AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಡಿಜೆ ಸದ್ದಿಗೆ ಸ್ಟೆಪ್ಸ್ ಹಾಕಿದ್ದ ಮದುಮಗ ಬೆಳಗ್ಗೆ ದಾರುಣ ಸಾವು!

ಹೈದರಾಬಾದ್: ಡಿಜೆ ಸದ್ದಿಗೆ ಹೆಜ್ಜೆ ಹಾಕ್ತಿದ್ದಾರೆ. ಫುಲ್ ಖುಷಿ.. ಸಿಕ್ಕಾಪಟ್ಟೆ ಜೋಷ್.. ಮಿರ ಮಿರ ಮಿಂಚೋ ಲೈಟ್​​ ನಡುವೆ ನವದಂಪತಿ ಹಾಕ್ತಿರೋ ಸ್ಟೆಪ್​​ಗೆ ಶಿಳ್ಳೆ.. ಚಪ್ಪಾಳೆ.. ಕೇಕೆ.. ಆದ್ರೆ, ಇದೇ ಖುಷಿ.. ಇದೇ ಸಂತೋಷ ಅಲ್ಲೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಯಾರೂ ಊಹಿಸಲಾಗದ ಕಣ್ಣೀರ ಕಂಪನವೇ ಸೃಷ್ಟಿಯಾಗಿದೆ. ಯೆಸ್​.. ಅಂದು ಖುಷಿಯಲ್ಲಿದ್ದವರೂ ಕಣ್ಣೀರ ಕೋಡಿಯಲ್ಲಿ ಬೆಂದು ಹೋಗಿದ್ದಾರೆ. ಅಯ್ಯೋ. ಎಂಥಾ ಅನಾಹುತ ಆಗೋಯ್ತಲ್ಲ ಅಂತಾ ಚೀರಾಡ್ತಿದ್ದಾರೆ. ಕೆಲವರಂಥೂ ನಡುಗಿ ಹೋಗಿದ್ದಾರೆ. ಅದಕ್ಕೆ ಕಾರಣ ತೆಲಂಗಾಣದಲ್ಲಿ ನಡೆದ ಮದುಮಗನ […]

ರಾತ್ರಿ ಡಿಜೆ ಸದ್ದಿಗೆ ಸ್ಟೆಪ್ಸ್ ಹಾಕಿದ್ದ ಮದುಮಗ ಬೆಳಗ್ಗೆ ದಾರುಣ ಸಾವು!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 16, 2020 | 1:08 PM

Share

ಹೈದರಾಬಾದ್: ಡಿಜೆ ಸದ್ದಿಗೆ ಹೆಜ್ಜೆ ಹಾಕ್ತಿದ್ದಾರೆ. ಫುಲ್ ಖುಷಿ.. ಸಿಕ್ಕಾಪಟ್ಟೆ ಜೋಷ್.. ಮಿರ ಮಿರ ಮಿಂಚೋ ಲೈಟ್​​ ನಡುವೆ ನವದಂಪತಿ ಹಾಕ್ತಿರೋ ಸ್ಟೆಪ್​​ಗೆ ಶಿಳ್ಳೆ.. ಚಪ್ಪಾಳೆ.. ಕೇಕೆ.. ಆದ್ರೆ, ಇದೇ ಖುಷಿ.. ಇದೇ ಸಂತೋಷ ಅಲ್ಲೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಯಾರೂ ಊಹಿಸಲಾಗದ ಕಣ್ಣೀರ ಕಂಪನವೇ ಸೃಷ್ಟಿಯಾಗಿದೆ.

ಯೆಸ್​.. ಅಂದು ಖುಷಿಯಲ್ಲಿದ್ದವರೂ ಕಣ್ಣೀರ ಕೋಡಿಯಲ್ಲಿ ಬೆಂದು ಹೋಗಿದ್ದಾರೆ. ಅಯ್ಯೋ. ಎಂಥಾ ಅನಾಹುತ ಆಗೋಯ್ತಲ್ಲ ಅಂತಾ ಚೀರಾಡ್ತಿದ್ದಾರೆ. ಕೆಲವರಂಥೂ ನಡುಗಿ ಹೋಗಿದ್ದಾರೆ. ಅದಕ್ಕೆ ಕಾರಣ ತೆಲಂಗಾಣದಲ್ಲಿ ನಡೆದ ಮದುಮಗನ ದಾರುಣ ಸಾವು.

ಡಿಜೆ ಸದ್ದಿಗೆ ಸ್ಟೆಪ್​.. ಮದುಮಗನ ದಾರುಣ ಸಾವು! ಇದೇ ಫೆಬ್ರವರಿ 14.. ತೆಲಂಗಾಣದ ನಿಜಾಮಾಬಾದ್ ಜಿಲ್ಲೆ ಬೋಧನ ಪಟ್ಟಣದಲ್ಲಿ ಗಣೇಶ್ ಹಾಗೂ ಸ್ವಪ್ನ ಸಪ್ತಪದಿ ತುಳಿದಿದ್ರು. ಮದುವೆ ಸಮಾರಂಭ ಮುಗಿದ ಬಳಿಕ ಮೆರವಣಿಗೆ ಕೂಡ ಮಾಡಿದ್ರು. ಅದೇ ದಿನ ರಾತ್ರಿ ಡಿಜೆ ಹಾಡಿನೊಂದಿಗೆ ನೃತ್ಯ ಸಹ ಆಯೋಜಿಸಿದ್ರು. ಈ ವೇಳೆ ಸಿಕ್ಕಾಪಟ್ಟೆ ಖುಷಿಯಲ್ಲಿದ್ದ ಮದುಮಗ ಗಣೇಶ್ ಡಿಜೆ ಸದ್ದಿಗೆ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದ.

ಶುಕ್ರವಾರ ಖುಷಿ ಖುಷಿಯಲ್ಲೇ ಇದ್ದ ಗಣೇಶ್ ಶನಿವಾರ ಬೆಳಗ್ಗೆ ಆಗೋವಷ್ಟರಲ್ಲಿ ಉಸಿರು ನಿಲ್ಲಿಸಿದ್ದಾನೆ. ಶುಕ್ರವಾರ ಸಿಕ್ಕಾಪಟ್ಟೆ ನೃತ್ಯ ಮಾಡಿ ದಣಿದಿದ್ದ ಗಣೇಶ್ ಮೃತಪಟ್ಟಿದ್ದಾನೆ. ಈ ಅಘಾತದ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಬಾಳಿ ಬದುಕಬೇಕಾಗಿದ್ದ ಮನೆ ಮಗನ ಕಳೆದುಕೊಂಡು ಕುಟುಂಬಕ್ಕೆ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ.

ಇನ್ನು, ಡಿಜೆ ಸೌಂಡ್​​ಗೆ ಜೋಷ್​​ನಲ್ಲೇ ಕುಣಿದಿದ್ದ ಗಣೇಶ್​ಗೆ ಏನೋ ಆಯಾಸ, ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆತನನ್ನು ನಿಜಾಮಾಬಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಣೇಶ್ ಹೃದಯಾಘಾತದಿಂದ ಮೃತಪಟ್ಟಿರೋದಾಗಿ ವೈದ್ಯರು ಸೂಚಿಸಿದ್ದಾರಂತೆ. ಈ ಸಾವಿನ ಸುದ್ದಿ ಕೇಳಿ ಎಲ್ಲೆಲ್ಲೂ ದುಃಖದ ಕಾರ್ಮೋಡ ಆವರಿಸಿದೆ.

ಒಟ್ನಲ್ಲಿ ಕಲ್ಯಾಣ ಮಂಟಪದಲ್ಲೇ ಮಧುಮಗನ ಸಾವು ಸಂಭವಿಸಿರೋದು ತೆಲಂಗಾಣದಾದ್ಯಂತ ಚರ್ಚೆಗೂ ಗ್ರಾಸವಾಗಿದೆ. ಆರೋಗ್ಯವಾಗಿದ್ದ ಗಣೇಶ್ ಸಾವಿನ ಸುತ್ತ ಹಲವು ಅನುಮಾನ ಮೂಡ್ತಿದೆ. ಅದೇನೆ ಇರ್ಲಿ ಮದುಮಗನ ಸಾವಿನ ಅಘಾತ ಅರಗಿಸಿಕೊಳ್ಳಲಾಗದಂತಾಗಿದೆ. ಎರಡೂ ಕುಟುಂಬಗಳು ಅಯ್ಯೋ ದೇವರ ನಿನಗೆ ಕರುಣ ಇಲ್ವಾ ಅಂತಾ ಕಣ್ಣೀರಿಡ್ತಿದ್ದಾರೆ.

Published On - 1:07 pm, Sun, 16 February 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!