AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡ್ಡು ಬೇಕಿದ್ರೆ ನೀನೆ ದುಡ್ಕೋ ಎಂದು ಅಪ್ಪ ಗದರಿದ್ದಕ್ಕೆ ಎಸ್​ಬಿಐ ದರೋಡೆಗೆ ಹೊರಟಿದ್ದ ವಿದ್ಯಾರ್ಥಿ

ದುಡ್ಡು ಬೇಕಿದ್ದರೆ ನೀನೆ ದುಡಿದುಕೋ ಎಂದು ತಂದೆ ಬುದ್ಧಿ ಮಾತು ಹೇಳಿದ್ದಕ್ಕೆ ಬಿಎಸ್​ಸಿ ವಿದ್ಯಾರ್ಥಿಯೊಬ್ಬ ಎಸ್​ಬಿಐಗೆ ಕನ್ನ ಹಾಕಲು ಹೊರಟ ಘಟನೆ ಕಾನ್ಪುರದಲ್ಲಿ ನಡೆದಿದೆ. ದುಷ್ಕರ್ಮಿಗಳು ಏಕಾಂಗಿಯಾಗಿ ಬ್ಯಾಂಕ್ ಲೂಟಿ ಮಾಡಿರುವ ವಿಡಿಯೋಗಳ ಮೇಲೆ ಆತ ಕಣ್ಣಿರಿಸಿದ್ದ, ಇದಾದ ಬಳಿಕ ಯೋಜನೆ ರೂಪಿಸಿ ದರೋಡೆ ಮಾಡಲು ಬ್ಯಾಂಕ್ ತಲುಪಿದ್ದ, ಆದರೆ ಅದಕ್ಕೂ ಮುನ್ನ ಬ್ಯಾಂಕ್ ನೌಕರರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಿಸ್ತೂಲ್, ಚಾಕು, ಸರ್ಜಿಕಲ್ ಬ್ಲೇಡ್ ಹಿಡಿದು ಸೈಕಲ್ ಮೇಲೆ ಬ್ಯಾಂಕ್ ದರೋಡೆಗೆ ಬಂದಿದ್ದ ಎನ್ನಲಾಗಿದೆ. ಸಿಕ್ಕಿಬಿದ್ದ ಬಳಿಕವೂ ಆತ ಒಂದು ಚೂರು ಪಶ್ಚಾತಾಪ ಪಡದೆ ದುರ್ವರ್ತನೆ ತೋರಿ ಜೈಲಿಗೆ ಹೋಗಿದ್ದಾನೆ.

ದುಡ್ಡು ಬೇಕಿದ್ರೆ ನೀನೆ ದುಡ್ಕೋ ಎಂದು ಅಪ್ಪ ಗದರಿದ್ದಕ್ಕೆ ಎಸ್​ಬಿಐ ದರೋಡೆಗೆ ಹೊರಟಿದ್ದ ವಿದ್ಯಾರ್ಥಿ
ಆರೋಪಿImage Credit source: Aaj Tak
ನಯನಾ ರಾಜೀವ್
|

Updated on: Jan 20, 2025 | 11:27 AM

Share

ಏನೋ ಕೋಪ, ಒತ್ತಡದಿಂದ ಕೆಲವೊಮ್ಮೆ ಪೋಷಕರು ಬೈದುಬಿಡುತ್ತಾರೆ, ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ತಪ್ಪುದಾರಿಗಿಳಿಯಬಾರದು. ದುಡ್ಡು ಬೇಕಿದ್ದರೆ ನೀನೇ ದುಡಿದುಕೋ ಎಂದು ತಂದೆ ಗದರಿದ್ದಕ್ಕೆ ಬಿಎಸ್​ಸಿ ವಿದ್ಯಾರ್ಥಿಯೊಬ್ಬ ಯೂಟ್ಯೂಬ್ ನೋಡಿಕೊಂಡು ಎಸ್​ಬಿಐಗೆ ಕನ್ನ ಹಾಕಲು ಯೋಜನೆ ರೂಪಿಸಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಈ ಘಟನೆ ಕಾನ್ಪುರದಲ್ಲಿ ನಡೆದಿದೆ,  ದುಷ್ಕರ್ಮಿಗಳು ಏಕಾಂಗಿಯಾಗಿ ಬ್ಯಾಂಕ್ ಲೂಟಿ ಮಾಡಿರುವ ವಿಡಿಯೋಗಳ ಮೇಲೆ ಆತ ಕಣ್ಣಿರಿಸಿದ್ದ, ಇದಾದ ಬಳಿಕ ಯೋಜನೆ ರೂಪಿಸಿ ದರೋಡೆ ಮಾಡಲು ಬ್ಯಾಂಕ್ ತಲುಪಿದ್ದ, ಆದರೆ ಅದಕ್ಕೂ ಮುನ್ನ ಬ್ಯಾಂಕ್ ನೌಕರರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಿಸ್ತೂಲ್, ಚಾಕು, ಸರ್ಜಿಕಲ್ ಬ್ಲೇಡ್ ಹಿಡಿದು ಸೈಕಲ್ ಮೇಲೆ ಬ್ಯಾಂಕ್ ದರೋಡೆಗೆ ಬಂದಿದ್ದ ಎನ್ನಲಾಗಿದೆ. ಸಿಕ್ಕಿಬಿದ್ದ ಬಳಿಕವೂ ಆತ ಒಂದು ಚೂರು ಪಶ್ಚಾತಾಪ ಪಡದೆ ದುರ್ವರ್ತನೆ ತೋರಿ ಜೈಲಿಗೆ ಹೋಗಿದ್ದಾನೆ.

ಕಾನ್ಪುರದಲ್ಲಿ, ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಯುವಕನೊಬ್ಬ ಬೈಸಿಕಲ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಘಟಂಪುರದ ಪತ್ತಾರ ಶಾಖೆಯ ಹೊರಗೆ ಬಂದಿದ್ದ. ಇದಾದ ಬಳಿಕ ಪಿಸ್ತೂಲ್, ಚಾಕು, ಕೊಡಲಿ ಮತ್ತು ಸರ್ಜಿಕಲ್ ಬ್ಲೇಡ್‌ನೊಂದಿಗೆ ಬ್ಯಾಂಕ್‌ಗೆ ನುಗ್ಗಿದ್ದಾನೆ. ಸಿಬಂದಿ ತಡೆದಾಗ ಆತ ಚಾಕುವಿನಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

ಇದಾದ ಬಳಿಕ ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ ಬ್ಯಾಂಕ್ ನೌಕರರು ಯುವಕನನ್ನು ಬಹಳ ಕಷ್ಟಪಟ್ಟು ನಿಯಂತ್ರಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರು ಬ್ಯಾಂಕ್ ಉದ್ಯೋಗಿಗಳು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಯುವಕನೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜ್ಞೆ ಬಂದ ನಂತರ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿ ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಲವಿಶ್ ಮಿಶ್ರಾ ಎಂಬ ಯುವಕ ಬಿಎಸ್ಸಿ ಮೂರನೇ ವರ್ಷದ ಜೊತೆಗೆ ಐಟಿಐ ಮಾಡುತ್ತಿದ್ದ. ಅವರು ತ್ವರಿತವಾಗಿ ಹಣ ಸಂಪಾದಿಸಲು ಬಯಸಿದ್ದ, ಆದ್ದರಿಂದ ಅವರು ಬ್ಯಾಂಕ್ ಅನ್ನು ದರೋಡೆ ಮಾಡಲು ಯೋಜಿಸಿದ್ದ.

ಮತ್ತಷ್ಟು ಓದಿ: ಮಂಗಳೂರು ಕೋಟೆಕಾರು ಬ್ಯಾಂಕ್​ ಕಳ್ಳತನ: ದರೋಡೆಕೋರರ ಚಲನವಲನ ಪತ್ತೆ

ಆರೋಪಿಯ ಹಿರಿಯ ಸಹೋದರ ಅಭಯ್ ಮಿಶ್ರಾ ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ತಂದೆ ಅವಧೇಶ್ ಮಿಶ್ರಾ ರೈತ. ಅವರದ್ದು ಶ್ರೀಮಂತ ಕುಟುಂಬ ಅಲ್ಲ. ಆದ್ದರಿಂದ ಮಗ ಪದೇ ಪದೆ ಹಣ ಕೇಳಿದಾಗ ಹಣ ಬೇಕಿದ್ರೆ ನೀನೆ ದುಡ್ಕೋ ಆಗ ಹಣದ ಬೆಲೆ ಗೊತ್ತಾಗುತ್ತೆ ಎಂದು ತಂದೆ ಗದರಿದ್ದರಂತೆ. ಹಣ ಗಳಿಸಲು ಶಾರ್ಟ್ ಕಟ್ ವಿಧಾನವನ್ನು ಅಳವಡಿಸಿಕೊಳ್ಳಲು ಯೋಚಿಸಿದ ಯುವಕ ಯೂಟ್ಯೂಬ್ ನಲ್ಲಿ ಬ್ಯಾಂಕ್ ದರೋಡೆಯ ವಿಡಿಯೋಗಳನ್ನು ವೀಕ್ಷಿಸತೊಡಗಿದ್ದ. ಕಳೆದ ಒಂದು ವರ್ಷದಿಂದ ಯೂಟ್ಯೂಬ್ ನಲ್ಲಿ ಬ್ಯಾಂಕ್ ದರೋಡೆಯ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ.

ಗಾರ್ಡ್‌ನ ಮೇಲೆ ಮೊದಲೇ ದಾಳಿ ಮಾಡಿದರೆ ಇಡೀ ಬ್ಯಾಂಕ್​ನಲ್ಲಿದ್ದವರು ಗಾಬರಿಗೊಳ್ಳುತ್ತಾರೆ ಎಂಬುದು ಯೋಜನೆಯಾಗಿತ್ತು. ಅದೇ ವೇಳೆ ಆರೋಪಿಯು ತನ್ನ ಬೆನ್ನಿನ ಮೇಲೆ ಚೀಲವನ್ನು ನೇತುಹಾಕಿಕೊಂಡಿದ್ದನು, ಅದರಲ್ಲಿ ಹಣವನ್ನು ತುಂಬಿ ತೆಗೆದುಕೊಂಡು ಹೋಗಬೇಕೆಂದು ಬಯಸಿದ್ದನು. ಆದರೆ, ಅದಕ್ಕೂ ಮುನ್ನ ಕಾವಲುಗಾರ ಶೌರ್ಯ ಮೆರೆದು ಬ್ಯಾಂಕ್ ಉದ್ಯೋಗಿಗಳ ನೆರವಿನಿಂದ ಆತನನ್ನು ನಿಯಂತ್ರಿಸಿದ್ದರು. ಆರೋಪಿ ಯುವಕ ಶುಕ್ರವಾರವೂ ಒಂದು ದಿನ ಮುಂಚಿತವಾಗಿ ಬ್ಯಾಂಕ್‌ಗೆ ಬಂದಿದ್ದರು, ಆದರೆ ಹೆಚ್ಚಿನ ಜನಸಂದಣಿಯಿಂದಾಗಿ ಆ ದಿನ ಹಿಂತಿರುಗಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್