AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್ ಹುಡುಕೋಕೆ ಹೋಗಿ ಸಿಕ್ತು ಕಾರು, ತೆಲಂಗಾಣ ಶಾಸಕನ ಸಂಬಂಧಿಕರ 3 ಮೃತದೇಹ ಪತ್ತೆ

ಹೈದರಾಬಾದ್: ಎಲ್ರೂ ಶಾಕ್ ಆಗಿದ್ದಾರೆ. ನಾಲೆ ಪಕ್ಕದಲ್ಲಿ ನಿಂತಿರೋರು ನಡುಗಿ ಹೋಗಿದ್ದಾರೆ. ಕೆಲವರು ಮೂಗು ಮುಚ್ಕೊಂಡು ಒಡಾಡ್ತಿದ್ದಾರೆ. ಕ್ರೇನ್​​ನಲ್ಲಿ ಕಾರನ್ನ ಮೇಲೆತ್ತಿ ಇಳಿಸ್ತಿದ್ರೆ, ಪೊಲೀಸ್ರು ಇಂಚಿಂಚು ಜಾಲಾಡ್ತಿದ್ದಾರೆ. ಅಲ್ಲೊಂದು ರಾಜಕಾರಣಿ ಕಾರು ಕೂಡ ಸೈಲೆಂಟಾಗಿ ಎಂಟ್ರಿ ಕೊಟ್ಟಿದೆ. ತೆಲಂಗಾಣದ ಕರೀಂನಗರದಲ್ಲಿರೋ ಕಾಕತೀಯ ಕಾಲುವೆ ಯಾವಾಗ್ಲೂ ಮೈದುಂಬಿ ಹರಿಯುತ್ತಿತ್ತು. ಆದ್ರೆ, ಅವತ್ತು ನೀರು ಅಲ್ಪಮಟ್ಟಿಗೆ ಕಡಿಮೆಯಾಗಿತ್ತು. ಯಾಕಂದ್ರೆ, ಬೈಕ್ ಅಪಘಾತದ ಪ್ರಕರಣದ ತನಿಖೆಗೆ ಅಂತ ಪೊಲೀಸ್ರು ಎಂಟ್ರಿ ಕೊಟ್ಟಿದ್ರು. ಕಾಲುವೆ ನೀರನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಿಸಿದ್ರು. ಆದ್ರೆ, […]

ಬೈಕ್ ಹುಡುಕೋಕೆ ಹೋಗಿ ಸಿಕ್ತು ಕಾರು, ತೆಲಂಗಾಣ ಶಾಸಕನ ಸಂಬಂಧಿಕರ 3 ಮೃತದೇಹ ಪತ್ತೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Feb 18, 2020 | 7:59 AM

Share

ಹೈದರಾಬಾದ್: ಎಲ್ರೂ ಶಾಕ್ ಆಗಿದ್ದಾರೆ. ನಾಲೆ ಪಕ್ಕದಲ್ಲಿ ನಿಂತಿರೋರು ನಡುಗಿ ಹೋಗಿದ್ದಾರೆ. ಕೆಲವರು ಮೂಗು ಮುಚ್ಕೊಂಡು ಒಡಾಡ್ತಿದ್ದಾರೆ. ಕ್ರೇನ್​​ನಲ್ಲಿ ಕಾರನ್ನ ಮೇಲೆತ್ತಿ ಇಳಿಸ್ತಿದ್ರೆ, ಪೊಲೀಸ್ರು ಇಂಚಿಂಚು ಜಾಲಾಡ್ತಿದ್ದಾರೆ. ಅಲ್ಲೊಂದು ರಾಜಕಾರಣಿ ಕಾರು ಕೂಡ ಸೈಲೆಂಟಾಗಿ ಎಂಟ್ರಿ ಕೊಟ್ಟಿದೆ.

ತೆಲಂಗಾಣದ ಕರೀಂನಗರದಲ್ಲಿರೋ ಕಾಕತೀಯ ಕಾಲುವೆ ಯಾವಾಗ್ಲೂ ಮೈದುಂಬಿ ಹರಿಯುತ್ತಿತ್ತು. ಆದ್ರೆ, ಅವತ್ತು ನೀರು ಅಲ್ಪಮಟ್ಟಿಗೆ ಕಡಿಮೆಯಾಗಿತ್ತು. ಯಾಕಂದ್ರೆ, ಬೈಕ್ ಅಪಘಾತದ ಪ್ರಕರಣದ ತನಿಖೆಗೆ ಅಂತ ಪೊಲೀಸ್ರು ಎಂಟ್ರಿ ಕೊಟ್ಟಿದ್ರು. ಕಾಲುವೆ ನೀರನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಿಸಿದ್ರು.

ಆದ್ರೆ, ಬೈಕ್ ಆ್ಯಕ್ಸಿಡೆಂಟ್ ಪ್ರಕರಣ ಬೆನ್ನು ಹತ್ತಿದ್ದ ಖಾಕಿ ಪಡೆಗೆ ಬಿಗ್ ಶಾಕ್ ಕಾದಿತ್ತು. ಅದೇನಂದ್ರೆ ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿತ್ತು. ಗುರುತೇ ಸಿಗದಷ್ಟು ರೇಂಜಿಗೆ ಕೊಳೆತ್ತಿದ್ದ ಆ ಮೂರು ಡೆಡ್ ಬಾಡಿಗಳನ್ನ ಕಂಡು ಎಲ್ರೂ ನಡುಗಿ ಹೋಗಿದ್ರು.

ಶಾಸಕರ ಸಂಬಂಧಿಕರ ಮೃತದೇಹಗಳು ನಾಲೆಯಲ್ಲಿ ಪತ್ತೆ..! ಬೈಕ್ ಅಪಘಾತದ ಕೇಸ್ ಬೆನ್ನು ಹತ್ತಿದ್ದ ತೆಲಂಗಾಣ ಪೊಲೀಸ್ರಿಗೆ ಯಾವಾಗ ಈ ಭಯಾನಕ ದೃಶ್ಯ ಕಣ್ಣಿಗೆ ಬಿತ್ತೋ ಕ್ರೇನ್ ತರಿಸಿ ಕಾರನ್ನ ಮೇಲಕ್ಕೆ ಎತ್ತಿಸಿದ್ರು. ಆದ್ರೆ, ಕಾರಿನಲ್ಲಿದ್ದ 3 ಮೃತದೇಹಗಳು ಯಾರದ್ದು ಅನ್ನೋದನ್ನ ಪತ್ತೆ ಹಚ್ಚೋದು ಸವಾಲಾಗಿತ್ತು.

ಅದ್ಯಾವಾಗ ಕಾರಿನ ನಂಬರ್ ಪ್ಲೇಟ್ ವಿವರ ಸರ್ಚ್ ಮಾಡಿದ್ರೋ ಮೃತಪಟ್ಟವರು ಶಾಸಕರೊಬ್ಬರ ಸಂಬಂಧಿಕರು ಅನ್ನೋ ಬೆಚ್ಚಿ ಬೀಳಿಸೋ ಸಂಗತಿ ಬಯಲಾಗಿದೆ. ಮೃತರೆಲ್ಲರೂ ಕರೀಮ್​​ನಗರ ಜಿಲ್ಲೆಯ ಶಾಸಕ ದಾಸರಿ ಮನೋಹರರೆಡ್ಡಿ ಸಹೋದರಿ ರಾಧಿಕಾ, ಆಕೆ ಪತಿ ನಾಗರೆಡ್ಡಿ ಸತ್ಯನಾರಾಯಣ ಹಾಗೂ ಪುತ್ರಿ ವಿನಯಶ್ರೀ ಅನ್ನೋ ಅಸಲಿ ವಿಚಾರ ಗೊತ್ತಾಗಿದೆ. ಈ ಸಾವಿನ ಸುತ್ತ ಅನುಮಾನಗಳ ಹುತ್ತ ಹರಿದಾಡ್ತಿದೆ.

ಇನ್ನು ಜನವರಿ 27ರಂದು ಹೈದರಾಬಾದ್​​​ನಿಂದ ಕರೀಂನಗರಕ್ಕೆ ಮೂರು ಜನ ಹೊರಟಿದ್ರಂತೆ. ಆದ್ರೆ, ದಿಢೀರ್ ನಾಪತ್ತೆಯಾಗಿದ್ರೂ ಯಾರೂ ಕೂಡ ಲಿಖಿತ ದೂರು ನೀಡಿರ್ಲಿಲ್ವಂತೆ. ಆದ್ರೆ ಅಂದಾಜು 20 ದಿನಗಳ ಬಳಿಕ ಕಾಕತೀಯ ಕಾಲುವೆಯಲ್ಲಿ ಈ ಮೂವರ ಮೃತದೇಹ ಪತ್ತೆಯಾಗಿರೋದು ಸಾಕಷ್ಟು ಅನುಮಾನ ಸೃಷ್ಟಿಸಿದೆ. ಇದು ಅಪಘಾತವೋ.. ಕೊಲೆಯೋ ಅನ್ನೋದು ನಿಗೂಢವಾಗಿದೆ.

ಒಟ್ನಲ್ಲಿ ನಾರಾಯಣರೆಡ್ಡಿ-ರಾಧಿಕಾ ದಂಪತಿ ಪುತ್ರ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ರಂತೆ. ಆದ್ರೀಗ, ಈ ಮೂವರ ಮೃತದೇಹ ನಾಲೆಯಲ್ಲಿ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅದ್ರಲ್ಲೂ ಶಾಸಕರ ಸಹೋದರಿ ಮತ್ತವರ ಕುಟುಂಬ ದುರಂತಮಯ ಅಂತ್ಯಕಂಡಿರೋದು ತೆಲಂಗಾಣವನ್ನೇ ಬೆಚ್ಚಿ ಬೀಳಿಸಿದೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ