AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC ಪರೀಕ್ಷೆಯಲ್ಲಿ Rank ಪಡೆದ ಈ ಪುರಾಣ ಸುಂದರಿ ವಿಶೇಷತೆ ಏನು ಗೊತ್ತಾ!?

ಮದುರೈ: ಯುಪಿಎಸ್​ಸಿ ಪರೀಕ್ಷೆಯಲ್ಲಿ Rank ಪಡೆದು ಯಶಸ್ವಿಯಾಗುವುದು ಸುಲಭ ಸಾಧ್ಯದ ಸಾಧನೆಯಲ್ಲ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ದೃಢ ಸಂಕಲ್ಪ ಅತಿ ಮುಖ್ಯ. ಈಗ ನಾವು ಹೇಳಲು ಹೊರಟಿರುವ ಕಥೆ ಸಾಧಕಿಯೊಬ್ಬಳ ಅಸಾಧಾರಣವಾದ ಸ್ಪೂರ್ತಿದಾಯಕ ಕಥೆ. ಮಹಾರಾಷ್ಟ್ರದ ಉಲ್ಹಾಸ್ ನಗರ ನಿವಾಸಿ ಪ್ರಾಂಜಲ್ ಪಾಟೀಲ್, ಯಾರೆಂದು ನಿಮಗೆಲ್ಲ ಗೊತ್ತೇ ಇರುತ್ತೆ. ಪ್ರಾಂಜಲ್ ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿ. ಇದೇ ದಾರಿಯಲ್ಲಿ ಸಾಗಿ ಬಂದ ಮತ್ತೊಬ್ಬ ಸಾಧಕಿಯನ್ನು ನಾವು ಈಗ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ತಮಿಳುನಾಡಿನ […]

UPSC ಪರೀಕ್ಷೆಯಲ್ಲಿ Rank ಪಡೆದ ಈ ಪುರಾಣ ಸುಂದರಿ ವಿಶೇಷತೆ ಏನು ಗೊತ್ತಾ!?
ಆಯೇಷಾ ಬಾನು
|

Updated on:Aug 14, 2020 | 10:26 AM

Share

ಮದುರೈ: ಯುಪಿಎಸ್​ಸಿ ಪರೀಕ್ಷೆಯಲ್ಲಿ Rank ಪಡೆದು ಯಶಸ್ವಿಯಾಗುವುದು ಸುಲಭ ಸಾಧ್ಯದ ಸಾಧನೆಯಲ್ಲ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ದೃಢ ಸಂಕಲ್ಪ ಅತಿ ಮುಖ್ಯ. ಈಗ ನಾವು ಹೇಳಲು ಹೊರಟಿರುವ ಕಥೆ ಸಾಧಕಿಯೊಬ್ಬಳ ಅಸಾಧಾರಣವಾದ ಸ್ಪೂರ್ತಿದಾಯಕ ಕಥೆ. ಮಹಾರಾಷ್ಟ್ರದ ಉಲ್ಹಾಸ್ ನಗರ ನಿವಾಸಿ ಪ್ರಾಂಜಲ್ ಪಾಟೀಲ್, ಯಾರೆಂದು ನಿಮಗೆಲ್ಲ ಗೊತ್ತೇ ಇರುತ್ತೆ. ಪ್ರಾಂಜಲ್ ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿ. ಇದೇ ದಾರಿಯಲ್ಲಿ ಸಾಗಿ ಬಂದ ಮತ್ತೊಬ್ಬ ಸಾಧಕಿಯನ್ನು ನಾವು ಈಗ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ.

ತಮಿಳುನಾಡಿನ ಮದುರೈ ನಿವಾಸಿ 25 ವರ್ಷದ ಪುರಾಣ ಸುಂದರಿ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ತನ್ನ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ 286ನೇ Rank ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. ಸುಂದರಿ ಅವರ ಈ ಸಾಧನೆಗೆ ಟ್ವಿಟ್ಟರ್​ನಲ್ಲಿ ಅಪಾರ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗಿದೆ. ಮತ್ತು ಅವರ ಕಥೆಯನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹಂಚಿಕೊಂಡಿದ್ದಾರೆ.

“ತಮಿಳುನಾಡಿನ 25 ವರ್ಷ ವಯಸ್ಸಿನ ದೃಷ್ಟಿಹೀನ ಪುರಾಣ ಸುಂದರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿ ಸಾಧನೆ ಮಾಡಿದ್ದಾರೆ. ಕನಸುಗಳ ಬೆನ್ನಟ್ಟುವುದನ್ನು ನಾವು ಎಂದಿಗೂ ನಿಲ್ಲಿಸಬಾರದು”   ಎಂದು ಕೈಫ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪುರಾಣ ಸುಂದರಿ ಐಎಎಸ್ ಆಕಾಂಕ್ಷಿಗಳಿಗೆ  ದಾರಿದೀಪ! ಸುಂದರಿ ತನ್ನ ಯಶಸ್ಸನ್ನು ಹೆತ್ತವರಿಗೆ ಅರ್ಪಿಸಿದ್ದಾರೆ. ನನ್ನ ಪೋಷಕರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ನನ್ನ ಯಶಸ್ಸನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ. ಇದು ನನ್ನ 4ನೇ ಪ್ರಯತ್ನ, ನಾನು ಈ ಪರೀಕ್ಷೆಗೆ 5 ವರ್ಷಗಳಷ್ಟು ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದು  ಮಾಧ್ಯಮದ ಜೊತೆ ಮಾತನಾಡುವ ವೇಳೆ ಸುಂಥಾರಿ ಹೇಳಿದ್ದಾರೆ.

ಪುರಾಣ ಸುಂದರಿ ಅವರು ಮೂರು ಬಾರಿ ಸೋತರೂ ಛಲ ಬಿಡದೆ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕತ್ತಲನ್ನೇ ಕಾಣುತ್ತಿದ್ದ ಕಣ್ಣುಗಳು ಈಗ ಬೆಳಕಿನೆಡೆಗೆ ಸಾಗುತ್ತಿವೆ. ಅವರ ಈ ಸಾಧನೆ ಯುವ ಜನಾಂಗಕ್ಕೆ ಮಾದರಿಯಾಗಿದೆ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸೋಣ.

Published On - 10:02 am, Fri, 14 August 20

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ