Uddhav Thackeray: ರಾಹುಲ್ ಗಾಂಧಿ ಸಾವರ್ಕರ್ ಹೇಳಿಕೆ: ಕಾಂಗ್ರೆಸ್ ಔತಣಕೂಟ ಬಹಿಷ್ಕರಿಸಿದ ಉದ್ಧವ್ ಠಾಕ್ರೆ

|

Updated on: Mar 27, 2023 | 4:15 PM

ರಾಹುಲ್ ಗಾಂಧಿಯವರ ಸಾವರ್ಕರ್ ಹೇಳಿಕೆಗೆ ಕಾಂಗ್ರೆಸ್ ಔತಣಕೂಟವನ್ನು ಉದ್ಧವ್ ಠಾಕ್ರೆ ಬಹಿಷ್ಕರಿಸಿದ್ದಾರೆ.

Uddhav Thackeray: ರಾಹುಲ್ ಗಾಂಧಿ ಸಾವರ್ಕರ್ ಹೇಳಿಕೆ: ಕಾಂಗ್ರೆಸ್ ಔತಣಕೂಟ ಬಹಿಷ್ಕರಿಸಿದ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us on

ಮುಂಬೈ: ರಾಹುಲ್ ಗಾಂಧಿ (Rahul Gandhi) ಯವರ ಸಾವರ್ಕರ್ ಹೇಳಿಕೆಗೆ ಕಾಂಗ್ರೆಸ್ ಔತಣಕೂಟವನ್ನು ಉದ್ಧವ್ ಠಾಕ್ರೆ (Uddhav Thackeray) ಬಹಿಷ್ಕರಿಸಿದ್ದಾರೆ. ಪ್ರಧಾನಿ ಮೋದಿ ಉಪನಾಮದ ಬಗ್ಗೆ ನೀಡಿದ ಹೇಳಿಕೆಯ ಕಾರಣಕ್ಕೆ ರಾಹುಲ್ ಗಾಂಧಿಯವರಿಗೆ ಸೂರತ್ ಕೋರ್ಟ್​ 2 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತ್ತು, ನಂತರ 30 ದಿನಗಳ ಜಾಮೀನು ಕೂಡ ನೀಡಿತ್ತು. ನಂತರ ಲೋಕಸಭೆಯ ಸ್ಪೀಕರ್​ ಅವರು ಸಂಸತ್​ ಸದಸ್ಯತ್ವವನ್ನು ಅನರ್ಹಗೊಳಿಸಿತ್ತು. ಆ ಬಳಿಕ ರಾಹುಲ್ ಪತ್ರಿಕೋಷ್ಠಿಯಲ್ಲಿ ಮಾತನಾಡುವ ವೇಳೆ ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ ಎಂಬ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ.

ವಿಡಿ ಸಾವರ್ಕರ್ ಬಗ್ಗೆ ರಾಹುಲ್​​ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಮಿತ್ರ ಪಕ್ಷ ಉದ್ಧವ್ ಠಾಕ್ರೆ ಅವರು ದೆಹಲಿಯಲ್ಲಿ ಕಾಂಗ್ರೆಸ್​​ನ ಔತಣಕೂಟವನ್ನು ಬಿಟ್ಟುಬಿಡುವುದಾಗಿ ಘೋಷಿಸಿದ್ದಾರೆ. “ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ” ಎಂಬ ಹೇಳಿಕೆಯು ಠಾಕ್ರೆಯವರ ಪಕ್ಷವನ್ನು ತೀವ್ರವಾಗಿ ಅಸಮಾಧಾನಗೊಳಿಸಿದೆ.

ಇದನ್ನೂ ಓದಿ: Uddhav Thackeray: ಸಾವರ್ಕರ್ ನಮ್ಮ ದೇವರು ಅವರಿಗೆ ಅವಮಾನ ಮಾಡಿದರೆ ನಾವು ಸಹಿಸುವುದಿಲ್ಲ: ರಾಹುಲ್​ ಗಾಂಧಿಗೆ ಠಾಕ್ರೆ ಎಚ್ಚರಿಕೆ

ಇಂದು ಮುಂಜಾನೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ , ರಾಹುಲ್​​ ಗಾಂಧಿಯವರು “ನಮ್ಮ ದೇವರನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ” ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಬಿಡುವುದಾಗಿ ಎಚ್ಚರಿಕೆ ನೀಡಿದ್ದರು.

Published On - 4:15 pm, Mon, 27 March 23