AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಮುಖ್ಯಮಂತ್ರಿ ಕೈಗೆ ಕಬ್ಬಿಣದ ರಾಡ್​ನಿಂದ ಹೊಡೆಯುವ ವಿಡಿಯೋ ವೈರಲ್, ರಾಜ್ಯದ ಏಳಿಗೆಗೆ ಈ ಸೇವೆ

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವೀಡಿಯೊ. ಈ ವೀಡಿಯೋದಲ್ಲಿ ಸಿಎಂ ಭೂಪೇಶ್ ಬಘೇಲ್ ಕೈಗೆ ಒಂದು ಕಬ್ಬಿಣದ ರಾಡ್​ನಿಂದ ಹೊಡೆಯುತ್ತಿರುವುದುನ್ನು ಕಾಣಬಹುದು.

Video Viral: ಮುಖ್ಯಮಂತ್ರಿ ಕೈಗೆ ಕಬ್ಬಿಣದ ರಾಡ್​ನಿಂದ ಹೊಡೆಯುವ ವಿಡಿಯೋ ವೈರಲ್, ರಾಜ್ಯದ ಏಳಿಗೆಗೆ ಈ ಸೇವೆ
Chief Minister
TV9 Web
| Edited By: |

Updated on:Oct 25, 2022 | 12:00 PM

Share

ಛತ್ತೀಸ್‌ಗಢ: ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವೀಡಿಯೊ. ಈ ವೀಡಿಯೋದಲ್ಲಿ ಸಿಎಂ ಭೂಪೇಶ್ ಬಘೇಲ್ ಕೈಗೆ ಒಂದು ಕಬ್ಬಿಣದ ರಾಡ್​ನಿಂದ ಹೊಡೆಯುತ್ತಿರುವುದುನ್ನು ಕಾಣಬಹುದು. ಈ ವೀಡಿಯೋ ದುರ್ಗ್ ಜಿಲ್ಲೆಯಲ್ಲಿ ದೀಪಾವಳಿ ಪ್ರಯುಕ್ತ ನಡೆಯುತ್ತಿರುವ ‘ಗೌರಿ-ಗೌರ ಪೂಜೆ’ ಸಂದರ್ಭದಲ್ಲಿ ಸಿಎಂ ಭೂಪೇಶ್ ಬಘೇಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಈ ಸಮಯದಲ್ಲಿ ಕೈಗೆ ಕಬ್ಬಿಣದ ರಾಡ್ ಹೊಡೆಯುವ ಪದ್ಧತಿ ಇದೆ. ಈ ಆಚರಣೆಯಲ್ಲಿ ಅವರ ಕೈ ಮಣಿಕಟ್ಟಿನ ಮೇಲೆ ಭಾರಿ ಪೆಟ್ಟು ಬಿದ್ದಿದೆ.

ಈ ಆಚರಣೆ ಭಾರಿ ಜನರು ಸೇರಿದ್ದರು. ಇದರ ಮಧ್ಯೆ ಸಿಎಂ ಭೂಪೇಶ್ ಬಘೇಲ್ ಕೈ ಎತ್ತಿ ನಿಂತಿದ್ದರು, ಮತ್ತೊಬ್ಬ ವ್ಯಕ್ತಿ ವೇಗವಾಗಿ ಮಣಿಕಟ್ಟಿಗೆ ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವ್ಯಕ್ತಿ ಸಿಎಂ ಭೂಪೇಶ್ ಬಘೇಲ್‌ಗೆ ಒಂದಲ್ಲ ಐದು ರಾಡ್‌ಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುತ್ತಾನೆ. ಸಿಎಂ ಬಾಘೆಲ್ ಪ್ರತಿ ವರ್ಷ ಈ ಸಂಪ್ರದಾಯದ ಭಾಗಿಯಾಗುತ್ತಾರೆ. ಇಂದು ದುರ್ಗದಲ್ಲಿ ಗೌರ ಗೌರಿ ಪೂಜೆಯಲ್ಲಿ ಸಿಎಂ ಭೂಪೇಶ್ ಬಾಘೇಲ್ ಪಾಲ್ಗೊಂಡಿದ್ದರು. ಗೌರ ಗೌರಿ ಪೂಜೆಯ ಸಂದರ್ಭದಲ್ಲಿ ಈ ಕಬ್ಬಿಣದ ರಾಡ್​ನಿಂದ ಕೈಗೆ ಹೊಡೆದರೆ ಕಷ್ಟಗಳು ದೂರವಾಗುತ್ತದೆ ಮತ್ತು ರಾಜ್ಯವೂ ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಸಂಪ್ರದಾಯದ ಪ್ರಕಾರ ಸಿಎಂ ಬಘೇಲ್ ಅವರು ನೋವು ಅನಿಭವಿಸಿದರು ರಾಜ್ಯ ಒಳಿತಿಗಾಗಿ ನೋವನ್ನು ಸಹಿಸಿಕೊಂಡರು. ರಾಜ್ಯದ ಏಳಿಗೆಗಾಗಿ ಸಿಎಂ ಬಘೇಲ್ ಪ್ರತಿ ವರ್ಷ ಈ ಸಂಪ್ರದಾಯದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿ ವರ್ಷ ಗೌರಿ-ಗೌರ ಪೂಜೆ ಸಂದರ್ಭದಲ್ಲಿ ಇಲ್ಲಿಗೆ ಬರಲು ಸಂತೋಷ- ಬಾಘೇಲ್

ದುರ್ಗಕ್ಕೆ ಆಗಮಿಸಿದ ಸಿಎಂ ಭೂಪೇಶ್ ಬಘೇಲ್ ಕೂಡ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಿ.ಎಂ.ಬಘೇಲ್ ಮಾತನಾಡಿ, ದೇವರು ನಿಮ್ಮ ಜೀವನದಲ್ಲಿ ಪ್ರತಿ ವರ್ಷ ಇಂತಹ ಸಂತೋಷವನ್ನು ತರಲಿ, ನಿಮ್ಮ ಜೀವನವು ಹೀಗೆಯೇ ಬೆಳಗಲಿ. ಪ್ರತಿ ವರ್ಷ ‘ಗೌರಿ–ಗೌರ ಪೂಜೆ’ಯಂದು ಇಲ್ಲಿಗೆ ಬರುವುದರಿಂದ ಸಂತಸವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಗೌರ ಗೌರಿ ಪೂಜೆಯ ಜತೆಗೆ ಸಿಎಂ ನಗರ ಪ್ರದಕ್ಷಿಣೆಯನ್ನೂ ಮಾಡಿದರು. ಇದಕ್ಕೂ ಮುನ್ನ ದುರ್ಗದಲ್ಲಿ ಕಾರ್ಯಕ್ರಮದ ಆಯೋಜಕರು ಸಿಎಂ ಬಘೇಲ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.

Published On - 12:00 pm, Tue, 25 October 22

Follow Us
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್