ಚೀನಾ-ಭಾರತ ಕದನ ಕುತೂಹಲದ ಮಧ್ಯೆ ರಾಜನಾಥ್ ವಿರುದ್ಧ ರಾಹುಲ್ ಟ್ವೀಟ್ ಸಮರ!

ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಗರಿಗೆದರಿರುವ ಸೇನಾ ಚಟುವಟಿಕೆಗಳು ದೇಶದ ರಾಜಕೀಯ ರಂಗದಲ್ಲೂ ಪ್ರತಿಧ್ವನಿಸಿದೆ. ಭಾನುವಾರ ನಡೆದ ಬಿಜೆಪಿ ವರ್ಚುವಲ್ ಱಲಿಯಲ್ಲಿ ಭಾರತದ ರಕ್ಷಣಾ ನೀತಿಗೆ ವಿಶ್ವದಲ್ಲೇ ಮಾನ್ಯತೆ ದೊರತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯೇ ಈಗ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ಟ್ವಿಟರ್ ಸಮರಕ್ಕೆ ನಾಂದಿ ಹಾಡಿದೆ. ಈ ಸಮರದಲ್ಲಿ ರಾಹುಲ್ ಗಾಂಧಿ ಕೆಲವು ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. […]

ಚೀನಾ-ಭಾರತ ಕದನ ಕುತೂಹಲದ ಮಧ್ಯೆ ರಾಜನಾಥ್ ವಿರುದ್ಧ ರಾಹುಲ್ ಟ್ವೀಟ್ ಸಮರ!
ಸಾಧು ಶ್ರೀನಾಥ್​

Updated on: Jun 09, 2020 | 5:04 PM

ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಗರಿಗೆದರಿರುವ ಸೇನಾ ಚಟುವಟಿಕೆಗಳು ದೇಶದ ರಾಜಕೀಯ ರಂಗದಲ್ಲೂ ಪ್ರತಿಧ್ವನಿಸಿದೆ. ಭಾನುವಾರ ನಡೆದ ಬಿಜೆಪಿ ವರ್ಚುವಲ್ ಱಲಿಯಲ್ಲಿ ಭಾರತದ ರಕ್ಷಣಾ ನೀತಿಗೆ ವಿಶ್ವದಲ್ಲೇ ಮಾನ್ಯತೆ ದೊರತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯೇ ಈಗ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ಟ್ವಿಟರ್ ಸಮರಕ್ಕೆ ನಾಂದಿ ಹಾಡಿದೆ. ಈ ಸಮರದಲ್ಲಿ ರಾಹುಲ್ ಗಾಂಧಿ ಕೆಲವು ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಅಮಿತ್ ಶಾ ಹೇಳಿಕೆಗೆ ಟಾಂಗ್ ನೀಡಿದ್ದ ರಾಹುಲ್ ಗಾಂಧಿ ಸೋಮವಾರದಂದು ಖ್ಯಾತ ಉರ್ದು ಕವಿ ಮಿರ್ಜಾ ಘಾಲಿಬ್ ರವರ ಕವಿತೆಯ ಸಾಲುಗಳನ್ನು ಕೊಂಚ ತಿರುಚಿ ಶಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ರಾಜನಾಥ್ ಸಿಂಗ್​ ಅವರು ಸಹ ಕಣಕ್ಕಿಳಿದು ಅದೇ ಕವಿಯ ಮತ್ತೊಂದು ಕವಿತೆಯ ಸಾಲುಗಳನ್ನು ತಿರುಚಿ ಕಾಂಗ್ರೆಸ್ ಪಕ್ಷದ ಚಿಹ್ನೆಯಾದ ಹಸ್ತದ ಬಗ್ಗೆ ಪರೋಕ್ಷವಾಗಿ ಕುಟುಕಿದ್ದರು. ಇದಕ್ಕೆ ನೇರವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ‘ನಮ್ಮ ಪಕ್ಷದ ಚಿಹ್ನೆಯ ಬಗ್ಗೆ ಹೇಳಿಕೆ ನೀಡುವುದು ಮುಗಿದಿದ್ದರೆ, ಲಡಾಖ್​ನಲ್ಲಿ ಭಾರತದ ನೆಲವನ್ನು ಚೀನಾ ಆಕ್ರಮಿಸಿಕೊಂಡಿದ್ಯಾ? ಎಂಬುದಕ್ಕೆ ಉತ್ತರಿಸಿ’ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

Published On - 5:00 pm, Tue, 9 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us