ಇರಿದು ಹತ್ಯೆ ಮಾಡಿದ್ದ. ಎಂಬಿಬಿಎಸ್ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮ ಬುಧವಾರದಂದು ನಡೆದಿದ್ದು ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರಿಂದ ವಂದನಾಳ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರ ಸ್ವೀಕರಿಸಿದ ಪೋಷಕರು ಮಗಳನ್ನು ನೆನೆದು ಭಾವುಕರಾಗಿದ್ದಾರೆ. ಕೇರಳ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್ ವಂದನಾಳಿಗೆ ಗೌರವವಾಗಿ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರ ನೀಡಿದೆ. ಇದನ್ನು ಸ್ವೀಕರಿಸಿದ ವಂದನಾಳ ಪೋಷಕರಾದ ಉದ್ಯಮಿ ಕೆ.ಜಿ.ಮೋಹನ್‌ದಾಸ್ ಮತ್ತು ಅವರ ಪತ್ನಿ ವಸಂತಕುಮಾರಿ ಕಣ್ಣೀರಾಗಿದ್ದಾರೆ.

ಉಪಕುಲಪತಿ ಮೋಹನ್ ಕುನ್ನುಮ್ಮಾಲ್ ನೇತೃತ್ವದಲ್ಲಿ ನಡೆದ ಕೆಯುಎಚ್‌ಎಸ್‌ನ ಆಡಳಿತ ಮಂಡಳಿ ಸಭೆಯಲ್ಲಿ ಡಾ ವಂದನಾ ಅವರಿಗೆ ಮರಣೋತ್ತರ ಗೌರವವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯಪಾಲ ಖಾನ್ ಎಂಬಿಬಿಎಸ್ ಪ್ರಮಾಣ ಪತ್ರ ವಿತರಿಸುವಾಗ ಮೋಹನ್ ದಾಸ್ ಮತ್ತು ವಸಂತಕುಮಾರಿಗೆ ಅಳು ತಡೆಯಲಾಗಿಲ್ಲ. ಡಾ ವಂದನಾ ಅವರು ಅಜೀಜಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದು, ಕೋರ್ಸ್‌ನ ಭಾಗವಾಗಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದಾಗ ಹತ್ಯೆಗೊಳಗಾಗಿದ್ದರು.

ಇದನ್ನೂ ಓದಿ: ನುಹ್ ಹಿಂಸಾಚಾರ ಖಂಡಿಸಿ ಪ್ರತಿಭಟನೆ: ಉತ್ತರ ಪ್ರದೇಶ, ಹರ್ಯಾಣ ಮತ್ತು ದೆಹಲಿಗೆ ಸುಪ್ರೀಂ ನೋಟಿಸ್; ಆಗಸ್ಟ್ 4ಕ್ಕೆ ಮುಂದಿನ ವಿಚಾರಣೆ

ಡಾ ವಂದನಾ ಅವರನ್ನು ಚಾಕುವಿನಿಂದ ಇರಿದು ಕೊಂದ ಶಾಲಾ ಶಿಕ್ಷಕ ಜಿ ಸಂದೀಪ್ ವಿರುದ್ಧ ಕ್ರೈಂ ಬ್ರಾಂಚ್, ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್- I ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಚಾರ್ಜ್‌ಶೀಟ್‌ನ ಪ್ರಕಾರ, ಸಂದೀಪ್ ಉದ್ದೇಶಪೂರ್ವಕವಾಗಿ ಡಾ ವಂದನಾ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದು 11 ಬಾರಿ ಇರಿದಿದ್ದಾನೆ.

ವಂದನಾ ಹತ್ಯೆಯ ನಂತರ, ರಾಜ್ಯ ಸರ್ಕಾರವು ವೈದ್ಯಕೀಯ ವೃತ್ತಿಪರರಿಗೆ ದೈಹಿಕ ಹಾನಿ ಉಂಟುಮಾಡುವ ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಯನ್ನು ಶಿಫಾರಸು ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಮೇ 23 ರಂದು ರಾಜ್ಯಪಾಲ ಖಾನ್ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Wed, 2 August 23

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು