AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC ಪರೀಕ್ಷೆಯಲ್ಲಿ Rank ಪಡೆದ ಈ ಪುರಾಣ ಸುಂದರಿ ವಿಶೇಷತೆ ಏನು ಗೊತ್ತಾ!?

ಮದುರೈ: ಯುಪಿಎಸ್​ಸಿ ಪರೀಕ್ಷೆಯಲ್ಲಿ Rank ಪಡೆದು ಯಶಸ್ವಿಯಾಗುವುದು ಸುಲಭ ಸಾಧ್ಯದ ಸಾಧನೆಯಲ್ಲ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ದೃಢ ಸಂಕಲ್ಪ ಅತಿ ಮುಖ್ಯ. ಈಗ ನಾವು ಹೇಳಲು ಹೊರಟಿರುವ ಕಥೆ ಸಾಧಕಿಯೊಬ್ಬಳ ಅಸಾಧಾರಣವಾದ ಸ್ಪೂರ್ತಿದಾಯಕ ಕಥೆ. ಮಹಾರಾಷ್ಟ್ರದ ಉಲ್ಹಾಸ್ ನಗರ ನಿವಾಸಿ ಪ್ರಾಂಜಲ್ ಪಾಟೀಲ್, ಯಾರೆಂದು ನಿಮಗೆಲ್ಲ ಗೊತ್ತೇ ಇರುತ್ತೆ. ಪ್ರಾಂಜಲ್ ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿ. ಇದೇ ದಾರಿಯಲ್ಲಿ ಸಾಗಿ ಬಂದ ಮತ್ತೊಬ್ಬ ಸಾಧಕಿಯನ್ನು ನಾವು ಈಗ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ತಮಿಳುನಾಡಿನ […]

UPSC ಪರೀಕ್ಷೆಯಲ್ಲಿ Rank ಪಡೆದ ಈ ಪುರಾಣ ಸುಂದರಿ ವಿಶೇಷತೆ ಏನು ಗೊತ್ತಾ!?
ಆಯೇಷಾ ಬಾನು
|

Updated on:Aug 14, 2020 | 10:26 AM

Share

ಮದುರೈ: ಯುಪಿಎಸ್​ಸಿ ಪರೀಕ್ಷೆಯಲ್ಲಿ Rank ಪಡೆದು ಯಶಸ್ವಿಯಾಗುವುದು ಸುಲಭ ಸಾಧ್ಯದ ಸಾಧನೆಯಲ್ಲ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ದೃಢ ಸಂಕಲ್ಪ ಅತಿ ಮುಖ್ಯ. ಈಗ ನಾವು ಹೇಳಲು ಹೊರಟಿರುವ ಕಥೆ ಸಾಧಕಿಯೊಬ್ಬಳ ಅಸಾಧಾರಣವಾದ ಸ್ಪೂರ್ತಿದಾಯಕ ಕಥೆ. ಮಹಾರಾಷ್ಟ್ರದ ಉಲ್ಹಾಸ್ ನಗರ ನಿವಾಸಿ ಪ್ರಾಂಜಲ್ ಪಾಟೀಲ್, ಯಾರೆಂದು ನಿಮಗೆಲ್ಲ ಗೊತ್ತೇ ಇರುತ್ತೆ. ಪ್ರಾಂಜಲ್ ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿ. ಇದೇ ದಾರಿಯಲ್ಲಿ ಸಾಗಿ ಬಂದ ಮತ್ತೊಬ್ಬ ಸಾಧಕಿಯನ್ನು ನಾವು ಈಗ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ.

ತಮಿಳುನಾಡಿನ ಮದುರೈ ನಿವಾಸಿ 25 ವರ್ಷದ ಪುರಾಣ ಸುಂದರಿ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ತನ್ನ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ 286ನೇ Rank ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. ಸುಂದರಿ ಅವರ ಈ ಸಾಧನೆಗೆ ಟ್ವಿಟ್ಟರ್​ನಲ್ಲಿ ಅಪಾರ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗಿದೆ. ಮತ್ತು ಅವರ ಕಥೆಯನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹಂಚಿಕೊಂಡಿದ್ದಾರೆ.

“ತಮಿಳುನಾಡಿನ 25 ವರ್ಷ ವಯಸ್ಸಿನ ದೃಷ್ಟಿಹೀನ ಪುರಾಣ ಸುಂದರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿ ಸಾಧನೆ ಮಾಡಿದ್ದಾರೆ. ಕನಸುಗಳ ಬೆನ್ನಟ್ಟುವುದನ್ನು ನಾವು ಎಂದಿಗೂ ನಿಲ್ಲಿಸಬಾರದು”   ಎಂದು ಕೈಫ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪುರಾಣ ಸುಂದರಿ ಐಎಎಸ್ ಆಕಾಂಕ್ಷಿಗಳಿಗೆ  ದಾರಿದೀಪ! ಸುಂದರಿ ತನ್ನ ಯಶಸ್ಸನ್ನು ಹೆತ್ತವರಿಗೆ ಅರ್ಪಿಸಿದ್ದಾರೆ. ನನ್ನ ಪೋಷಕರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ನನ್ನ ಯಶಸ್ಸನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ. ಇದು ನನ್ನ 4ನೇ ಪ್ರಯತ್ನ, ನಾನು ಈ ಪರೀಕ್ಷೆಗೆ 5 ವರ್ಷಗಳಷ್ಟು ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದು  ಮಾಧ್ಯಮದ ಜೊತೆ ಮಾತನಾಡುವ ವೇಳೆ ಸುಂಥಾರಿ ಹೇಳಿದ್ದಾರೆ.

ಪುರಾಣ ಸುಂದರಿ ಅವರು ಮೂರು ಬಾರಿ ಸೋತರೂ ಛಲ ಬಿಡದೆ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕತ್ತಲನ್ನೇ ಕಾಣುತ್ತಿದ್ದ ಕಣ್ಣುಗಳು ಈಗ ಬೆಳಕಿನೆಡೆಗೆ ಸಾಗುತ್ತಿವೆ. ಅವರ ಈ ಸಾಧನೆ ಯುವ ಜನಾಂಗಕ್ಕೆ ಮಾದರಿಯಾಗಿದೆ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸೋಣ.

Published On - 10:02 am, Fri, 14 August 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ