Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ ಸರ್ಕಾರದ ವಿರುದ್ಧ ಆಕ್ರೋಶ; ಕೇದಾರನಾಥ ದೇಗುಲದ ಹೊರಗೆ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸುತ್ತಿರುವ ಪುರೋಹಿತ

Char Dham: ನಾನು ಹೀಗೆ ಶೀರ್ಷಾಸನದಲ್ಲಿ ನಿಂತು ಏಳುದಿನಗಳ ಕಾಲ ಪ್ರತಿಭಟನೆ ನಡೆಸುತ್ತೇನೆ. ಅಷ್ಟಾದರೂ ಸರ್ಕಾರ ಈ ಬೋರ್ಡ್​​ನ್ನು ವಿಸರ್ಜಿಸದೆ ಇದ್ದರೆ ತೀವ್ರಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುತ್ತೇನೆ ಎಂದು ಆಚಾರ್ಯ ಸಂತೋಷ ತ್ರಿವೇದಿ ಹೇಳಿದ್ದಾರೆ.

ಉತ್ತರಾಖಂಡ ಸರ್ಕಾರದ ವಿರುದ್ಧ ಆಕ್ರೋಶ; ಕೇದಾರನಾಥ ದೇಗುಲದ ಹೊರಗೆ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸುತ್ತಿರುವ ಪುರೋಹಿತ
ದೇಗುಲದ ಎದುರು ಶೀರ್ಷಾಸನದಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿರುವ ಅರ್ಚಕ
Follow us
TV9 Web
| Updated By: Lakshmi Hegde

Updated on:Jun 16, 2021 | 2:50 PM

ಡೆಹ್ರಾಡೂನ್​: ಕೇದಾರನಾಥ ದೇವಸ್ಥಾನದ ಎದುರು ಅರ್ಚಕ ಆಚಾರ್ಯ ಸಂತೋಷ ತ್ರಿವೇದಿ ತಲೆಕೆಳಗಾಗಿ ನಿಂತು (ಶೀರ್ಷಾಸನ) ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಉತ್ತರಾಖಂಡ ಸರ್ಕಾರ ಚಾರ್ ಧಾಮ್​ ದೇವಸ್ಥಾನಮ್​ ನಿರ್ವಹಣಾ ಮಂಡಳಿಯನ್ನು ರಚಿಸಿದೆ. ಈ ಬೋರ್ಡ್​​ನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇನೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ನಾನು ಹೀಗೆ ಶೀರ್ಷಾಸನದಲ್ಲಿ ನಿಂತು ಏಳುದಿನಗಳ ಕಾಲ ಪ್ರತಿಭಟನೆ ನಡೆಸುತ್ತೇನೆ. ಅಷ್ಟಾದರೂ ಸರ್ಕಾರ ಈ ಬೋರ್ಡ್​​ನ್ನು ವಿಸರ್ಜಿಸದೆ ಇದ್ದರೆ ತೀವ್ರಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುತ್ತೇನೆ ಎಂದು ಆಚಾರ್ಯ ಸಂತೋಷ ತ್ರಿವೇದಿ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.

ಚಾರ್​ಧಾಮ್​ ನಿರ್ವಹಣಾ ಮಂಡಳಿ ರಚನೆ ಆದಾಗಿನಿಂದಲೂ ಕೇವಲ ಇವರೊಬ್ಬರಲೇ ಅಲ್ಲದೆ, ಉಳಿದ ಕೆಲವು ಪುರೋಹಿತರೂ ಸೇರಿ ಕೇದಾರನಾಥ ದೇಗುಲದ ಹೊರಗೆ ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡಳಿ ರಚನೆ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಬೋರ್ಡ್​​ನ್ನು ವಿಸರ್ಜಿಸುವವರೆಗೂ ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ.

ಭರವಸೆ ಈಡೇರಿಸದ ಸಿಎಂ ! ಇನ್ನು ಪುರೋಹಿತವರ್ಗದ ಪ್ರತಿಭಟನೆ ಉತ್ತರಾಖಂಡ ಮುಖ್ಯಮಂತ್ರಿ ತೀರಥ್​ ಸಿಂಗ್​ ರಾವತ್​ ಗಮನಕ್ಕೂ ಬಂದಿದೆ. ಮಂಡಳಿ ರಚನೆ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಹೇಳಿದ್ದ ತೀರಥ್​ ಸಿಂಗ್​ ರಾವತ್​ ಅದನ್ನು ಈಡೇರಿಸಲಿಲ್ಲ. ಅದರ ಬದಲು ನಿರ್ವಹಣಾ ಮಂಡಳಿಯನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಇದು ನಮಗೆ ಇನ್ನಷ್ಟು ಅಸಮಾಧಾನ ಉಂಟು ಮಾಡಿದೆ ಎಂದು ಅರ್ಚಕರು ಹೇಳಿಕೊಂಡಿದ್ದಾರೆ.

ನಮ್ಮ ಸಮುದಾಯ ಈಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳದೆ ಇದ್ದರೆ ಇನ್ನಷ್ಟು ತೀವ್ರ ಚಳವಳಿ ನಡೆಸುತ್ತೇವೆ ಎಂದು ಕೇದಾರನಾಥ ತೀರ್ಥ ಪುರೋಹಿತ ಸಮಾಜದ ಸದಸ್ಯರಾದ ಅಂಕಿತ್​ ಸೆಮ್​ವಾಲ್​ ತಿಳಿಸಿದ್ದಾರೆ. ಹಾಗೇ ಯಮುನೋತ್ರಿ, ಗಂಗೋತ್ರಿ, ಬದರೀನಾಥ್​, ಕೇದಾರನಾಥ್​​ಗಳು ಸೇರಿ ಚಾರ್​ಧಾಮ್ ಎನ್ನಿಸಿಕೊಂಡಿದ್ದು, ಇಲ್ಲಿನ​ ಯಾತ್ರೆಗೆ ಜೂ.15ರಿಂದ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭಾರತದ ಕಂಪೆನಿಗಳ ಆದಾಯದಲ್ಲಿ ಶೇ 78ರಷ್ಟು ದೇಶೀ ಮಾರುಕಟ್ಟೆಯಿಂದಲೇ; ಯಾವ ದೇಶದಲ್ಲಿ ಇದು ಹೆಚ್ಚು, ಎಲ್ಲಿ ಕಮ್ಮಿ?

Priest protests in Shirshasana outside the Kedarnath Shrine against state government of Uttarkhand

Published On - 2:48 pm, Wed, 16 June 21

ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ