ಮಾಸ್ಕ್ ಧರಿಸಿಲ್ಲವೆಂದು ಮೇಕೆಯನ್ನೆ ಬಂಧಿಸಿದ ಪೊಲೀಸರು, ಎಲ್ಲಿ?

ಮೇಕೆಯೊಂದು ಮಾಸ್ಕ್ ಧರಿಸದೆ ಬೀದಿಯಲ್ಲಿ ಓಡಾಡುತ್ತಿದ್ದನ್ನು ಕಂಡ ಬಿಕಾನ್ ಗಂಜ್ ನಗರದ ಪೊಲೀಸರು ಮೇಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದ್ದು ಈಗ ಎಲ್ಲೆಡೆ ಸುದ್ದಿಯಲ್ಲಿದೆ. ವಿಷಯ ತಿಳಿದು ಪೊಲೀಸ್ ಠಾಣೆಗೆ ಬಂದ ಮೇಕೆಯ ಯಜಮಾನ ಪೊಲೀಸರನ್ನು ಕಾಡಿ ಬೇಡಿದ ನಂತರ, ಪೊಲೀಸರು ಒಡೆಯನಿಗೆ ಮೇಕೆಯನ್ನು ಬೀದಿಯಲ್ಲಿ ಅಲೆಯಲು ಬಿಡಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ವಿಚಾರ ಎಲ್ಲೆಡೆ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡ ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ ಸೈಫುದ್ದಿನ್ ಬೇಗ್ ಹೇಳಿರುವ […]

ಮಾಸ್ಕ್ ಧರಿಸಿಲ್ಲವೆಂದು ಮೇಕೆಯನ್ನೆ ಬಂಧಿಸಿದ ಪೊಲೀಸರು, ಎಲ್ಲಿ?
ಸಾಧು ಶ್ರೀನಾಥ್​ Edited By:

Updated on: Jul 28, 2020 | 12:38 AM

ಮೇಕೆಯೊಂದು ಮಾಸ್ಕ್ ಧರಿಸದೆ ಬೀದಿಯಲ್ಲಿ ಓಡಾಡುತ್ತಿದ್ದನ್ನು ಕಂಡ ಬಿಕಾನ್ ಗಂಜ್ ನಗರದ ಪೊಲೀಸರು ಮೇಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದ್ದು ಈಗ ಎಲ್ಲೆಡೆ ಸುದ್ದಿಯಲ್ಲಿದೆ.

ವಿಷಯ ತಿಳಿದು ಪೊಲೀಸ್ ಠಾಣೆಗೆ ಬಂದ ಮೇಕೆಯ ಯಜಮಾನ ಪೊಲೀಸರನ್ನು ಕಾಡಿ ಬೇಡಿದ ನಂತರ, ಪೊಲೀಸರು ಒಡೆಯನಿಗೆ ಮೇಕೆಯನ್ನು ಬೀದಿಯಲ್ಲಿ ಅಲೆಯಲು ಬಿಡಬಾರದೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ವಿಚಾರ ಎಲ್ಲೆಡೆ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡ ಅನ್ವರ್ ಗಂಜ್ ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ ಸೈಫುದ್ದಿನ್ ಬೇಗ್ ಹೇಳಿರುವ ಪ್ರಕಾರ ಮೇಕೆಯನ್ನು ಯುವಕನೊಬ್ಬ ಎತ್ತಿಕೊಂಡು ಹೋಗುತ್ತಿದ್ದು, ಪೊಲೀಸರನ್ನು ಕಂಡ ಬಳಿಕ ಸ್ಥಳದಲ್ಲಿಯೇ ಮೇಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಮೇಕೆಯನ್ನು ಪೊಲೀಸ್ ಠಾಣೆಗೆ ತಂದು ರಕ್ಷಣೆ ನೀಡಿದೆವು ಎಂದಿದ್ದಾರೆ.

ಮೇಕೆಯನ್ನು ಠಾಣೆಗೆ ಕರೆತಂದ ಪೊಲೀಸ್ ಒಬ್ಬರು ಮೇಕೆ ಮಾಸ್ಕ್ ಧರಿಸದೆ ಬೀದಿಯಲ್ಲಿ ಓಡಾಡಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದೆ. ಹಾಗಾಗಿ ಠಾಣೆಗೆ ಕರೆದುಕೊಂಡು ಬಂದಿದ್ದೇವೆ ಎಂದಿದ್ದರು. ಜೊತೆಗೆ ಇತ್ತೀಚಿನ ದಿನಗಳಲ್ಲಿ ನಾಯಿಗಳ ಮಾಲೀಕರು ತಮ್ಮ ನಾಯಿಗಳಿಗೆ ಮಾಸ್ಕ್ ವ್ಯವಸ್ಥೆ ಮಾಡಲಾಗಿದ್ದು, ಮೇಕೆಗಳಿಗ್ಯಾಕೆ ಮಾಸ್ಕ್ ವ್ಯವಸ್ಥೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದರು. ಆದರೆ ಸಾಮಾಜಿಕ ತಾಣಗಳಲ್ಲಿ ಇದು ವೈರಲ್ ಆದ ಕಾರಣ ಈಗ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.

Published On - 3:31 pm, Mon, 27 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us