Delhi Chalo: ಗಡಿಯಲ್ಲಿ ಹೆದ್ದಾರಿಗೆ ಅಳವಡಿಸಿದ್ದ ಮೊಳೆಗಳು ತೆರವು

ಗಾಜಿಪುರ ಗಡಿಯಲ್ಲಿ ಹೊಡೆಯಲಾದ ಮೊಳೆಗಳನ್ನು ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದೆ.

Delhi Chalo: ಗಡಿಯಲ್ಲಿ ಹೆದ್ದಾರಿಗೆ ಅಳವಡಿಸಿದ್ದ ಮೊಳೆಗಳು ತೆರವು
ಅಳವಡಿಸಿದ್ದ ಮೊಳೆ ತೆರವು
Updated By: ಸಾಧು ಶ್ರೀನಾಥ್​

Updated on: Feb 04, 2021 | 12:50 PM

ದೆಹಲಿ: ದೆಹಲಿಯ ಹೆದ್ದಾರಿಗೆ ಮೊಳೆ ಅಳವಡಿಸಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆ ಇದೀಗ ಗಾಜಿಪುರ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ಮೊಳೆಗಳ ತೆರವುಗೊಳಿಸಿದ್ದಾರೆ.

ಜನವರಿ 26ರಂದು ನಡೆದ ಹಿಂಸಾಚಾರದಿಂದ ಕೇಂದ್ರ ಸರ್ಕಾರ ಗಡಿ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾರಿಕೇಡ್ ಮೂಲಕ ರಸ್ತೆಗಳನ್ನು ಮುಚ್ಚಿದೆ. ಇದರ ಜೊತೆಗೆ ರಸ್ತೆಗಳಿಗೆ ಮೊಳೆಗಳನ್ನು ಹೊಡೆಯಲಾಗಿತ್ತು. ಈ ಕುರಿತು ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಪೊಲೀಸ್ ಸಿಬ್ಬಂದಿ ಅಳವಡಿಸಿದ್ದ ಮೊಳೆಯನ್ನು ತೆರವುಗೊಳಿಸಿದ್ದಾರೆ.

Delhi violence ಕೆಂಪುಕೋಟೆ ಬಳಿ ಹಿಂಸಾಚಾರ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಒಪ್ಪದ ಸುಪ್ರೀಂ ಕೋರ್ಟ್; ಅರ್ಜಿ ಹಿಂಪಡೆಯಲು ಸೂಚನೆ